ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವಿಶಿಷ್ಟ ಸಂವಾದಾತ್ಮಕ ಕಾರ್ಯಕ್ರಮ – “ಪರೀಕ್ಷಾ ಪೇ ಚರ್ಚಾ 2024” ಕುರಿತು  ಕೇಂದ್ರ ಶಿಕ್ಷಣ ರಾಜ್ಯ ಖಾತೆ ಸಚಿವ  ಡಾ. ಸುಭಾಸ್ ಸರ್ಕಾರ್ ಅವರು  ಪತ್ರಿಕಾಗೋಷ್ಠಿಯನ್ನು ನಡೆಸಿದರು


ಕಾರ್ಯಕ್ರಮದ 7ನೇ ಆವೃತ್ತಿಗಾಗಿ ಮೈಗೌ ಪೋರ್ಟಲ್ನಲ್ಲಿ 2.26 ಕೋಟಿ ನೋಂದಣಿಯಾಗಿದೆ - ಡಾ. ಸುಭಾಸ್ ಸರ್ಕಾರ್

Posted On: 28 JAN 2024 7:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ವಿಶಿಷ್ಟ ಸಂವಾದಾತ್ಮಕ ಕಾರ್ಯಕ್ರಮ - ಪರೀಕ್ಷಾ ಪೇ ಚರ್ಚಾ (ಪಿಪಿಸಿ) ಕುರಿತು ಕೇಂದ್ರ ಶಿಕ್ಷಣ ರಾಜ್ಯ ಖಾತೆ ಸಚಿವ ಡಾ.ಸುಭಾಸ್ ಸರ್ಕಾರ್ ಅವರು ಪತ್ರಿಕಾಗೋಷ್ಠಿಯನ್ನು ನಡೆಸಿದರು. ಪ್ರಧಾನಮಂತ್ರಿ ಅವರೊಂದಿಗೆ ಚರ್ಚಿಸಲು ಮತ್ತು ಸಂವಾದ ನಡೆಸಲು ಮತ್ತು ಜೀವನವನ್ನು ಉತ್ಸವವಾಗಿ ನಡೆಸಲು ಪರೀಕ್ಷೆಗಳಿಂದ ಹೊರಹೊಮ್ಮುವ ಒತ್ತಡವನ್ನು ನಿವಾರಿಸಲು ರಾಷ್ಟ್ರದಾದ್ಯಂತ ಮತ್ತು ವಿದೇಶದಿಂದ  ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಇದರಲ್ಲಿ ಭಾಗವಹಿಸಲಿದ್ದಾರೆ. 

ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಕಳೆದ ಆರು ವರ್ಷಗಳಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ಡಾ.ಸರ್ಕಾರ್ ಅವರು ಹೇಳಿದರು. ಪರೀಕ್ಷಾ ಪೇ ಚರ್ಚಾ(ಪಿಪಿಸಿ)ಯ ಮೊದಲ ಮೂರು ಆವೃತ್ತಿಗಳು ನವದೆಹಲಿಯಲ್ಲಿ ಟೌನ್-ಹಾಲ್ ನಲ್ಲಿ ಸಂವಾದಾತ್ಮಕ ಸ್ವರೂಪದಲ್ಲಿ ನಡೆದವು. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ, ನಾಲ್ಕನೇ ಆವೃತ್ತಿಯನ್ನು ದೂರದರ್ಶನ ಮತ್ತು ಎಲ್ಲಾ ಪ್ರಮುಖ ಟಿವಿ ಚಾನೆಲ್ಗಳಲ್ಲಿ ಪ್ರಸಾರವಾಗುವ ಆನ್ಲೈನ್  ಕಾರ್ಯಕ್ರಮದ ರೂಪದಲ್ಲಿ ನಡೆಸಲಾಯಿತು.

ಪರೀಕ್ಷಾ ಪೇ ಚರ್ಚಾ (ಪಿಪಿಸಿ)ಯ ಐದನೇ ಮತ್ತು ಆರನೇ ಆವೃತ್ತಿಯನ್ನು ಮತ್ತೆ ಟೌನ್-ಹಾಲ್ ರೂಪದಲ್ಲಿ ನವದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು ಎಂದು ಕೇಂದ್ರ ಶಿಕ್ಷಣ ರಾಜ್ಯ ಸಚಿವ ಡಾ.ಸುಭಾಸ್ ಸರ್ಕಾರ್ ಅವರು ಮಾಹಿತಿ ನೀಡಿದರು. ಕಳೆದ ವರ್ಷ (2023) ನಡೆದ ಸ್ಪರ್ಧೆಗಳಲ್ಲಿ ಸುಮಾರು 31.24 ಲಕ್ಷ ವಿದ್ಯಾರ್ಥಿಗಳು, 5.60 ಲಕ್ಷ ಶಿಕ್ಷಕರು ಮತ್ತು 1.95 ಲಕ್ಷ ಪೋಷಕರು ಅತಿ ಉತ್ಸಾಹದಿಂದ ಭಾಗವಹಿಸಿದ್ದರು, ಹಾಗೂ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. 

ಪರೀಕ್ಷಾ ಪೇ ಚರ್ಚಾ (ಪಿಪಿಸಿ) ದ 7 ನೇ ಆವೃತ್ತಿಗಾಗಿ  ಮೈಗೌ  ಪೋರ್ಟಲ್ನಲ್ಲಿ 2.26 ಕೋಟಿಗೂ ಮಿಗಿಲಾಗಿ ಬೃಹತ್  ನೋಂದಣಿಯನ್ನು ದಾಖಲಿಸಲ್ಪಟ್ಟಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು. ಇದು ಪರೀಕ್ಷಾ ಪೇ ಚರ್ಚಾ (ಪಿಪಿಸಿ) ಕುರಿತು ರಾಷ್ಟ್ರವ್ಯಾಪಿ ವಿದ್ಯಾರ್ಥಿಗಳಲ್ಲಿ ವ್ಯಾಪಕವಾದ ಉತ್ಸಾಹವನ್ನು ತೋರಿಸುತ್ತದೆ ಹಾಗೂ ಈ ವಿಶಿಷ್ಟ ಸಮಾರಂಭದಲ್ಲಿ ಭಾಗವಹಿಸಲು ಮತ್ತು ಪ್ರಧಾನಮಂತ್ರಿಯವರೊಂದಿಗೆ ಸಂವಹನ ನಡೆಸಲು ಎಲ್ಲರೂ ಉತ್ಸುಕವಾಗಿದ್ದಾರೆ ಎಂದು ಸಚಿವರು ಹೇಳಿದರು.

ಈ ವರ್ಷದ ಪರೀಕ್ಷಾ ಪೇ ಚರ್ಚಾ (ಪಿಪಿಸಿ) ಅನ್ನು ಜನವರಿ 29, 2024 ರಂದು ಬೆಳಿಗ್ಗೆ 11 ರಿಂದ ಟೌನ್ ಹಾಲ್ ಮಾದರಿಯಲ್ಲಿ ಭಾರತ ಮಂಟಪ, ಐಟಿಪಿಒ, ಪ್ರಗತಿ ಮೈದಾನ, ನವದೆಹಲಿಯಲ್ಲಿ ನಡೆಸಲಾಗುವುದು, ಮತ್ತು ಕಾರ್ಯಕ್ರಮದಲ್ಲಿ ಸುಮಾರು 3000 ಭಾಗವಹಿಸಲಿದ್ದಾರೆ  ಹಾಗೂ ಪ್ರಧಾನ ಮಂತ್ರಿಯೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಕೇಂದ್ರ ಶಿಕ್ಷಣ ರಾಜ್ಯ ಸಚಿವ ಡಾ.ಸುಭಾಸ್ ಸರ್ಕಾರ್ ಅವರು ತಿಳಿಸಿದರು

ಪ್ರತಿ ರಾಜ್ಯಗಳಿಂದ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಎರಡು ವಿದ್ಯಾರ್ಥಿಗಳು ಮತ್ತು ಎರಡು ಶಿಕ್ಷಕರನ್ನು ಮತ್ತು ಕಲಾ ಉತ್ಸವದ ವಿಜೇತರನ್ನು ಮುಖ್ಯ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮ ಪ್ರಾರಂಭದ ನಂತರ ಮೊದಲ ಬಾರಿಗೆ ದೇಶದ ವಿವಿಧ ಭಾಗಗಳಿಂದ ಏಕಲವ್ಯ ಮಾದರಿ ವಸತಿ ಶಾಲೆಗಳ (ಇ.ಎಂ.ಆರ್.ಎಸ್) ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ. ಎಂದು ಸಚಿವರು ತಿಳಿಸಿದರು. 

ಸ್ಪರ್ಧೆಯಲ್ಲಿ ಭಾಗವಹಿಸಲು 6 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಆನ್ಲೈನ್ ಎಂ.ಸಿ.ಒ ಸ್ಪರ್ಧೆಯನ್ನು ಮೈಗೌ ಪೋರ್ಟಲ್ನಲ್ಲಿ ಡಿಸೆಂಬರ್ 11, 2023 ರಿಂದ  ಜನವರಿ 12,  2024 ರ ನಡುವೆ ನಡೆಸಲಾಯಿತು. ಮೈಗೌ ಪೋರ್ಟಲ್ನಲ್ಲಿ ಅವರ ಪ್ರಶ್ನೆಗಳ ಆಧಾರದ ಮೇಲೆ ಭಾಗವಹಿಸುವವರನ್ನು ಆಯ್ಕೆ ಮಾಡಲಾಗಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪ್ರಧಾನಮಂತ್ರಿಯವರು ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಬರೆದಿರುವ ಪರೀಕ್ಷಾ ವಾರಿಯರ್ಸ್ ಪುಸ್ತಕವನ್ನು ಒಳಗೊಂಡ ವಿಶೇಷ ಪರೀಕ್ಷಾ ಪೆ ಚರ್ಚಾ “ಕಿಟ್ ಮತ್ತು ಪ್ರಮಾಣಪತ್ರ” ವನ್ನು ನೀಡಲಾಗುತ್ತದೆ  ಎಂದು ಸಚಿವರು ಹೇಳಿದರು.    

ಯುವಜನರಿಗೆ ಒತ್ತಡ ಮುಕ್ತ ವಾತಾವರಣವನ್ನು ಸೃಷ್ಟಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ‘ಪರೀಕ್ಷಾ ಯೋಧರು’ (ಎಕ್ಸಾಮ್ ವಾರಿಯರ್ಸ್) ಎಂಬ ಬೃಹತ್ ಆಂದೋಲನದ ಭಾಗವಾಗಿದೆ ಈ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವಾಗಿದೆ ಎಂದು ಸಚಿವರು ಹೇಳಿದರು.    

ಪ್ರತಿ ಮಗುವಿನ ವಿಶಿಷ್ಟ ವ್ಯಕ್ತಿತ್ವವನ್ನು ಉಳಿಸಿ-ಬೆಳೆಸುವ, ಪ್ರೋತ್ಸಾಹಿಸುವ ಮತ್ತು ಸಂಪೂರ್ಣವಾಗಿ ವ್ಯಕ್ತಪಡಿಸಲು ಅವಕಾಶ ನೀಡುವ ಮುಕ್ತ ವಾತಾವರಣವನ್ನು ಬೆಳೆಸಲು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಸಮಾಜವನ್ನು ಒಟ್ಟುಗೂಡಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪ್ರಯತ್ನಗಳಿಂದ ಈ ವಿನೂತನ ಪರೀಕ್ಷಾ ಪೇ ಚರ್ಚಾ (ಪಿಪಿಸಿ) ಕಾರ್ಯಕ್ರಮದ ಪರಿಕಲ್ಪನೆ  ರೂಪಿತವಾಗಿದೆ ಎಂದು ಅವರು ಹೇಳಿದರು.

ಇದನ್ನು ಗಮನದಲ್ಲಿಟ್ಟುಕೊಂಡು, ಮುಖ್ಯ ಕಾರ್ಯಕ್ರಮದ ಪೂರ್ವಭಾವಿಯಾಗಿ, ಅಂದರೆ, ಯುವ ದಿನವಾದ 12 ನೇ ಜನವರಿ 2024 ರಿಂದ ಪ್ರಾರಂಭವಾಗಿ,  23 ನೇ ಜನವರಿ 2024 ರವರೆಗೆ, ಶಾಲಾ ಮಟ್ಟದಲ್ಲಿ ವೈವಿದ್ಯಮಯ ಚಟುವಟಿಕೆಗಳ ಮಹಾಗುಚ್ಛವನ್ನು ಆಯೋಜಿಸಲಾಗಿದೆ.  ಇದು ಮ್ಯಾರಥಾನ್ ಓಟ, ಸಂಗೀತ ಸ್ಪರ್ಧೆ, ಮೆಮೆ ಸ್ಪರ್ಧೆ, ಮೂಕ(ನುಕ್ಕಡ್) ನಾಟಕ, ವಿದ್ಯಾರ್ಥಿ-ಆಂಕರ್ ಹಾಗೂ ವಿದ್ಯಾರ್ಥಿ-ಅತಿಥಿ ಚರ್ಚೆಗಳು ಇತ್ಯಾದಿ - ಮನೋಜ್ಞ, ಚೇತೋಹಾರಿ, ಸಂತೋಷದಾಯಕ ಕಲಿಕಾ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. 

2024 ರ ಜನವರಿ 23 ರಂದು , ದೇಶಾದ್ಯಂತ 774 ಜಿಲ್ಲೆಗಳಲ್ಲಿ ಹಾಗೂ 657 ಕೇಂದ್ರೀಯ ವಿದ್ಯಾಲಯಗಳು ಮತ್ತು 122 ನವೋದಯ ವಿದ್ಯಾಲಯಗಳಲ್ಲಿ (ಎನ್..ವಿ..ಎಸ್) ರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬರೆದ ‘ಪರೀಕ್ಷಾ ಯೋಧರು’ (ಎಕ್ಸಾಮ್ ವಾರಿಯರ್ಸ್) ಪುಸ್ತಕದ ಪರೀಕ್ಷಾ ಸೂತ್ರ - ಮಂತ್ರಗಳ ಆಧಾರದಲ್ಲಿ ರೂಪಿಸಿದ ವಿವಿಧ ವಿಷಯ-ಚಟುವಟಿಕೆಗಳ ಈ ಬೃಹತ್ ಕಾರ್ಯಕ್ರಮದಲ್ಲಿ ಸುಮಾರು 60 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅತ್ಯಂತ ಸದಭಿರುಚಿ ಮತ್ತು ಉತ್ಸಾಹದಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು  ಈ ಬೃಹತ್ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದರು.

  
******



(Release ID: 2000607) Visitor Counter : 51