ಪ್ರಧಾನ ಮಂತ್ರಿಯವರ ಕಛೇರಿ

ಪೋಲೆಂಡ್ ಮತ್ತು ನವನಗರ ನಡುವಿನ ಬಲವಾದ ಸಂಬಂಧದ ಬಗ್ಗೆ ಬೆಳಕು ಚೆಲ್ಲಿದ ಶ್ರೀ ಸುಜನ್ ಆರ್ ಚಿನೋಯ್ ಬರಹ: ಪ್ರಧಾನ ಮಂತ್ರಿ 

Posted On: 22 AUG 2024 9:41PM by PIB Bengaluru

ಪೋಲೆಂಡ್ ದೇಶ ಜಾಮ್ ಸಾಹೇಬ್ ದಿಗ್ವಿಜಯಸಿಂಹ ರಂಜಿತ್ ಸಿನ್ಹ ಜಡೇಜಾ ಅವರನ್ನು ಬಹಳವಾಗಿ ಗೌರವಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶ್ರೀ ಸುಜನ್ ಆರ್ ಚಿನೋಯ್ ಅವರು ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಬರೆದ ಲೇಖನವನ್ನು ಪ್ರಸ್ತಾಪಿಸಿರುವ ಪ್ರಧಾನಿ ಮೋದಿ, ಇದು ಪೋಲೆಂಡ್ ಮತ್ತು ನವನಗರದ ನಡುವಿನ ಬಲವಾದ ಸಂಬಂಧದ ಬಗ್ಗೆ ವಿವರಿಸುತ್ತದೆ ಎಂದಿದ್ದಾರೆ. ಶ್ರೀ ಸುಜನ್ ಆರ್ ಚಿನೋಯ್ ಅವರು ಮಾಜಿ ರಾಯಭಾರಿಯಾಗಿದ್ದವರು. 

ಸುಜನ್ ಅವರ ಲೇಖನ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿಗಳು,

“ಪೋಲೆಂಡ್ ದೇಶದ ಜನತೆ ಜಾಮ್ ಸಾಹೇಬ್ ದಿಗ್ವಿಜಯ್‌ಸಿಂಹ ರಂಜಿತ್‌ಸಿಂಹ ಜಡೇಜಾ ಅವರನ್ನು ಬಹಳವಾಗಿ ಗೌರವಿಸುತ್ತಾರೆ. ಈ ಲೇಖನದಲ್ಲಿ, ಶ್ರೀ ಸುಜನ್ ಅವರು ಪೋಲೆಂಡ್ ಮತ್ತು ನವನಗರ ನಡುವಿನ ಬಲವಾದ ಸಂಬಂಧದ ಬಗ್ಗೆ ಬೆಳಕು ಚೆಲ್ಲಿದ್ದಾರೆ.' ಎಂದು ಬರೆದಿದ್ದಾರೆ.

 

 

*****



(Release ID: 2048057) Visitor Counter : 9