ಪ್ರಧಾನ ಮಂತ್ರಿಯವರ ಕಛೇರಿ
ಮಾಧವಪುರ ಮೇಳವನ್ನು ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಚೈತನ್ಯದ ವಿಶಿಷ್ಟ ಆಚರಣೆಯಾಗಿದೆ ಎಂದ ಪ್ರಧಾನಮಂತ್ರಿ
Posted On:
10 APR 2022 1:14PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ನ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಹಾಗೂ ಮಾಧವಪುರ ಮೇಳವನ್ನು ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಚೈತನ್ಯದ ವಿಶಿಷ್ಟ ಆಚರಣೆ ಎಂದು ತಮ್ಮ ಸಂದೇಶದಲ್ಲಿ ವಿವರಿಸಿದ್ದಾರೆ.
ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ:
"ಮಾಧವಪುರ ಮೇಳ ಪ್ರಾರಂಭವಾಗುತ್ತಿದ್ದಂತೆ, ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಚೈತನ್ಯದ ಈ ಅನನ್ಯ ಆಚರಣೆಯ ಬಗ್ಗೆ ಕಳೆದ ತಿಂಗಳ ಮನ್ ಕಿ ಬಾತ್ ನಲ್ಲಿ ನಾನು ಹೇಳಿದ್ದನ್ನು ಈಗ ಪುನಃ ಹಂಚಿಕೊಳ್ಳುತ್ತಿದ್ದೇನೆ."
ಗುಜರಾತ್ ಪ್ರವಾಸೋದ್ಯಮದ ಟ್ವಿಟ್ ಸಂದೇಶವನ್ನು ಕೂಡಾ ಹಂಚಿಕೊಳ್ಳುತ್ತಾ, ಮೇಳದ ಥೀಮ್ ಮತ್ತು ಉತ್ಸವ ಮೇಳ ನೀಡುವ ಸಂತೋಷದಾಯಕ ಮನೋಭಾವವನ್ನು ಪ್ರಧಾನಮಂತ್ರಿಯವರು ಪ್ರಶಂಸಿಸಿದರು.
*************
(Release ID: 1815486)
Visitor Counter : 202
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam