ಪ್ರಧಾನ ಮಂತ್ರಿಯವರ ಕಛೇರಿ

ಮಿಜೋರಾಂ ರಾಜ್ಯೋದಯ ದಿನ: ಪ್ರಧಾನಮಂತ್ರಿ ಶುಭ ಹಾರೈಕೆ

Posted On: 20 FEB 2021 10:03AM by PIB Bengaluru

ಮಿಜೋರಾಂ ರಾಜ್ಯೋದಯ ದಿನದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯದ ಜನತೆಗೆ ಶುಭ ಹಾರೈಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು, “ಮಿಜೋರಾಂ ರಾಜ್ಯೋದಯದ ಹಿನ್ನೆಲೆಯಲ್ಲಿ ರಾಜ್ಯದ ನನ್ನ ಸಹೋದರಿಯರು ಮತ್ತು ಸಹೋದರರಿಗೆ ಶುಭಾಶಯಗಳು. ಮಿಜೋರಾಂ ನ ಸಂಸ್ಕೃತಿ ಬಗ್ಗೆ ಇಡೀ ದೇಶ ಹೆಮ್ಮೆಪಡುತ್ತದೆ. ಮಿಜೋರಾಂ ಜನ ಪ್ರಕೃತಿಯೊಂದಿಗೆ ಕರುಣೆ ಮತ್ತು ಸಾಮರಸ್ಯದಿಂದ ಬದುಕುವ ಬದ್ಧತೆಗೆ ಹೆಸರುವಾಸಿಯಾಗಿದ್ದಾರೆ. ರಾಜ್ಯದ ನಿರಂತರ ಪ್ರಗತಿಗಾಗಿ ಪ್ರಾರ್ಥಿಸುತ್ತೇನೆ.” ಎಂದು ಹೇಳಿದ್ದಾರೆ.

***



(Release ID: 1699705) Visitor Counter : 112