|
ಕ್ರಮ ಸಂಖ್ಯೆ
|
ಎಂ.ಒ.ಯು. /ಒಪ್ಪಂದ /ಕ್ರಿಯಾ ಯೋಜನೆಯ ಹೆಸರು
|
ವಿವರಗಳು
|
ಭೂತಾನದ ವತಿಯಿಂದ ಭಾಗಿಯಾದ ಪ್ರತಿನಿಧಿ
|
ಭಾರತದ ವತಿಯಿಂದ ಭಾಗಿಯಾದ ಪ್ರತಿನಿಧಿ
|
|
1
|
ಭಾರತದಿಂದ ಭೂತಾನ್ಗೆ ಪೆಟ್ರೋಲಿಯಂ, ತೈಲ, ಲೂಬ್ರಿಕಂಟ್ಗಳು (ಪಿಒಎಲ್) ಮತ್ತು ಸಂಬಂಧಿತ ಉತ್ಪನ್ನಗಳ ಸಾಮಾನ್ಯ ಪೂರೈಕೆಗಾಗಿ ತಿಳಿವಳಿಕಾ ಒಡಂಬಡಿಕೆ
|
ಈ ತಿಳಿವಳಿಕಾ ಒಡಂಬಡಿಕೆ ಪೆಟ್ರೋಲಿಯಂ, ತೈಲ, ಲೂಬ್ರಿಕಂಟ್ಗಳಿಗೆ ಸಂಬಂಧಿಸಿದ ವಸ್ತುಗಳ ಪಟ್ಟಿಯನ್ನು ಒದಗಿಸುತ್ತದೆ. ಭಾರತ ಸರ್ಕಾರವು ಒಪ್ಪಿದ ಪ್ರವೇಶ/ನಿರ್ಗಮನ ಬಿಂದುಗಳ ಮೂಲಕ ಭೂತಾನ್ಗೆ ತನ್ನ ಸರಬರಾಜನ್ನು ಸುಗಮಗೊಳಿಸುತ್ತದೆ.
|
ಶ್ರೀಮತಿ ತಾಶಿ ವಾಂಗ್ಮೋ,
ಕಾರ್ಯದರ್ಶಿ, ಕೈಗಾರಿಕಾ ವಾಣಿಜ್ಯ ಮತ್ತು ಉದ್ಯೋಗ ಸಚಿವಾಲಯ, ಆರ್.ಜಿ.ಒ.ಬಿ
|
ಶ್ರೀ ಸುಧಾಕರ್ ದಲೇಲಾ,
ಭೂತಾನ್ ಸಾಮ್ರಾಜ್ಯಕ್ಕೆ ಭಾರತದ ರಾಯಭಾರಿ
|
|
2
|
ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್.ಎಸ್.ಎಸ್.ಎ.ಐ.) ದಿಂದ ಭೂತಾನ್ ಆಹಾರ ಮತ್ತು ಔಷಧ ಪ್ರಾಧಿಕಾರ (ಬಿ.ಎಪ್.ಡಿ.ಎ.) ನಡೆಸುವ ಅಧಿಕೃತ ನಿಯಂತ್ರಣವನ್ನು ಮಾನ್ಯ ಮಾಡುವ ಒಪ್ಪಂದ.
|
ಈ ಒಪ್ಪಂದವು ಭಾರತ ಮತ್ತು ಭೂತಾನ್ ನಡುವಿನ ವ್ಯಾಪಾರಕ್ಕೆ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡುವ ಮೂಲಕ ಮತ್ತು ಎರಡೂ ಕಡೆಗಳಲ್ಲಿ ಅನುಸರಣಾ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ವ್ಯಾಪಾರವನ್ನು ಸುಗಮಗೊಳಿಸುತ್ತದೆ. ಈ ತಿಳುವಳಿಕಾ ಒಡಂಬಡಿಕೆಯು ಬಿಎಫ್ಡಿಎ ನೀಡುವ ರಫ್ತು ತಪಾಸಣೆ ಪ್ರಮಾಣಪತ್ರವನ್ನು ಎಫ್ಎಸ್ಎಸ್ಎಐ ಸೂಚಿಸಿದ ಅವಶ್ಯಕತೆಗಳ ಅನುಸರಣೆಗಾಗಿ ಮತ್ತು ಭಾರತಕ್ಕೆ ಉತ್ಪನ್ನಗಳನ್ನು ರಫ್ತು ಮಾಡುವಾಗ ಸ್ವೀಕಾರಾರ್ಹವಾಗಿಸುತ್ತದೆ.
|
ಶ್ರೀ ಪೆಂಬಾ ವಾಂಗ್ಚುಕ್,
ಕಾರ್ಯದರ್ಶಿ, ಆರೋಗ್ಯ ಸಚಿವಾಲಯ, ಆರ್.ಜಿ.ಒ.ಬಿ
|
ಶ್ರೀ ಸುಧಾಕರ್ ದಲೇಲಾ,
ಭೂತಾನ್ ಸಾಮ್ರಾಜ್ಯಕ್ಕೆ ಭಾರತದ ರಾಯಭಾರಿ
|
|
3
|
ಇಂಧನ ದಕ್ಷತೆ ಮತ್ತು ಇಂಧನ ಸಂರಕ್ಷಣಾ ಕ್ರಮಗಳಲ್ಲಿ ಸಹಕಾರಕ್ಕಾಗಿ ತಿಳಿವಳಿಕಾ ಒಡಂಬಡಿಕೆ.
|
ಇಂಧನ ದಕ್ಷತೆ ಬ್ಯೂರೋ ಅಭಿವೃದ್ಧಿಪಡಿಸಿದ ನಕ್ಷತ್ರ ಲೇಬಲಿಂಗ್ ಕಾರ್ಯಕ್ರಮವನ್ನು ಉತ್ತೇಜಿಸುವ ಮೂಲಕ ಗೃಹ ವಲಯದಲ್ಲಿ ಇಂಧನ ದಕ್ಷತೆಯನ್ನು ಹೆಚ್ಚಿಸಲು ಭೂತಾನ್ಗೆ ಸಹಾಯ ಮಾಡುವುದು ಈ ತಿಳುವಳಿಕಾ ಒಡಂಬಡಿಕೆಯ ಉದ್ದೇಶವಾಗಿದೆ. ಭಾರತದ ಅನುಭವದ ಆಧಾರದ ಮೇಲೆ ಕಟ್ಟಡ ಸಂಕೇತಗಳನ್ನು ರೂಪಿಸುವುದು, ಇಂಧನ ಲೆಕ್ಕಪರಿಶೋಧಕರ ತರಬೇತಿಯನ್ನು ಸಾಂಸ್ಥಿಕಗೊಳಿಸುವ ಮೂಲಕ ಭೂತಾನ್ನಲ್ಲಿ ಇಂಧನ ವೃತ್ತಿಪರರ ಗುಂಪನ್ನು ರಚಿಸುವುದು ಇತ್ಯಾದಿಗಳನ್ನು ಈ ತಿಳುವಳಿಕಾ ಒಡಂಬಡಿಕೆ ಒಳಗೊಂಡಿದೆ.
|
ಶ್ರೀ ಕರ್ಮ ತ್ಸೆರಿಂಗ್,
ಕಾರ್ಯದರ್ಶಿ, ಆರ್ಥಿಕ ಮತ್ತು ನೈಸರ್ಗಿಕ ಸಂಪನ್ಮೂಲ ಸಚಿವಾಲಯ, ಆರ್.ಜಿ.ಒ.ಬಿ
|
ಶ್ರೀ ಸುಧಾಕರ್ ದಲೇಲಾ,
ಭೂತಾನ್ ಸಾಮ್ರಾಜ್ಯಕ್ಕೆ ಭಾರತದ ರಾಯಭಾರಿ
|
|
4
|
ಕ್ರೀಡೆ ಮತ್ತು ಯುವಜನರಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ.
|
ಈ ತಿಳಿವಳಿಕಾ ಒಡಂಬಡಿಕೆಯು ಎರಡೂ ಕಡೆಯ ಕ್ರೀಡಾ ಸಂಸ್ಥೆಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುವ ಮೂಲಕ ಮತ್ತು ಕ್ರೀಡಾ ಚಟುವಟಿಕೆಗಳು/ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಭಾರತ ಮತ್ತು ಭೂತಾನ್ ನಡುವಿನ ಜನರ ನಡುವಿನ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ.
|
ಶ್ರೀಮತಿ ಪೆಮಾ ಚೋಡೆನ್,
ಕಾರ್ಯದರ್ಶಿ, ವಿದೇಶಾಂಗ ವ್ಯವಹಾರ ಮತ್ತು ಬಾಹ್ಯ ವ್ಯಾಪಾರ ಸಚಿವಾಲಯ, ಆರ್.ಜಿ.ಒ.ಬಿ
|
ಶ್ರೀ ಸುಧಾಕರ್ ದಲೇಲಾ,
ಭೂತಾನ್ ಸಾಮ್ರಾಜ್ಯಕ್ಕೆ ಭಾರತದ ರಾಯಭಾರಿ
|
|
5
|
ಉಲ್ಲೇಖ ಮಾನದಂಡಗಳ ಹಂಚಿಕೆ, ಔಷಧಶಾಸ್ತ್ರ, ಜಾಗರೂಕತೆ/ಎಚ್ಚರ ಮತ್ತು ಔಷಧೀಯ ಉತ್ಪನ್ನಗಳ ಪರೀಕ್ಷೆಗೆ ಸಂಬಂಧಿಸಿದ ಸಹಕಾರದ ಕುರಿತು ತಿಳುವಳಿಕಾ ಒಡಂಬಡಿಕೆ.
|
ಈ ತಿಳಿವಳಿಕಾ ಒಡಂಬಡಿಕೆಯು ನಮ್ಮ ನಿಕಟ ಸಹಕಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಮತ್ತು ಎರಡೂ ಕಡೆಯ ಕಾನೂನುಗಳು ಮತ್ತು ನಿಬಂಧನೆಗಳಿಗೆ ಅನುಸಾರವಾಗಿ ಔಷಧಿಗಳ ನಿಯಂತ್ರಣ ಕ್ಷೇತ್ರದಲ್ಲಿ ಮಾಹಿತಿ ವಿನಿಮಯಕ್ಕೆ ಸಹಾಯ ಮಾಡುತ್ತದೆ. ಈ ತಿಳಿವಳಿಕಾ ಒಡಂಬಡಿಕೆಯು ಭೂತಾನ್ ಔಷಧಿಗಳಿಗೆ ಮಾನದಂಡಗಳ ಪುಸ್ತಕವಾಗಿ ಭಾರತೀಯ ಫಾರ್ಮಾಕೋಪಿಯಾವನ್ನು ಸ್ವೀಕರಿಸಲು ಮತ್ತು ಕೈಗೆಟುಕುವ ಬೆಲೆಯಲ್ಲಿ ಜೆನೆರಿಕ್ ಔಷಧಿಗಳ ಪೂರೈಕೆಗೆ ಅವಕಾಶ ನೀಡುತ್ತದೆ.
|
ಶ್ರೀ ಪೆಂಬಾ ವಾಂಗ್ಚುಕ್,
ಕಾರ್ಯದರ್ಶಿ, ಆರೋಗ್ಯ ಸಚಿವಾಲಯ, ಆರ್.ಜಿ.ಒ.ಬಿ
|
ಶ್ರೀ ಸುಧಾಕರ್ ದಲೇಲಾ,
ಭೂತಾನ್ ಸಾಮ್ರಾಜ್ಯಕ್ಕೆ ಭಾರತದ ರಾಯಭಾರಿ
|
|
6
|
ಬಾಹ್ಯಾಕಾಶ ಸಹಕಾರದ ಜಂಟಿ ಕ್ರಿಯಾ ಯೋಜನೆ (ಜೆಪಿಒಎ)
|
ವಿನಿಮಯ ಕಾರ್ಯಕ್ರಮಗಳು, ತರಬೇತಿ ಇತ್ಯಾದಿಗಳ ಮೂಲಕ ನಮ್ಮ ಬಾಹ್ಯಾಕಾಶ ಸಹಕಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಜಂಟಿ ಕ್ರಿಯಾ ಯೋಜನೆಯು ಒಂದು ನಿರ್ದಿಷ್ಟ ಬಲಿಷ್ಟ ಮಾರ್ಗಸೂಚಿಯನ್ನು ಒದಗಿಸುತ್ತದೆ.
|
ಶ್ರೀ ಜಿಗ್ಮೆ ತೇನ್ಸಿಂಗ್,
ಕಾರ್ಯದರ್ಶಿ, ಸರ್ಕಾರಿ ತಂತ್ರಜ್ಞಾನ ಸಂಸ್ಥೆ, ಆರ್.ಜಿ.ಒ.ಬಿ
|
ಶ್ರೀ ಸುಧಾಕರ್ ದಲೇಲಾ,
ಭೂತಾನ್ ಸಾಮ್ರಾಜ್ಯಕ್ಕೆ ಭಾರತದ ರಾಯಭಾರಿ
|
|
7
|
ಭಾರತದ ರಾಷ್ಟ್ರೀಯ ಜ್ಞಾನ ಜಾಲ (ಎನ್ಕೆಎನ್) ಮತ್ತು ಭೂತಾನ್ನ ಡ್ರಕ್ ಸಂಶೋಧನೆ ಮತ್ತು ಶಿಕ್ಷಣ ಜಾಲದ ನಡುವಿನ ಪಿಯರಿಂಗ್ ವ್ಯವಸ್ಥೆ ಕುರಿತ ತಿಳಿವಳಿಕಾ ಒಡಂಬಡಿಕೆಯ ನವೀಕರಣ.
|
ಈ ತಿಳುವಳಿಕಾ ಒಡಂಬಡಿಕೆಯು ಭಾರತದ ರಾಷ್ಟ್ರೀಯ ಜ್ಞಾನ ಜಾಲ (ಎನ್.ಕೆ.ಎನ್.) ಮತ್ತು ಭೂತಾನ್ನ ಡ್ರಕ್ ಸಂಶೋಧನೆ ಮತ್ತು ಶಿಕ್ಷಣ ಜಾಲ (ಡ್ರಕ್ ರೆನ್) ನಡುವೆ ಎನ್.ಕೆ.ಎನ್. ಮತ್ತು ಡ್ರಕ್ರೆನ್ ನಡುವಿನ ಪೀರಿಂಗ್ ಒಪ್ಪಂದವನ್ನು ನವೀಕರಿಸುವುದಕ್ಕೆ ಸಂಬಂಧಿಸಿದುದಾಗಿದೆ. ಈ ತಿಳುವಳಿಕಾ ಒಡಂಬಡಿಕೆಯು ಭಾರತ ಮತ್ತು ಭೂತಾನ್ ನಡುವಿನ ಡಿಜಿಟಲ್ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಭೂತಾನ್ನ ವಿದ್ವಾಂಸರು ಮತ್ತು ಸಂಶೋಧನಾ ಸಂಸ್ಥೆಗಳಿಗೆ ಪ್ರಯೋಜನವನ್ನು ನೀಡುತ್ತದೆ.
|
ಶ್ರೀ ಜಿಗ್ಮೆ ತೇನ್ಸಿಂಗ್,
ಕಾರ್ಯದರ್ಶಿ, ಸರ್ಕಾರಿ ತಂತ್ರಜ್ಞಾನ ಸಂಸ್ಥೆ, ಆರ್.ಜಿ.ಒ.ಬಿ
|
ಶ್ರೀ ಸುಧಾಕರ್ ದಲೇಲಾ,
ಭೂತಾನ್ ಸಾಮ್ರಾಜ್ಯಕ್ಕೆ ಭಾರತದ ರಾಯಭಾರಿ
|