ಪ್ರಧಾನ ಮಂತ್ರಿಯವರ ಕಛೇರಿ

ಪದ್ಮ ಪ್ರಶಸ್ತಿ ಪುರಸ್ಕೃತೆ ಮತ್ತು ಸಮಾಜ ಸೇವಕಿ ಶಾಂತಿ ದೇವಿಜಿ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 17 JAN 2022 5:59PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಪದ್ಮ ಪ್ರಶಸ್ತಿ ಪುರಸ್ಕೃತೆ ಮತ್ತು ಸಮಾಜ ಸೇವಕಿ ಶಾಂತಿ ದೇವಿಜಿ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.  

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ “ಶಾಂತಿ ದೇವಿ ಜೀ ಅವರನ್ನು ಬಡವರ ಮತ್ತು ಹಿಂದುಳಿದವರ ಧ್ವನಿಯಾಗಿ ನೆನಪಿಸಿಕೊಳ್ಳಲಾಗುವುದು. ಅವರು ಸಮಾಜದಲ್ಲಿನ ದುಃಖವನ್ನು ತೊಡೆದುಹಾಕಲು ಮತ್ತು ಆರೋಗ್ಯಕರ ಮತ್ತು ನ್ಯಾಯಯುತ ಸಮಾಜವನ್ನು ಸೃಷ್ಟಿಸಲು ನಿಸ್ವಾರ್ಥವಾಗಿ ಕಾರ್ಯನಿರ್ವಹಿಸಿದರು. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಅಸಂಖ್ಯಾತ ಅನುಯಾಯಿಗಳಿಗೆ ನನ್ನ ಸಾಂತ್ವನಗಳು. ಓಂ ಶಾಂತಿ.’’ ಎಂದಿದ್ದಾರೆ.

***



(Release ID: 1790547) Visitor Counter : 187