ಪ್ರಧಾನ ಮಂತ್ರಿಯವರ ಕಛೇರಿ

​​​​​​​ವಿಕಾಸ್ ಹಾಡಿರುವ “ಅಯೋಧ್ಯಾ ಮೇ ಜಯಕರ ಗುಂಜಯ್” ಭಕ್ತಿ ಭಜನೆಯನ್ನು ಹಂಚಿಕೊಂಡ ಪ್ರಧಾನಿ ಮೋದಿ

Posted On: 08 JAN 2024 10:06AM by PIB Bengaluru

ಮಹೇಶ್ ಕುಕ್ರೇಜಾ ಅವರು ರಚಿಸಿರುವ, ವಿಕಾಸ್ ಅವರು ಸಂಯೋಜಿಸಿ, ಹಾಡಿರುವ "ಅಯೋಧ್ಯಾ ಮೇ ಜಯಕರ ಗುಂಜಯ್" ಭಕ್ತಿ ಭಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,

“ಅಯೋಧ್ಯೆ ಮಾತ್ರವಲ್ಲದೆ ಇಂದು ದೇಶದ ಎಲ್ಲೆಡೆ ಭಗವಾನ್ ಶ್ರೀರಾಮನನ್ನು ಸ್ವಾಗತಿಸಲು ಶುಭ ಗೀತೆಗಳನ್ನು ಹಾಡಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ, ನೀವು ರಾಮ್ ಲಲ್ಲಾ ಬಗ್ಗೆ ಭಕ್ತಿಯಿಂದ ತುಂಬಿದ ವಿಕಾಸ್ ಮತ್ತು ಮಹೇಶ್ ಕುಕ್ರೇಜಾರವರ ರಾಮ್ ಭಜನೆಯನ್ನು ಸಹ ಕೇಳಿ ಆನಂದಿಸಿ. #ಶ್ರೀರಾಮಭಜನೆ" ಎಂದು ಬರೆದುಕೊಂಡಿದ್ದಾರೆ.

********



(Release ID: 1994148) Visitor Counter : 63