PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 16 APR 2020 7:02PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

Coat of arms of India PNG images free downloadhttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

  • ದೇಶದಲ್ಲಿ ಕೋವಿಡ್-19 ಕ್ಕೆ ಸಂಬಂಧಿಸಿದಂತೆ ಇಂದಿನವರೆಗೆ, 12,380 ಪ್ರಕರಣಗಳು ದೃಢಪಟ್ಟವೆ ಮತ್ತು 414 ಸಾವುಗಳು ಸಂಭವಿಸಿವೆ.
  • ಲಾಕ್ ಡೌನ್ ಅವಧಿಯಲ್ಲಿ ಕಂತು ಪಾವತಿಸಬೇಕಿದ್ದ ಆರೋಗ್ಯ ಮತ್ತು ವಾಹನಗಳ ಥರ್ಡ್ ಪಾರ್ಟಿ ವಿಮಾ ಪಾಲಿಸಿಗಳ ಕಂತಿನ ಪಾವತಿಯನ್ನು ಮೇ. 15 ರವರೆಗೆ ವಿಸ್ತರಿಸಲಾಗಿದೆ.
  • ಎರಡು ವಾರಗಳ ಅವಧಿಯಲ್ಲಿ ಭಾರತವು 32 ಕೋಟಿ ಜನರಿಗೆ 3.9 ಬಿಲಿಯನ್ ಅಮೆರಿಕನ್ ಡಾಲರ್ ಹಣಕಾಸು ನೆರವನ್ನು ವಿತರಿಸಿದೆ ಎಂದು ಜಿ-20 ಸಭೆಯಲ್ಲಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
  • ಕಡಿಮೆ ಅವಧಿಯಲ್ಲಿ ಔಷಧಿಗಳ ಲಭ್ಯತೆ/ ಉತ್ಪಾದನೆ ಪ್ರಮಾಣ ಹೆಚ್ಚಿಸಲು, ಪರಿಸರ ಪ್ರಭಾವ ಮೌಲ್ಯಮಾಪನ (ಇಐಎ) 2006 ಅಧಿಸೂಚನೆಯಲ್ಲಿ ಪ್ರಮುಖ ತಿದ್ದುಪಡಿ ಮಾಡಲಾಗಿದೆ.
  • ರಂಜಾನ್ ಅವಧಿಯಲ್ಲಿ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಯಾಗುವುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯಗಳ ವಕ್ಫ್ ಮಂಡಳಿಗಳಿಗೆ ಸೂಚಿಸಲಾಗಿದೆ.

 

ಕೋವಿಡ್-19 ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಇದುವರೆಗೆ, ದೇಶದಲ್ಲಿ 12,380 ದೃಢಪಟ್ಟ ಪ್ರಕರಣಗಳು ಮತ್ತು 414 ಸಾವುಗಳು ವರದಿಯಾಗಿವೆ. ಚೇತರಿಸಿಕೊಂಡ ನಂತರ 1489 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಾವಿನ ಪ್ರಮಾಣ (ಸಿಎಫ್ಆರ್) ಶೇ.3.3. ಇಲ್ಲಿಯವರೆಗೆ, ಚೇತರಿಸಿಕೊಂಡವರ ಶೇಕಡಾವಾರು 12.02 ಆಗಿದೆ. ಇದುವರೆಗೆ 325 ಜಿಲ್ಲೆಗಳಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಸಾಂಕ್ರಾಮಿಕದಿಂದಾಗಿ ಉಂಟಾಗಿರುವ ಆರೋಗ್ಯ ಸೇವೆಗಳ ಬೇಡಿಕೆಯನ್ನು ಪೂರೈಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ವಿವರವಾದ ಮಾರ್ಗಸೂಚಿಯನ್ನು ನೀಡಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1615049

ಲಾಕ್ ಡೌನ್ ಅವಧಿಯಲ್ಲಿ ಕಂತು ಪಾವತಿಸಬೇಕಿದ್ದ ಆರೋಗ್ಯ ಮತ್ತು ವಾಹನಗಳ ಥರ್ಡ್ ಪಾರ್ಟಿ ವಿಮಾ ಪಾಲಿಸಿಗಳ ಕಂತಿನ ಪಾವತಿಯನ್ನು ಮೇ. 15 ರವರೆಗೆ ವಿಸ್ತರಿಸಲಾಗಿದೆ

ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ನವೀಕರಣವಾಗಬೇಕಿದ್ದ ಆರೋಗ್ಯ ಮತ್ತು ವಾಹನ (ಥರ್ಡ್ ಪಾರ್ಟಿ) ವಿಮಾ ಪಾಲಿಸಿಗಳ ಪಾಲಿಸಿದಾರರಿಗೆ ತೊಂದರೆಗಳನ್ನು ತಗ್ಗಿಸುವ ಉದ್ದೇಶದಿಂದ, ಕೇಂದ್ರ ಸರ್ಕಾರವು ಅಧಿಸೂಚನೆಗಳನ್ನು ಹೊರಡಿಸಿದ್ದು, ಪಾಲಿಸಿದಾರರಿಗೆ ಮೇ 15 ರವರೆಗೆ ಪ್ರೀಮಿಯಂ ಪಾವತಿಗಳನ್ನು ಮಾಡಲು ಅವಕಾಶ ನೀಡಲಾಗಿದೆ. ಹೆಚ್ಚುವರಿ ಅವಧಿಯಲ್ಲಿ ಪಾಲಿಸಿಯ ಮುಂದುವರಿಕೆ ಮತ್ತು ಜಗಳ ಮುಕ್ತ ಕ್ಲೈಮುಗಳ ಪಾವತಿಯನ್ನು ಇದು ಖಚಿತಪಡಿಸುತ್ತದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614916

ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು 2 ನೇ ಜಿ 20 ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್ ಗಳ ಸಭೆಯಲ್ಲಿ ಭಾಗವಹಿಸಿದರು

ಇಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಸ್ಥೂಲ ಆರ್ಥಿಕ ಸ್ಥಿರತೆಯನ್ನು ಸುಸ್ಥಿರ ರೀತಿಯಲ್ಲಿ ಕಾಪಾಡಿಕೊಂಡು ಜನರ ಜೀವ ಮತ್ತು ಜೀವನೋಪಾಯವನ್ನು ರಕ್ಷಿಸುವಲ್ಲಿ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್ಗಳ ಪಾತ್ರದ ಮೇಲೆ ಗಮನಹರಿಸಿದರು. ದುರ್ಬಲ ವರ್ಗಗಳಿಗೆ ತ್ವರಿತ, ಸಮಯೋಚಿತ ಮತ್ತು ಉದ್ದೇಶಿತ ನೆರವು ನೀಡಲು ಭಾರತ ಸರ್ಕಾರ ಕೈಗೊಂಡ ಕ್ರಮಗಳನ್ನು ಅವರು ತಮ್ಮ ಜಿ 20 ಸಹವರ್ತಿಗಳೊಂದಿಗೆ ಹಂಚಿಕೊಂಡರು. ಇಲ್ಲಿಯವರೆಗೆ, ಒಂದೆರಡು ವಾರಗಳಲ್ಲಿಯೇ, ಭಾರತವು 320 ದಶಲಕ್ಷಕ್ಕೂ ಹೆಚ್ಚಿನ ಜನರಿಗೆ 3.9 ಶತಕೋಟಿ ಡಾಲರ್ಗಳಷ್ಟು ಹಣಕಾಸಿನ ಸಹಾಯವನ್ನು ವಿತರಿಸಿದೆ, ಡಿಜಿಟಲ್ ತಂತ್ರಜ್ಞಾನದ ಮೂಲಕ ನೇರ ಲಾಭ ವರ್ಗಾವಣೆಯ ಬಗ್ಗೆ ವಿಶೇಷ ಗಮನಹರಿಸಿದೆ, ಇದರಿಂದಾಗಿ ಫಲಾನುಭವಿಗಳು ಸಾರ್ವಜನಿಕ ಸ್ಥಳಗಳಗೆ ಬರುವುದನ್ನು ಕಡಿಮೆ ಮಾಡಲಾಗಿದೆ ಎಂದು ತಿಳಿಸಿದರು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614845

ಕಡಿಮೆ ಅವಧಿಯಲ್ಲಿ ಔಷಧಿಗಳ ಲಭ್ಯತೆ/ ಉತ್ಪಾದನೆ ಪ್ರಮಾಣ ಹೆಚ್ಚಿಸಲು, ಪರಿಸರ ಪ್ರಭಾವ ಮೌಲ್ಯಮಾಪನ (ಇಐಎ) 2006 ಅಧಿಸೂಚನೆಯಲ್ಲಿ ಪ್ರಮುಖ ತಿದ್ದುಪಡಿ

ನೊವೆಲ್ ಕೊರೊನಾ ವೈರಸ್ (ಕೊವಿಡ್-19) ಜಾಗತಿಕ ಸ್ಫೋಟದಿಂದ ಎದುರಾಗುತ್ತಿರುವ ಅನಿರೀಕ್ಷಿತ ಪರಿಸ್ಥಿತಿಯನ್ನು ಎದುರಿಸಲು ಮತ್ತು ಹಲವಾರು ಔಷಧಿಗಳ ಲಭ್ಯತೆ ಮತ್ತು ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲು, 2006 ಇಐಎ ಅಧಿಸೂಚನೆಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, 27 ಮಾರ್ಚ್ 2020 ರಂದು ತಿದ್ದುಪಡಿ ಮಾಡಿದೆ. ವಿವಿಧ ರೋಗಗಳನ್ನು ತಡೆಗಟ್ಟಲು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವ ಔಷಧಿಗಳು ಮತ್ತು ಮಾರಾಟಗಾರರಿಗೆ ಸಂಬಂಧಿಸಿದ ಎಲ್ಲಾ ಯೋಜನೆಗಳು ಅಥವಾ ಚಟುವಟಿಕೆಗಳನ್ನು ಈಗಿರುವ ವರ್ಗದಿಂದಬಿ2’ ವರ್ಗಕ್ಕೆ ಮರುವರ್ಗೀಕರಿಸಲಾಗಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614813

ನಾವು ಗೆಲ್ಲುತ್ತೇವೆ, ನಾವು ಖಂಡಿತಾ ಸೋಂಕನ್ನು ಸೋಲಿಸುತ್ತೇವೆ” – ಡಾ. ಹರ್ಷವರ್ಧನ್

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತದಲ್ಲಿ ಕೋವಿಡ್-19 ನಿಯಂತ್ರಣ ಕುರಿತಂತೆ ಕೈಗೊಂಡಿರುವ ಕ್ರಮಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಕ್ಷೇತ್ರಾಧಿಕಾರಿಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆರೋಗ್ಯಾಧಿಕಾರಿಗಳೊಂದಿಗೆ ಸಂವಾದ ನಡೆಸಿದರು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614833

ಮಾರ್ಚ್, 2020 ವೇತನ ತಿಂಗಳ ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ (ಇಸಿಆರ್) ಸಲ್ಲಿಸುವ ದಿನಾಂಕ 15.04.2020 ರಿಂದ 15.05.2020 ರವರೆಗೆ ವಿಸ್ತರಣೆ

ಕೋವಿಡ್ -19 ಸೃಷ್ಟಿಸಿರುವ ಪರಿಸ್ಥಿತಿ ಮತ್ತು ಕೋವಿಡ್ -19 ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು 24.03.2020 ಮಧ್ಯರಾತ್ರಿಯಿಂದ ಘೋಷಿಸಿರುವ ಲಾಕ್ಡೌನ್ ಅನ್ನು ಪರಿಗಣಿಸಿ, ಮಾರ್ಚ್ನಲ್ಲಿ ತಮ್ಮ ಉದ್ಯೋಗಿಗಳಿಗೆ ವೇತನ ಪಾವತಿಸಿದ ಉದ್ಯೋಗದಾತರಿಗೆ 2020 ಮಾರ್ಚ್ ತಿಂಗಳಿಗೆ ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ (ಇಸಿಆರ್) ಸಲ್ಲಿಸುವ ದಿನಾಂಕ ವನ್ನು 15.05.2020 ರವರೆಗೆ ವಿಸ್ತರಿಸಲಾಗಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614747

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಕಂಟೋನ್ಮೆಂಟ್ ಮಂಡಳಿಗಳ ಪ್ರಯತ್ನಗಳನ್ನು ಪರಿಶೀಲಿಸಿದ ರಕ್ಷಣಾ ಸಚಿವರು

ಕೊರೊನಾವೈರಸ್ (ಕೋವಿಡ್ -19) ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಇರುವ 62 ಕಂಟೋನ್ಮೆಂಟ್ ಬೋರ್ಡ್ಗಳು ಕೈಗೊಂಡ ಕ್ರಮಗಳನ್ನು ರಕ್ಷಣಾ ಸಚಿವ ಶ್ರೀರಾಜನಾಥ್ ಸಿಂಗ್ ಇಂದು ಪರಿಶೀಲಿಸಿದರು. ಕಂಟೋನ್ಮೆಂಟ್ ಬೋರ್ಡ್ಗಳು ನಿರ್ದಿಷ್ಟವಾಗಿ ಜನದಟ್ಟಣೆಯ ನಾಗರಿಕ ಪ್ರದೇಶಗಳಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆ ಮತ್ತು ಧೂಮೀಕರಣದ ಉನ್ನತ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಶ್ರೀ ರಾಜನಾಥ್ ಸಿಂಗ್ ಒತ್ತಿ ಹೇಳಿದರು. ವಲಸಿಗರು / ದಿನಗೂಲಿಯವರು, ದುರ್ಬಲ ವರ್ಗದವರಿಗೆ ಆಹಾರ ಮತ್ತು ಆಶ್ರಯ ಒದಗಿಸಲು ವಿಶೇಷ ಕಾಳಜಿ ವಹಿಸಬೇಕು ಎಂದು ಅವರು ಒತ್ತಿ ಹೇಳಿದರು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1615018

ಖಾರಿಫ್ ಬೆಳೆಗಳ ರಾಷ್ಟ್ರೀಯ ಸಮ್ಮೇಳನ  2020 ಅಧ್ಯಕ್ಷತೆ ವಹಿಸಿದ ಕೃಷಿ ಸಚಿವರು

ಎಲ್ಲಾ ರಾಜ್ಯಗಳು ಖಾರಿಫ್ ಬೆಳೆಯ ಗುರಿಯನ್ನು ಸಾಧಿಸಬೇಕು ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುವುದನ್ನು ಅಭಿಯಾನ ಮಾದರಿಯಲ್ಲಿ ತೆಗೆದುಕೊಳ್ಳಬೇಕು ಎಂದು ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. 2020 ಖಾರಿಫ್ ಬೆಳೆಗಳ ಕುರಿತ ರಾಷ್ಟ್ರೀಯ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯಗಳು ಎದುರಿಸುತ್ತಿರುವ ಯಾವುದೇ ಅಡೆತಡೆಗಳನ್ನು ಭಾರತ ಸರ್ಕಾರ ಬಗೆಹರಿಸುತ್ತದೆ ಎಂದು ರಾಜ್ಯಗಳಿಗೆ ಭರವಸೆ ನೀಡಿದರು. ಲಾಕ್ ಡೌನ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಖಾರಿಫ್ ಕೃಷಿಗೆ ಸಿದ್ಧತೆಗಳ ಬಗ್ಗೆ ಚರ್ಚಿಸುವುದು ಮತ್ತು ರಾಜ್ಯಗಳೊಂದಿಗೆ ಸಮಾಲೋಚಿಸಿ ಕ್ರಮಗಳನ್ನು ಪಟ್ಟಿ ಮಾಡುವುದು ರಾಷ್ಟ್ರೀಯ ಖಾರಿಫ್ ಸಮ್ಮೇಳನದ ಮುಖ್ಯ ಗುರಿಯಾಗಿತ್ತು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614994

ಲಾಕ್ ಡೌನ್ ಸಮಯದಲ್ಲಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳನ್ನು ಉತ್ತೇಜಿಸಲು ಕೃಷಿ, ಸಹಕಾರ ಮತ್ತು ರೈತ ಕಲ್ಯಾಣ ಇಲಾಖೆಯ ಉಪಕ್ರಮಗಳ ಸ್ಥಿತಿಯನ್ನು ಅಪ್ ಡೇಟ್ ಮಾಡಲಾಗಿದೆ

ಅಖಿಲ ಭಾರತ ಕೃಷಿ ಸಾರಿಗೆ ಕರೆ ಕೇಂದ್ರವನ್ನು ಪ್ರಾರಂಭಿಸಲಾಗಿದೆ; ಪಿಎಂಎಫ್ಬಿವೈ ವಿಮಾ ಕ್ಲೈಮುಗಳ ಅಡಿಯಲ್ಲಿ 12 ರಾಜ್ಯಗಳ ರೈತರಿಗೆ 2424 ಕೋ.ರೂ. ವಿತರಿಸಲಾಗಿದೆ: ಕೆಸಿಸಿ ಸ್ಯಾಚುರೇಶನ್ ಡ್ರೈವ್ ಅಡಿಯಲ್ಲಿ 17,800 ಕೋಟಿ ರೂ. ಮೌಲ್ಯದ ಸಾಲಗಳಿಗೆ 18.26 ಲಕ್ಷ ಅರ್ಜಿಗಳನ್ನು ಅನುಮೋದಿಸಲಾಗಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614807

ದೇಶದಲ್ಲಿ ರಸಗೊಬ್ಬರಗಳ ಉತ್ಪಾದನೆ, ಚಲನೆ ಮತ್ತು ಲಭ್ಯತೆಯನ್ನು ರಸಗೊಬ್ಬರಗಳ ಇಲಾಖೆಯು ಸೂಕ್ಷ್ಮವಾಗಿ ಗಮನಿಸುತ್ತಿದೆ

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾಗಿರುವವ ಪರಿಸ್ಥಿತಿಯನ್ನು ಎದುರಿಸಲು, ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಶ್ರೀ ಡಿ ವಿ ಸದಾನಂದಗೌಡ, ರಾಜ್ಯ ಸಚಿವ ಶ್ರೀ ಮನ್ ಸುಖ್ ಮಾಂಡವೀಯಾ ಮತ್ತು ರಸಗೊಬ್ಬರ ಇಲಾಖೆಯ ಕಾರ್ಯದರ್ಶಿ ಶ್ರೀಚಾಬೀಲೇಂದ್ರ ರೌಲ್ ಅವರು ರಸಗೊಬ್ಬರಗಳ ಉತ್ಪಾದನೆ ಮತ್ತು ವಿತರಣಾ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಪರಿಶೀಲಿಸುತ್ತಿದ್ದಾರೆ. ಇಲಾಖೆಯಲ್ಲಿ ಉನ್ನತ ಮಟ್ಟದ ಕ್ರಮಗಳು ಭಾರತದಾದ್ಯಂತ ರೈತರಿಗೆ ಅಗತ್ಯವಾದ ರಸಗೊಬ್ಬರಗಳ ಲಭ್ಯತೆಯನ್ನು ಖಾತ್ರಿಪಡಿಸುತ್ತಿವೆ. ಉತ್ಪಾದನೆ ಮತ್ತು ಪೂರೈಕೆ ಸರಪಳಿಯಲ್ಲಿನ ಯಾವುದೇ ಸಮಸ್ಯೆಯನ್ನು ಎದುರಿಸಲು ಇಲಾಖೆಯಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614989

ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಪವಿತ್ರ ರಂಜಾನ್ ತಿಂಗಳಲ್ಲಿ ಲಾಕ್ ಡೌನ್, ಕರ್ಫ್ಯೂ ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಮತ್ತು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವಂತೆ  ಶ್ರೀ ಮುಖ್ತಾರ್ ಅಬ್ಬಾಸ್ ನಖ್ವಿ ರಾಜ್ಯ ವಕ್ಫ್ ಮಂಡಳಿಗಳಿಗೆ ನಿರ್ದೇಶನ ನೀಡಿದ್ದಾರೆ

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮತ್ತು ಕೇಂದ್ರ ವಕ್ಫ್ ಮಂಡಳಿ ಅಧ್ಯಕ್ಷ ಶ್ರೀ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಇಂದು 30 ಕ್ಕೂ ಹೆಚ್ಚು ರಾಜ್ಯ ವಕ್ಫ್ ಮಂಡಳಿಗಳ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಲಾಕ್ ಡೌನ್, ಕರ್ಫ್ಯೂ ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಮತ್ತು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವಂತೆ ನಿರ್ದೇಶಿಸಿದರು. ಪವಿತ್ರ ರಂಜಾನ್ ತಿಂಗಳು, ಏಪ್ರಿಲ್ 24 ರಿಂದ ಪ್ರಾರಂಭವಾಗಲಿದೆ. 7 ಲಕ್ಷಕ್ಕೂ ಹೆಚ್ಚು ನೋಂದಾಯಿತ ಮಸೀದಿಗಳು, ಈದ್ಗಾ, ಇಮಾಂಬಾಡಾ, ದರ್ಗಾ ಮತ್ತು ಇತರ ಧಾರ್ಮಿಕ, ಸಾಮಾಜಿಕ ಸಂಸ್ಥೆಗಳು ದೇಶಾದ್ಯಂತ ರಾಜ್ಯ ವಕ್ಫ್ ಮಂಡಳಿಗಳ ಅಡಿಯಲ್ಲಿ ಬರುತ್ತವೆ. ಕೇಂದ್ರ ವಕ್ಫ್ ಮಂಡಳಿಯು ದೇಶದ ರಾಜ್ಯ ವಕ್ಫ್ ಮಂಡಳಿಗಳ ನಿಯಂತ್ರಕ ಸಂಸ್ಥೆಯಾಗಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614969

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವ ಶ್ರೀ ಕೈಲಾಶ್ ಚೌಧರಿಯವರು ಪೂಸಾದಲ್ಲಿ  ಸೋಂಕು ನಿವಾರಕ ಮತ್ತು ನೈರ್ಮಲ್ಯ ಸುರಂಗವನ್ನು ಉದ್ಘಾಟಿಸಿದರು

ನವದೆಹಲಿಯ ಐಸಿಎಆರ್- ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಎಂಜಿನಿಯರಿಂಗ್ ವಿಭಾಗವು ಅಭಿವೃದ್ಧಿಪಡಿಸಿದ ಸೋಂಕು ನಿವಾರಕ  ಮತ್ತು ನೈರ್ಮಲ್ಯ ಸುರಂಗವನ್ನು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ಶ್ರೀಕೈಲಾಶ್ ಚೌಧರಿ ಅವರು ಇಂದು ಪೂಸಾದಲ್ಲಿ ಉದ್ಘಾಟಿಸಿದರು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1615005

ಶಾಲೆಗಳಿಗೆ ಎನ್ಸಿಇಆರ್ಟಿಯ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಮಾಡಿದ ಕೇಂದ್ರ ಮಾನವ ಸಂಪನ್ಮೂಲ ಸಚಿವರು

ಕೋವಿಡ್-19 ಕಾರಣದಿಂದಾಗಿ ವಿದ್ಯಾರ್ಥಿಗಳು ತಮ್ಮ ಪೋಷಕರು ಮತ್ತು ಶಿಕ್ಷಕರ ಸಹಾಯದಿಂದ ಮನೆಯಲ್ಲಿಯೇ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಮನೆಯಲ್ಲಿ ಇರುವ ಸಮಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲು, ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಮಾನವ ಸಂಪನ್ಮೂಲ ಸಚಿವಾಲಯದ ಮಾರ್ಗದರ್ಶನದಲ್ಲಿ ಎನ್ಸಿಇಆರ್ಟಿ ಅಭಿವೃದ್ಧಿಪಡಿಸಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1615009

ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಶೈಕ್ಷಣಿಕ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಕಾಲೇಜುಗಳು / ಸಂಸ್ಥೆಗಳಿಗೆ ಎಐಸಿಟಿಇಯಿಂದ ಸೂಚನೆ

ಎಐಸಿಟಿಇ, ಕಾಲೇಜುಗಳು / ಸಂಸ್ಥೆಗಳಿಗೆ ಕೆಲವು ಸೂಚನೆಗಳನ್ನು ನೀಡಿದೆ. COVID-19 ರಿಂದ ಉಂಟಾಗಿರುವ ಬೆದರಿಕೆಯ ಸಮಯದಲ್ಲಿ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಖಾತರಿಪಡಿಸುವುದು ಭಾರತದ ಎಲ್ಲಾ ನಾಗರಿಕರ ಮೂಲಭೂತ ಜವಾಬ್ದಾರಿಯಾಗಿದೆ ಎಂದು ನಿರ್ದೇಶನ ನೀಡಿದೆ. ಬಿಕ್ಕಟ್ಟಿನ ಸಮಯದಲ್ಲಿ ಕಾಲೇಜುಗಳು / ಸಂಸ್ಥೆಗಳು ಲಾಕ್ಡೌನ್ ಅನ್ನು ತೆಗೆದುಹಾಕುವವರೆಗೆ ಮತ್ತು ಸಾಮಾನ್ಯ ಸ್ಥಿತಿಯನ್ನು ಪುನಃಸ್ಥಾಪಿಸುವವರೆಗೆ ಶುಲ್ಕವನ್ನು ಪಾವತಿಸುವಂತೆ ಒತ್ತಾಯಿಸಬಾರದು ಎಂದು ನಿರ್ದೇಶಿಸಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1615009

ಎಸ್ಎಸ್ಸಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಸಾಮಾಜಿಕ ಅಂತರದ ಮಾನದಂಡಗಳು ಸೇರಿದಂತೆ ಚಾಲ್ತಿಯಲ್ಲಿರುವ ಲಾಕ್ಡೌನ್ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು, ದೇಶದ ಎಲ್ಲಾ ಭಾಗಗಳಿಂದ ಅಭ್ಯರ್ಥಿಗಳು ಪ್ರಯಾಣಿಸಬೇಕಾಗಿರುವುದರಿಂದ ಎಲ್ಲಾ ಪರೀಕ್ಷೆಗಳ ದಿನಾಂಕಗಳನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುವುದು ಎಂದು ಎಸ್ಎಸ್ಸಿ ತಿಳಿಸಿದೆ. ಪರೀಕ್ಷೆಗಳ ಮರು ನಿಗದಿಪಡಿಸಿದ ದಿನಾಂಕಗಳನ್ನು ಆಯೋಗದ ವೆಬ್ಸೈಟ್ಗಳು ಮತ್ತು ಆಯೋಗದ ಪ್ರಾದೇಶಿಕ / ಉಪ-ಪ್ರಾದೇಶಿಕ ಕಚೇರಿಗಳಲ್ಲಿ ತಿಳಿಸಲಾಗುತ್ತದೆ. ಆಯೋಗವು ಅಧಿಸೂಚಿಸಿರುವ ಪರೀಕ್ಷೆಗಳ ವಾರ್ಷಿಕ ಕ್ಯಾಲೆಂಡರ್ ಅನ್ನು ಇತರ ಪರೀಕ್ಷೆಗಳ ವೇಳಾಪಟ್ಟಿಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಲಾಗುತ್ತದೆ. ಇದಲ್ಲದೆ, ಎಸ್ಎಸ್ಸಿಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಪಿಎಂ ಕೇರ್ಸ್ ನಿಧಿಗೆ ಒಂದು ದಿನದ ವೇತನವನ್ನು ನೀಡಲು ನಿರ್ಧರಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614933

ಕೋವಿಡ್ -19 ಲಾಕ್ಡೌನ್ ಅವಧಿಯಲ್ಲಿ ಹಿರಿಯ ನಾಗರಿಕರು ಮತ್ತು ಅವರನ್ನು ಪಾಲನೆ ಮಾಡುವವರಿಗೆ ಸಲಹೆಗಳು

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1615006

ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್-19 ಹರಡುವಿಕೆ ನಿಗ್ರಹಿಸಲು ದೇಶದ ಗ್ರಾಮ ಪಂಚಾಯಿತಿಗಳು ಸಕ್ರಿಯ ಕ್ರಮಗಳನ್ನು ಕೈಗೊಂಡಿವೆ

ಸಾರ್ವಜನಿಕ ಸ್ಥಳಗಳ ದೈನಂದಿನ ನೈರ್ಮಲ್ಯೀಕರಣ; ನಿರ್ಗತಿಕ ವ್ಯಕ್ತಿಗಳು ಮತ್ತು ವಲಸಿಗರಿಗೆ ಆಶ್ರಯ ಮತ್ತು ಕ್ವಾರಂಟೈನ್ ಸೌಲಭ್ಯ; ಅಗತ್ಯವಿರುವವರಿಗೆ ರಕ್ಷಣಾತ್ಮಕ ಸಾಧನ, ಹಣಕಾಸಿನ ನೆರವು ಮತ್ತು ಆಹಾರ / ಪಡಿತರವನ್ನು ಒದಗಿಸುವುದು ಹಾಗೂ ರೋಗದ ಬಗ್ಗೆ ಜಾಗೃತಿ ಮೂಡಿಸುವುದು ಜಿಲ್ಲಾ ಮತ್ತು ಗ್ರಾಮ ಮಟ್ಟದಲ್ಲಿ ನಡೆಯುತ್ತಿರುವ ವಿವಿಧ ಕ್ರಮಗಳಲ್ಲಿ ಸೇರಿವೆ

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614907

ಕೋವಿಡ್-19 ಹರಡುವಿಕೆಯ ನಿರ್ದಿಷ್ಟ ಪ್ರದೇಶದ ತಂತ್ರಗಳು ಮತ್ತು ನಿರ್ಧಾರಗಳಿಗೆ ಸಹಾಯ ಮಾಡಲು ಸಂಯೋಜಿತ ಜಿಯೋಸ್ಪೇಷಿಯಲ್ ಪ್ಲಾಟ್ಫಾರ್ಮ್

ಕೋವಿಡ್19 ಹರಡುವಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಕ್ಕಾಗಿ ಸಹಾಯ ಮಾಡಲು ಮತ್ತು ಚೇತರಿಕೆಯ ಹಂತದಲ್ಲಿ ಸಾಮಾಜಿಕ ಆರ್ಥಿಕ ಪರಿಣಾಮವನ್ನು ನಿಭಾಯಿಸಲು ನಿರ್ದಿಷ್ಟ ತಂತ್ರಗಳಿಗೆ ನೆರವಾಗಲು, ಲಭ್ಯವಿರುವ ನಿರ್ದಿಷ್ಟ ಸ್ಥಳದ ಮಾಹಿತಿಗೆ ಸಂಬಂಧಿಸಿದ ಜಿಯೋಸ್ಪೇಷಿಯಲ್ ದತ್ತಾಂಶಗಳು,ಮಾನದಂಡ ಆಧಾರಿತ ಸೇವೆಗಳು ಮತ್ತು ವಿಶ್ಲೇಷಣಾತ್ಮಕ ಪರಿಕರಗಳಿಂದ ಸಮಗ್ರ ಜಿಯೋಸ್ಪೇಷಿಯಲ್ ಪ್ಲಾಟ್ಫಾರ್ಮ್ ಅನ್ನು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ) ಸಿದ್ಧಪಡಿಸಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614808

ಡಿಆರ್ಡಿಒ ಪಿಪಿಇ ಪರೀಕ್ಷಾ ಸೌಲಭ್ಯವನ್ನು ಡಿಆರ್ಡಿಇ ಗ್ವಾಲಿಯರ್ನಿಂದ ಐಎನ್ಎಂಎಎಸ್ ದೆಹಲಿಗೆ ಸ್ಥಳಾಂತರಿಸಿದೆ

ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಮತ್ತು ಮುಖಗವಸುಗಳ ವಲೇವಾರಿಯ ವಿಳಂಬ ತಪ್ಪಿಸಲು ಮತ್ತು ತ್ವರಿತ ವಿತರಣೆಯನ್ನು ಖಚಿತಪಡಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್ಡಿಒ) ಗ್ವಾಲಿಯರ್ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಇ) ಪರೀಕ್ಷಾ ಸೌಲಭ್ಯವನ್ನು ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ (ಐಎನ್ಎಎಂಎಎಸ್) ಗೆ ಸ್ಥಳಾಂತರಿಸಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1615019

ಪ್ರವಾಸೋದ್ಯಮ ಸಚಿವಾಲಯವು ತನ್ನ ಎರಡನೇ ವೆಬಿನಾರ್ ಅನ್ನು ಇಂದು "ದೇಖೋ ಅಪ್ನಾ ದೇಶ್" ವೆಬಿನಾರ್ ಸರಣಿಯಡಿಯಲ್ಲಿ ಆಯೋಜಿಸಿದೆ

ಭಾರತೀಯರು ತಮ್ಮ ದೇಶವನ್ನು ಅನ್ವೇಷಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಮತ್ತು ಪ್ರವಾಸೋದ್ಯಮ ಕ್ಷೇತ್ರದ ವಿವಿಧ ಅಂಶಗಳಾದ ಪ್ರವಾಸೋದ್ಯಮ, ವಿದ್ಯಾರ್ಥಿಗಳು, ಸಾರ್ವಜನಿಕರು, ಇತ್ಯಾದಿಗಳಲ್ಲಿ ಪಾಲುದಾರರ ಜ್ಞಾನವನ್ನು ಶ್ರೀಮಂತಗೊಳಿಸುವ ಉದ್ದೇಶದಿಂದ ಪ್ರವಾಸೋದ್ಯಮ ಸಚಿವಾಲಯವು 'ದೇಖೋ ಅಪ್ನಾ ದೇಶ್' ಎಂಬ ವಿಷಯದ ಅಡಿಯಲ್ಲಿ ವೆಬಿನಾರ್ಗಳ ಸರಣಿಯನ್ನು ಆಯೋಜಿಸುತ್ತಿದೆ,

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1615015

ಸಿಪಿಎಸ್ಯು ಎನ್ಟಿಪಿಸಿ ತನ್ನ ಎಲ್ಲಾ 45 ಆಸ್ಪತ್ರೆಗಳು/ ಆರೋಗ್ಯ ಘಟಕಗಳನ್ನು ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳುತ್ತಿದೆ

ದೆಹಲಿ ಮತ್ತು ಒಡಿಶಾದಲ್ಲಿ ಕೋವಿಡ್ ಪ್ರಕರಣಗಳನ್ನು ನಿಭಾಯಿಸಲು ಪಿಎಸ್ಯು ಎರಡು ಆಸ್ಪತ್ರೆಗಳನ್ನು ರಾಜ್ಯ ಸರ್ಕಾರಗಳಿಗೆ ಮೀಸಲಿಟ್ಟಿದೆ. ಮಹಾರತ್ನ ಪಿಎಸ್ಯು ಕೋವಿಡ್ -19 ಸಾಂಕ್ರಾಮಿಕ ನಿಭಾವಣೆಗೆ 160 ಪ್ರತ್ಯೇಕ ಹಾಸಿಗೆಗಳನ್ನು ಸಜ್ಜುಗೊಳಿಸಿದೆ. ಇನ್ನೂ 122 ಹಾಸಿಗೆಗಳನ್ನು ಸಿದ್ಧಪಡಿಸುತ್ತಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614995

ಜೂಮ್ (ZOOM) ಮೀಟಿಂಗ್ ಪ್ಲಾಟ್ಫಾರ್ಮ್ ಸುರಕ್ಷಿತ ಬಳಕೆಯ ಬಗ್ಗೆ ಗೃಹ ಸಚಿವಾಲಯದ  ಸಲಹೆ

ಕೇಂದ್ರ ಗೃಹ ಸಚಿವಾಲಯದ (ಎಂಎಚ್) ಅಡಿಯಲ್ಲಿರುವ ಸೈಬರ್ ಸಮನ್ವಯ ಕೇಂದ್ರ (CyCord) ಖಾಸಗಿ ವ್ಯಕ್ತಿಗಳು ಜೂಮ್ ಮೀಟಿಂಗ್ ಪ್ಲಾಟ್ಫಾರ್ಮ್ ಅನ್ನು ಸುರಕ್ಷಿತವಾಗಿ ಬಳಸುವುದರ ಕುರಿತು ಸಲಹೆಗಳನ್ನು ನೀಡಿದೆ. ವೇದಿಕೆಯನ್ನು ಸರ್ಕಾರಿ ಅಧಿಕಾರಿಗಳು ಅಧಿಕೃತ ಉದ್ದೇಶಗಳಿಗಾಗಿ ಬಳಸುವಂತಿಲ್ಲ ಎಂದು ಇದರಲ್ಲಿ  ಹೇಳಲಾಗಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1615008

 

ಪಿಐಬಿ ಕ್ಷೇತ್ರ ಕಚೇರಿಗಳ ವರದಿಗಳು

  • ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶವು ಪಿಎಂಜಿಕೆಎ ಅಡಿಯಲ್ಲಿ ವಿತರಣೆಗಾಗಿ ಕೇಂದ್ರ ಸರ್ಕಾರದಿಂದ ಸುಮಾರು 12,361 ಮೆ.ಟನ್ ಅಕ್ಕಿಯನ್ನು ಪಡೆದಿದೆ.
  • ಅಸ್ಸಾಂ: ಲಾಕ್ಡೌನ್ ಮಧ್ಯೆ ತರಗತಿಗಳ ನಷ್ಟವನ್ನು ಸರಿದೂಗಿಸಲು ಗುವಾಹಟಿ ವಿಶ್ವವಿದ್ಯಾಲಯವು ವಿಶ್ವವಿದ್ಯಾಲಯ ಮತ್ತು ಇತರ ಕಾಲೇಜುಗಳಿಗೆ ಬರುವ ಬೇಸಿಗೆ ರಜೆಯನ್ನು ರದ್ದುಪಡಿಸಿದೆ.
  • ಮಣಿಪುರ: ರಾಜ್ಯದ ಹೊರಗೆ ಸಿಲುಕಿರುವ 3771 ಜನರಿಗೆ ಡಿಬಿಟಿ ಮೂಲಕ ತಲಾ 2000 ರೂ. ಒದಗಿಸಲಾಗಿದೆ. ಉಳಿದ ಸುಮಾರು 11,000 ಮಂದಿ ಎರಡು ಮೂರು ದಿನಗಳಲ್ಲಿ ಹಣ ಸ್ವೀಕರಿಸಲಿದ್ದಾರೆ ಎಂದು ಮುಖ್ಯಂತ್ರಿ ಹೇಳಿದ್ದಾರೆ.
  • ನಾಗಾಲ್ಯಾಂಡ್: ರಾಜ್ಯಾದ್ಯಂತ ಕೆಲಸದ ಸ್ಥಳಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಮತ್ತು ನೈರ್ಮಲ್ಯಕಾರರ ಲಭ್ಯತೆಯನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ.
  • ತ್ರಿಪುರ: ಎರಡನೇ ರೋಗಿಯ ಒಟ್ಟು 16 ಹೆಚ್ಚಿನ ಅಪಾಯದ ನಿಕಟ ಸಂಪರ್ಕಗಳ ಪರೀಕ್ಷೆಯ ಫಲಿತಾಂಶ ನಕಾರಾತ್ಮಕವಾಗಿದೆ.
  • ಮಹಾರಾಷ್ಟ್ರ: ಕೋವಿಡ್- 19 ಪಾಸಿಟಿವ್ ಪ್ರಕರಣಗಳ ಸಂಖ್ಯೆ 3,000 ದಾಟಿದ ಭಾರತದ ಮೊದಲ ರಾಜ್ಯ ಮಹಾರಾಷ್ಟ್ರ. ಇಂದು 165 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ. ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 3081 ಕ್ಕೆ ಏರಿದೆ. ಹೊಸ ಪ್ರಕರಣಗಳಲ್ಲಿ 107 ಪ್ರಕರಣಗಳು ಮುಂಬೈನಿಂದ ಮತ್ತು 19 ಪುಣೆಯಿಂದ ವರದಿಯಾಗಿವೆ. ಏತನ್ಮಧ್ಯೆ, ಕೊರೊನಾವೈರಸ್ ಸವಾಲನ್ನು ಎದುರಿಸಲು ರಾಜ್ಯ ಸರ್ಕಾರವು ಆರೋಗ್ಯ, ವಲಸಿಗರು, ಆರ್ಥಿಕತೆ, ಕೃಷಿ ಮತ್ತು ದಿನನಿತ್ಯದ ಆಡಳಿತವನ್ನು ಒಳಗೊಂಡ ಐದು ಸುತ್ತಿನ ಕ್ರಿಯಾ ಯೋಜನೆಯನ್ನು ಪ್ರಾರಂಭಿಸಿದೆ.
  • ಗುಜರಾತ್: 105 ಜನರು ಸೋಂಕು ಪರೀಕ್ಷೆ ಪಾಸಿಟಿವ್ ಬಂದ ನಂತರ ಗುಜರಾತ್ನಲ್ಲಿ ಒಟ್ಟು ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 871 ಕ್ಕೆ ಏರಿದೆ. ಹೊಸ ಪ್ರಕರಣಗಳಲ್ಲಿ 42 ಪ್ರಕರಣಗಳು ಅಹಮದಾಬಾದ್ನಿಂದ ಮತ್ತು 35 ಸೂರತ್ನಿಂದ ವರದಿಯಾಗಿವೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 36 ಆಗಿದೆ.
  • ರಾಜಸ್ಥಾನ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ರಾಜಸ್ಥಾನದಲ್ಲಿ 18 ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದ ರಾಜಸ್ಥಾನದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 1,023 ಕ್ಕೆ ಏರಿದೆ. ಮಹಾರಾಷ್ಟ್ರ, ದೆಹಲಿ ಮತ್ತು ತಮಿಳುನಾಡಿನ ನಂತರದ ನಾಲ್ಕನೇ ಸ್ಥಾನದಲ್ಲಿ ರಾಜಸ್ತಾನವಿದೆ.
  • ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಒಟ್ಟು ಕೋವಿಡ್ 19 ಪ್ರಕರಣಗಳ ಸಂಖ್ಯೆ 980 ಕ್ಕೆ ಏರಿಕೆಯಾಗಿದ್ದು, ಇಂದೋರ್ಒಂದರಲ್ಲಿಯೇ 42 ಜನರ ಪರೀಕ್ಷೆ ಪಾಸಿಟಿವ್ ಬಂದಿದೆ. ನಗರದಲ್ಲಿ ಇಲ್ಲಿಯವರೆಗೆ 586 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ರಾಜ್ಯದ ಸಂಭವಿಸಿರುವ 55 ಸಾವುಗಳಲ್ಲಿ 39 ಸಾವುಗಳು ಇಂದೋರ್ ನಲ್ಲಾಗಿವೆ.
  • ಗೋವಾ: ಏಪ್ರಿಲ್ 4 ರಿಂದ ಗೋವಾದಲ್ಲಿ ಯಾವುದೇ ಹೊಸ ಕೋವಿಡ್- 19 ಪ್ರಕರಣಗಳು ವರದಿಯಾಗಿಲ್ಲ, ಪಶ್ಚಿಮ ಕರಾವಳಿ ರಾಜ್ಯವು ಶೀಘ್ರದಲ್ಲೇ ಕರೋನಾ ಮುಕ್ತವಾಗಲಿದೆ ಎಂದು ಆಶಿಸುತ್ತಿದೆ. ರಾಜ್ಯದ ಎರಡು ಜಿಲ್ಲೆಗಳ ಪೈಕಿ ದಕ್ಷಿಣ ಗೋವಾವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈಗಾಗಲೇ "ಹಸಿರು ವಲಯ" ಎಂದು ಘೋಷಿಸಿದೆ. ಉತ್ತರ ಗೋವಾದ 7 ಪಾಸಿಟಿವ್ ಪ್ರಕರಣಗಳಲ್ಲಿ ಐವರು ರೋಗಿಗಳು ಚೇತರಿಸಿಕೊಂಡಿದ್ದರೆ, ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
  • ಕೇರಳ: ಏಪ್ರಿಲ್ 20 ರಿಂದ ಕೃಷಿ ವಲಯ ಮತ್ತು ಸಾಂಪ್ರದಾಯಿಕ ಕೈಗಾರಿಕೆಗಳಾದ ನಾರು, ಗೋಡಂಬಿ, ಕರಕುಶಲ ಮತ್ತು ಬೀಡಿಗಳಿಗೆ ಲಾಕ್ಡೌನ್ ಮಾನದಂಡಗಳನ್ನು ಸಡಿಲಿಸಲಿದೆ. ವಲಯಗಳನ್ನುನ್ನು ಕೆಳಗಿನಂತೆ ಬದಲಾಯಿಸುವಂತೆ ರಾಜ್ಯವು ಕೇಂದ್ರವನ್ನು ಕೋರಿದೆ: ಕೆಂಪು ವಲಯ- ಕಾಸರಗೋಡು, ಕಣ್ಣೂರು, ಮಲಪ್ಪುರಂ ಮತ್ತು ಕೋಳಿಕೋಡ್; ವಯನಾಡ್ ಮತ್ತು ಕೊಟ್ಟಾಯಂ ಅನ್ನು ಹಸಿರು ವಲಯಕ್ಕೆ ಮತ್ತು ಉಳಿದ 8 ಜಿಲ್ಲೆಗಳನ್ನು ಆರೆಂಜ್ ವಲಯವೆಂದು ಘೋಷಿಸಲು ಕೇಳಿದೆ. ನಿನ್ನೆ ಕೇವಲ 1 ಪ್ರಕರಣ ವರದಿಯಾಗಿದೆ. 387 ಪಾಸಿಟಿವ್ ಪ್ರಕರಣಗಳ ಪೈಕಿ 218 ಮಂದಿ ಚೇತರಿಸಿಕೊಂಡಿದ್ದಾರೆ.
  • ತಮಿಳುನಾಡು: 32 ಕೋವಿಡ್ ರೋಗಿಗಳನ್ನು ತಿರುಚಿ ಆಸ್ಪತ್ರೆಯಿಂದ ನೆಗೆಟಿವ್ ಪರೀಕ್ಷೆಯ ನಂತರ ಬಿಡುಗಡೆ ಮಾಡಲಾಗಿದೆ. 170 ಹಾಟ್ ಸ್ಪಾಟ್ಗಳ ಪಟ್ಟಿಯಲ್ಲಿ 22 ಜಿಲ್ಲೆಗಳೊಂದಿಗೆ ರಾಜ್ಯ ಅಗ್ರಸ್ಥಾನದಲ್ಲಿದೆ. ಒಟ್ಟು ಪ್ರಕರಣಗಳು 1242; ದೆಹಲಿ ಘಟನೆ ಗೆ ಸಂಬಂಧಿಸಿದ ಪ್ರಕರಣಗಳು 1113; ಸಾವುಗಳು 12; ಡಿಸ್ಚಾರ್ಜ್ 118.
  • ಕರ್ನಾಟಕ: ಬೆಂಗಳೂರು ನಗರದಲ್ಲಿ ಬಿಬಿಎಂಪಿ ಆರೋಗ್ಯ ಸಮೀಕ್ಷೆ ನಡೆಸಲಿದೆ. ಇಂದು 34 ಹೊಸ ಪ್ರಕರಣಗಳು ಮತ್ತು ಒಂದು ಸಾವು ವರದಿಯಾಗಿದೆ. ಇಂದು ವರದಿಯಾಗಿರುವ ಪ್ರರಣಗಳ ಪೈಕಿ ಅರ್ಧದಷ್ಟು ಅಂದರೆ 17 ಪ್ರಕರಣಗಳು ಬೆಳಗಾವಿಯಲ್ಲಿ ವರದಿಯಾಗಿವೆ. ಒಟ್ಟು ದೃಢಪಟ್ಟ ಪಾಸಿಟಿವ್ ಪ್ರಕರಣಗಳು 313; ಸಾವುಗಳು 13; ಸಕ್ರಿಯ ಪ್ರಕರಣಗಳು 187; 80 ಗುಣಮುಖ.
  • ಆಂಧ್ರಪ್ರದೇಶ: ಇಂದು 9 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳು 534 ಕ್ಕೆ ಏರಿವೆ; ಡಿಸ್ಚಾರ್ಜ್ 20; ಸಾವು 14; ಸಕ್ರಿಯ ಪ್ರಕರಣಗಳು 500. ಗುಂಟೂರು (122) ಮತ್ತು ಕರ್ನೂಲ್ (113) ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು. ಗುತ್ತಿಗೆ ಆಧಾರದ ಮೇಲೆ ವೈದ್ಯರನ್ನು ನೇಮಿಸಿಕೊಳ್ಳಲು ವಿಶೇಷ ನೇಮಕಾತಿ ಚಾಲನೆಗೆ ರಾಜ್ಯ ಅಧಿಸೂಚನೆ ಹೊರಡಿಸಿದೆ. ಗ್ರಾಹಕರಿಗೆ ಅಗತ್ಯ ವಸ್ತುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರೈತರ ಹಿತಾಸಕ್ತಿ ಕಾಪಾಡಲು, ರಾಜ್ಯವು ಅಸ್ತಿತ್ವದಲ್ಲಿರುವ 100 ಜೊತೆಗೆ 471 ತಾತ್ಕಾಲಿಕ ರೈತ ಬಜಾರ್ಗಳನ್ನು ಪ್ರಾರಂಭಿಸಲಿದೆ.
  • ತೆಲಂಗಾಣ: ಅಕ್ಕಿ, ಹಣ ಮತ್ತು ಇತರ ಅಗತ್ಯ ಸಾಮಗ್ರಿಗಳೊಂದಿಗೆ ಲಕ್ಷಾಂತರ ಬಡವರನ್ನು ತಲುಪಲು ಸಾಧ್ಯವಿದೆಯೇ ಎಂದು ಐದು ದಿನಗಳೊಳಗೆ ಉತ್ತರಿಸುವಂತೆ ತೆಲಂಗಾಣ ಸರ್ಕಾರವನ್ನು ಹೈಕೋರ್ಟ್ ಕೇಳಿದೆ. ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸುವವರ ವಿರುದ್ಧ ತ್ವರಿತ ದಂಡನಾ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಾಜ್ಯಕ್ಕೆ ನಿರ್ದೇಶನ ನೀಡಿದೆ. ಒಟ್ಟು ಪಾಸಿಟಿವ್ ಪ್ರಕರಣಗಳು ಈಗ 650; ಸಕ್ರಿಯ ಪ್ರಕರಣಗಳು 514; ಸಾವುಗಳು 18; ಡಿಸ್ಚಾರ್ಜ್ 118.
  • ಜಮ್ಮು ಮತ್ತು ಕಾಶ್ಮೀರ: ಕೇಂದ್ರಾಡಳಿತ ಪ್ರದೇಶದಿಂದ 14 ಹೊಸ ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವ್ ಕೋವಿಡ್ ಪ್ರಕರಣಗಳ ಸಂಖ್ಯೆ 314 ಕ್ಕೆ ಏರಿದೆ.

 

ಕೋವಿಡ್-19 ಕುರಿತ ವಾಸ್ತವದ ಪರಿಶೀಲನೆ

 

https://ci5.googleusercontent.com/proxy/UefGIR4j174EAQ7Rzm0zfuNHGXVEt7UNqJgHGc545scpjPFXTSDKjXMOZ2fddPNNTnxoTK2_T9rM5ttCXGfQ4Vbb7byt08U5YFbm9j5c8LOacpQNB8nS=s0-d-e1-ft#https://static.pib.gov.in/WriteReadData/userfiles/image/image005YDXK.jpg

ಸರ್ಕಾರವು ಹೆಲಿಕಾಪ್ಟರ್ ನಿಂದ ಹಣವನ್ನು ಚೆಲ್ಲುವುದಿಲ್ಲ

https://pbs.twimg.com/profile_banners/231033118/1584354869/1500x500

https://ci4.googleusercontent.com/proxy/tYja2iRNq19jz1MCrNu9An0SdDQbhLkJag6VZ3dFxXjiGJiFKCZ6KV1RGksrSVYf20YernvT07aQA_XSHTP8a7iPln7GRkIi7ilJ16chrQc65XvCpDwY=s0-d-e1-ft#https://static.pib.gov.in/WriteReadData/userfiles/image/image007S4PZ.jpg

https://ci4.googleusercontent.com/proxy/1zT4PM8vLJwVkX8vrt_8bmkvMXY5C9jRplNuwBZYzOW3QGGvImRg2_avqPlLGP9P0h5RVEdk3rgjrVG0yQ1yQWcvu8VHrghpC-3qVehQpBsKaitUCyZw=s0-d-e1-ft#https://static.pib.gov.in/WriteReadData/userfiles/image/image008YFKY.jpg

***



(Release ID: 1615236) Visitor Counter : 359