ಹಣಕಾಸು ಸಚಿವಾಲಯ

ನಗರಾಭಿವೃದ್ಧಿ ಯೋಜನೆಗಳಿಗೆ ಮಾದರಿ ಬದಲಾವಣೆಯ ಪರಿಷ್ಕರಣೆ ತರುವ ಉದ್ದೇಶದಿಂದ ಉನ್ನತ ಮಟ್ಟದ ಸಮಿತಿ ರಚನೆ; ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪ

Posted On: 01 FEB 2022 1:17PM by PIB Bengaluru

ಸಂಸತ್ತಿನಲ್ಲಿಂದು ಕೇಂದ್ರ ಬಜೆಟ್ ಮಂಡನೆ ವೇಳೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನರಗಾಭಿವೃದ್ಧಿ ಯೋಜನೆಗಳಿಗೆ ಮಾದರಿ ಬದಲಾವಣೆ ತರುವ ಪ್ರಸ್ತಾಪ ಮಾಡಿದರು. ನಗರ ವಲಯದ ನೀತಿಗಳು, ಸಾಮರ್ಥ್ಯ ವೃದ್ಧಿ, ಯೋಜನೆ, ಅನುಷ್ಠಾನ ಮತ್ತು ಆಡಳಿತ ಕುರಿತು ಶಿಫಾರಸುಗಳನ್ನು ಮಾಡಲು ಹೆಸರಾಂತ ನಗರ ಯೋಜಕರು, ನಗರ ಅರ್ಥಶಾಸ್ತ್ರಜ್ಞರು ಮತ್ತು ಸಂಸ್ಥೆಗಳ ಉನ್ನತ ಮಟ್ಟದ ಸಮಿತಿ ರಚಿಸುವುದಾಗಿ ಅವರು ಪ್ರಕಟಿಸಿದರು.

ಭಾರತ ಸ್ವಾತಂತ್ರ್ಯ ಗಳಿಸಿದ ಶತಮಾನೋತ್ಸವ ಆಚರಿಸುವ ಹೊತ್ತಿಗೆ ನಮ್ಮ ಅರ್ಧದಷ್ಟು ಜನಸಂಖ್ಯೆಯು ನಗರ ಪ್ರದೇಶಗಳಲ್ಲಿ ವಾಸಿಸುವ ಸಾಧ್ಯತೆ ಇರುವುದರಿಂದ ನಗರ ಯೋಜನೆಯು ಮಾಮೂಲಿ ವ್ಯಾಪಾರ ವಿಧಾನಗಳೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ. ಇದಕ್ಕಾಗಿ ತಯಾರಿ ಮಾಡಲು, ಕ್ರಮಬದ್ಧವಾದ ನಗರಾಭಿವೃದ್ಧಿಯು ನಿರ್ಣಾಯಕ ಪ್ರಾಮುಖ್ಯತೆ ಹೊಂದಿದೆ. ಏಕೆಂದರೆ ಇದು ಜನಸಂಖ್ಯಾ ಲಾಭಾಂಶಕ್ಕಾಗಿ ಜೀವನೋಪಾಯದ ಅವಕಾಶಗಳನ್ನು ಒಳಗೊಂಡಂತೆ ದೇಶದ ಆರ್ಥಿಕ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ. ಇದಕ್ಕಾಗಿ, ಒಂದು ಕಡೆ ನಾವು ಮೆಗಾ ಸಿಟಿಗಳನ್ನು ಮತ್ತು ಅವುಗಳ ಒಳನಾಡುಗಳನ್ನು ಪ್ರಸ್ತುತ ಆರ್ಥಿಕ ಬೆಳವಣಿಗೆಯ ಕೇಂದ್ರಗಳಾಗಿ ಪೋಷಿಸಬೇಕಾಗಿದೆ. ಮತ್ತೊಂದೆಡೆ, ನಾವು 2 ಮತ್ತು 3 ನೇ ಶ್ರೇಣಿಯ ನಗರಗಳಿಗೂ ಅನುಕೂಲ ಮಾಡಿಕೊಡಬೇಕಾಗಿದೆ ಎಂದು ಸಚಿವರು ತಿಳಿಸಿದರು.

ಮಹಿಳೆಯರು ಮತ್ತು ಯುವಕರು ಸೇರಿದಂತೆ ಎಲ್ಲರಿಗೂ ಅವಕಾಶಗಳನ್ನು ಕಲ್ಪಿಸಿ, ಸುಸ್ಥಿರ ಜೀವನದ ಕೇಂದ್ರಗಳಾಗಿ ನಾವು ಭಾರತದ ನಗರಗಳನ್ನು ಮರುರೂಪಿಸಬೇಕಾಗಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

***



(Release ID: 1794358) Visitor Counter : 297