ಪ್ರಧಾನ ಮಂತ್ರಿಯವರ ಕಛೇರಿ

ಖ್ಯಾತ ಸಂಸ್ಕೃತ ವಿದ್ವಾಂಸ ವೇದ ಕುಮಾರಿ ಘಾಯ್ ನಿಧನಕ್ಕೆ ಪ್ರಧಾನ ಮಂತ್ರಿ  ಸಂತಾಪ

Posted On: 31 MAY 2023 2:54PM by PIB Bengaluru

ಖ್ಯಾತ ಸಂಸ್ಕೃತ ವಿದ್ವಾಂಸರಾದ  ವೇದ ಕುಮಾರಿ ಘಾಯ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ  ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ.

"ಸಂಸ್ಕೃತ ಸಾಹಿತ್ಯದ ದಿಗ್ಗಜರಾದ ವೇದ ಕುಮಾರಿ ಘಾಯ್ ಜಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಅಪಾರ ಕೊಡುಗೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿವೆ. ಅವರ ಕೃತಿಗಳು ವಿದ್ವಾಂಸರನ್ನು ಪ್ರೇರೇಪಿಸುತ್ತಲೇ ಇರುತ್ತವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ: ಪ್ರಧಾನ ಮಂತ್ರಿ" ಎಂದು ಅದರಲ್ಲಿ ಹೇಳಲಾಗಿದೆ.

***



(Release ID: 1928703) Visitor Counter : 116