ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಮನೋಜ್ ದಾಸ್ ನಿಧನಕ್ಕೆ ಪ್ರಧಾನಿ ಸಂತಾಪ

Posted On: 28 APR 2021 9:11AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಖ್ಯಾತ ಶಿಕ್ಷಣ ತಜ್ಞರು, ಜನಪ್ರಿಯ ಅಂಕಣಕಾರರು ಮತ್ತು ಸಮೃದ್ಧ ಬರಹಗಾರರಾದ ಶ್ರೀ ಮನೋಜ್ ದಾಸ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಶ್ರೀ ನರೇಂದ್ರ ಮೋದಿ ಅವರು ತಮ್ಮ ಟ್ವೀಟ್ ನಲ್ಲಿ ಶ್ರೀ ಮನೋಜ್ ದಾಸ್ ಅವರು ಖ್ಯಾತ ಶಿಕ್ಷಣ ತಜ್ಞರು, ಜನಪ್ರಿಯ ಅಂಕಣಕಾರರು ಮತ್ತು ಸಮೃದ್ಧ ಬರಹಗಾರರೆಂದು ಗುರುತಿಸಿಕೊಂಡಿದ್ದರು. ಅವರು ಇಂಗ್ಲೀಷ್ ಮತ್ತು ಒರಿಯಾ ಸಾಹಿತ್ಯಕ್ಕೆ ಶ್ರೀಮಂತ ಕೊಡುಗೆಯನ್ನು ನೀಡಿದ್ದಾರೆ.  ಅವರು ಶ್ರೀ ಅರಬಿಂದೋ ಅವರ ತತ್ವಶಾಸ್ತ್ರದ ಪ್ರಮುಖ ಪ್ರತಿಪಾದಕರಾಗಿದ್ದರು. ಅವರ ನಿಧನದಿಂದ ದುಃಖವಾಗಿದೆ. ಅವರ ಕುಟುಂಬಕ್ಕೆ ಸಂತಾಪಗಳು ಓಂ ಶಾಂತಿ’’ ಎಂದು ಹೇಳಿದ್ದಾರೆ.

***



(Release ID: 1714584) Visitor Counter : 173