ಪ್ರಧಾನ ಮಂತ್ರಿಯವರ ಕಛೇರಿ

ಬಂಡೀಪುರ ಮತ್ತು ಮುದುಮಲೈ ಹುಲಿ ಮೀಸಲು ಪ್ರದೇಶಗಳ ಮುಖ್ಯಾಂಶಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ


ಹುಲಿ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬರ ಕಠಿಣ ಪರಿಶ್ರಮವನ್ನು ಶ್ಲಾಘಿಸಿದರು

Posted On: 09 APR 2023 10:31PM by PIB Bengaluru

ಪ್ರಧಾನಮಂತ್ರಿ ಅವರು ಬಂಡೀಪುರ ಮತ್ತು ಮುದುಮಲೈ ಹುಲಿ ಮೀಸಲು ಪ್ರದೇಶಗಳಿಗೆ ತಾವು ನೀಡಿದ ಭೇಟಿಯ ಮುಖ್ಯಾಂಶಗಳನ್ನು ಹಂಚಿಕೊಂಡಿದ್ದಾರೆ. ಎಲ್ಲಾ ಅರಣ್ಯ ಅಧಿಕಾರಿಗಳು, ಕಾವಲುಗಾರರು, ಹುಲಿ ಮೀಸಲು ಮುಂಚೂಣಿ ಸಿಬ್ಬಂದಿ ಮತ್ತು ಹುಲಿ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಎಲ್ಲರ ಕಠಿಣ ಪರಿಶ್ರಮವನ್ನು ಅವರು ಶ್ಲಾಘಿಸಿದರು.

ಸರಣಿ ಟ್ವೀಟ್ ಗಳಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ;

"ಒಂದು ವಿಶೇಷ ದಿನ, ಸಸ್ಯ ಮತ್ತು ಪ್ರಾಣಿ ವೈವಿಧ್ಯತೆಯ ಮಧ್ಯೆ ಮತ್ತು ಹುಲಿಗಳ ಜನಸಂಖ್ಯೆಯ ಬಗ್ಗೆ ಒಳ್ಳೆಯ ಸುದ್ದಿ ... ಇಂದಿನಿಂದ ಮುಖ್ಯಾಂಶಗಳು ಇಲ್ಲಿವೆ.

“ ನಾನು ಬಂಡೀಪುರ ಮತ್ತು ಮುದುಮಲೈ ಹುಲಿ ಮೀಸಲು ಪ್ರದೇಶಗಳಿಗೆ ಸ್ಮರಣೀಯ ಭೇಟಿಯನ್ನು ಮುಕ್ತಾಯಗೊಳಿಸುತ್ತಿರುವಾಗ, ಎಲ್ಲಾ ಅರಣ್ಯ ಅಧಿಕಾರಿಗಳು, ಕಾವಲುಗಾರರು, ಹುಲಿ ಮೀಸಲು ಮುಂಚೂಣಿ ಸಿಬ್ಬಂದಿ ಮತ್ತು ಹುಲಿ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಎಲ್ಲರ ಕಠಿಣ ಪರಿಶ್ರಮವನ್ನು ನಾನು ಶ್ಲಾಘಿಸಲು ಬಯಸುತ್ತೇನೆ. ಪದಗಳು ಅವರ ಉತ್ಸಾಹ ಮತ್ತು ಪ್ರಯತ್ನಕ್ಕೆ ನ್ಯಾಯ ಒದಗಿಸಲು ಸಾಧ್ಯವಿಲ್ಲ,’’ ಎಂದು ಹೇಳಿದ್ದಾರೆ.

***

 

 



(Release ID: 1922468) Visitor Counter : 93