ಪ್ರಧಾನ ಮಂತ್ರಿಯವರ ಕಛೇರಿ

ಆಶಾಧಿ ಬೀಜ್, ಕುಚ್ಚಿ ಹೊಸ ವರ್ಷದ ಅಂಗವಾಗಿ ದೇಶದ ಜನತೆಗೆ ಪ್ರಧಾನಮಂತ್ರಿ ಶುಭಾಶಯ

ಪ್ರಕಟಣಾ ದಿನಾಂಕ: 12 JUL 2021 10:21AM by PIB Bengaluru

ಆಶಾಢ ಮಾಸದ ಶುಕ್ಲಪಕ್ಷದ 2ನೇ ದಿನ ಬರುವ ಆಶಾಧಿ ಬೀಜ್ ನ ‘ಕುಚ್ಚಿ ಹೊಸ ವರ್ಷ’ದ ಶುಭ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “ಆಶಾಧಿ ಬೀಜ್ ನಲ್ಲಿ ಬರುವ ಕುಚ್ಚಿ ಹೊಸ ವರ್ಷದ ಶುಭ ಸಂದರ್ಭದಲ್ಲಿ ಕುಚ್ಚಿ ಸಹೋದರ, ಸಹೋದರಿಯರಿಗೆ ನಾನು ಶುಭಾಶಯ ಕೋರುತ್ತೇನೆ.

ಕುಚ್‌ನ ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿಯನ್ನು ನಿರಂತರ ಕಾಪಾಡಿಕೊಂಡು, ಇಲ್ಲಿ ಮತ್ತು ವಿದೇಶದಲ್ಲಿ ನೆಲೆಸಿರುವ ಗಟ್ಟಿಮುಟ್ಟಾದ ಮತ್ತು ಬಲಿಷ್ಠರಾದ ಕುಚ್ಚಿ ಸಹೋದರ ಸಹೋದರಿಯರಿಗೆ ನನ್ನ ಪ್ರಣಾಮಗಳು ಮತ್ತು ಶುಭಕಾಮನೆಗಳು” ಎಂದು ಹಾರೈಸಿದ್ದಾರೆ.

***


(ಪ್ರಕಟಣೆ ಐ.ಡಿ.: 1734755) ವಿಸಿಟರ್ ಕೌಂಟರ್ : 304