ಪ್ರಧಾನ ಮಂತ್ರಿಯವರ ಕಛೇರಿ

ಮಾಂಟೆ ಕ್ಯಾಸಿನೋ ಯುದ್ಧ ಸ್ಮಾರಕದಲ್ಲಿ ಪ್ರಧಾನ ಮಂತ್ರಿ ಗೌರವ ನಮನ ಸಲ್ಲಿಸಿದರು

Posted On: 21 AUG 2024 11:55PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾರ್ಸಾದ ಮಾಂಟೆ ಕ್ಯಾಸಿನೋ ಯುದ್ಧ ಸ್ಮಾರಕದಲ್ಲಿ ಪುಷ್ಪಗುಚ್ಛವಿರಿಸಿ ಗೌರವ ನಮನ ಸಲ್ಲಿಸಿದರು.

ಈ ಸ್ಮಾರಕವು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಇಟಲಿಯ ಮಾಂಟೆ ಕ್ಯಾಸಿನೋ ಯುದ್ಧದಲ್ಲಿ  ಪೋಲೆಂಡ್, ಭಾರತ ಮತ್ತು ಇತರ ರಾಷ್ಟ್ರಗಳ ಯೋಧರ ತ್ಯಾಗ ಮತ್ತು ಶೌರ್ಯದ ಪ್ರತೀಕವಾಗಿದೆ. ಈ ಸ್ಮಾರಕಕ್ಕೆ ಪ್ರಧಾನ ಮಂತ್ರಿಗಳ ಭೇಟಿಯು ಭಾರತ ಮತ್ತು ಪೋಲೆಂಡ್ ನಡುವಣ ಆಳವಾದ ಬಾಂಧವ್ಯ ಮತ್ತು ಇತಿಹಾಸದ ಮಹತ್ವವನ್ನು ಸಾರುತ್ತದೆ.

 

*****



(Release ID: 2047636) Visitor Counter : 12