ಹಣಕಾಸು ಸಚಿವಾಲಯ
ಸಾಮಾಜಿಕ ಭದ್ರತಾ ರಕ್ಷಣಾ ವ್ಯಾಪ್ತಿಯನ್ನು ಒದಗಿಸಿ 11 ವರ್ಷ ಪೂರ್ಣಗೊಳಿಸಿದ ಮೂರು ಜನ ಸುರಕ್ಷಾ ಯೋಜನೆಗಳು - ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ ಬಿವೈ), ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಮತ್ತು ಅಟಲ್ ಪಿಂಚಣಿ ಯೋಜನೆ (ಎಪಿವೈ)
ಪಿಎಂಜೆಜೆಬಿವೈ ಅಡಿಯಲ್ಲಿ ಒಟ್ಟು 27.43 ಕೋಟಿಗೂ ಅಧಿಕ ನೋಂದಣಿ ನಡೆದಿವೆ ಮತ್ತು 29.04.2026 ರ ವೇಳೆಗೆ ರೂ. 21,512.50 ಕೋಟಿ ಮೊತ್ತ ಪಾವತಿ
ಪಿಎಂಎಸ್ ಬಿವೈ ಅಡಿಯಲ್ಲಿ ಒಟ್ಟು 58.09 ಕೋಟಿಗೂ ಅಧಿಕ ನೋಂದಣಿ ನಡೆದಿವೆ ಮತ್ತು ಅದೇ ಅವಧಿಯಲ್ಲಿ 1,84,662 ಕ್ಲೈಮ್ ಗಳಲ್ಲಿ 3,667.52 ಕೋಟಿ ಪಾವತಿ
30.04.2026 ರವರೆಗೆ, 9.04 ಕೋಟಿಗೂ ಅಧಿಕ ವ್ಯಕ್ತಿಗಳು ಎಪಿವೈ ಯೋಜನೆಗೆ ದಾಖಲು
ಪ್ರಕಟಣಾ ದಿನಾಂಕ:
09 MAY 2026 9:07AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2015ರ ಮೇ 9 ರಂದು ಆರಂಭಿಸಿದ ಜನಸುರಕ್ಷಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ ಬಿವೈ), ಮತ್ತು ಅಟಲ್ ಪಿಂಚಣಿ ಯೋಜನೆ (ಎಪಿವೈ) ಗಳನ್ನು ಎಲ್ಲರಿಗೂವಿಶೇಷವಾಗಿ ಸಮಾಜದ ಹಿಂದುಳಿದ ಮತ್ತು ದುರ್ಬಲ ವರ್ಗಗಳಿಗೆ ಕೈಗೆಟುಕುವ ಆರ್ಥಿಕ ರಕ್ಷಣೆಯನ್ನು ವಿಸ್ತರಿಸುವ ಗುರಿಯನ್ನು ಹೊಂದಿವೆ. ಈ ಪ್ರಮುಖ ಯೋಜನೆಗಳು ನಾಗರಿಕರನ್ನು ಜೀವನದ ಅನಿಶ್ಚಿತತೆಗಳಿಂದ ರಕ್ಷಿಸುವ ಮತ್ತು ದೀರ್ಘಕಾಲೀನ ಆರ್ಥಿಕ ಸ್ಥಿತಿಸ್ಥಾಪಕತ್ವ ಬೆಳೆಸುವ ಮೂಲಕ ವಿಮೆ ಮತ್ತು ಪಿಂಚಣಿ ಆಯಾಮವನ್ನು ವಿಸ್ತರಿಸುವ ಗುರಿಯನ್ನು ಹೊಂದಿವೆ.
ಮೂರು ಜನ ಸುರಕ್ಷಾ ಯೋಜನೆಗಳ ಮಾರ್ಗದರ್ಶಿ ಸೂತ್ರಗಳ ಮೇಲೆ ಬೆಳಕು ಚೆಲ್ಲಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್, “ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಡಿಮೆ ವೆಚ್ಚದ ವಿಮೆ ಮತ್ತು ಪಿಂಚಣಿ ಪ್ರಯೋಜನಗಳನ್ನು ಒದಗಿಸಲು ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಯನ್ನು ಒಳಗೊಂಡ ಜನಸುರಕ್ಷಾ ಯೋಜನೆಗಳನ್ನು ಆರಂಭಿಸಿದರು’’ ಎಂದು ಹೇಳಿದರು.
ಜನ ಸುರಕ್ಷಾ ಯೋಜನೆಗಳ 11 ನೇ ವಾರ್ಷಿಕೋತ್ಸವಗಳ ದತ್ತಾಂಶಗಳನ್ನು ಉಲ್ಲೇಖಿಸಿ, ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಪಿಎಂಜೆಜೆಬಿವೈ, ಪಿಎಂಎಸ್ ಬಿವೈ ಮತ್ತು ಎಪಿವೈ ಅಡಿಯಲ್ಲಿ ಕ್ರಮವಾಗಿ 27 ಕೋಟಿ, 58 ಕೋಟಿ ಮತ್ತು 9 ಕೋಟಿ ನೋಂದಣಿಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಪಿಎಂಜೆಜೆಬಿವೈ ಯೋಜನೆಯ ಕುರಿತು, ಹಣಕಾಸು ಸಚಿವರು 10.7 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ₹ 21,500 ಕೋಟಿಗೂ ಹೆಚ್ಚು ಮೌಲ್ಯದ ಕ್ಲೇಮ್ಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದರು.
ಪಿಎಂಎಸ್ ಬಿವೈ ಯೋಜನೆಯಡಿಯಲ್ಲಿ 1.84 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಸುಮಾರು ₹ 3,660 ಕೋಟಿಗೂ ಅಧಿಕ ಮೌಲ್ಯದ ಕ್ಲೇಮ್ಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಶ್ರೀಮತಿ ಸೀತಾರಾಮನ್ ಅವರು ಹೇಳಿದರು.
"ಜನ ಸುರಕ್ಷಾ ಯೋಜನೆಗಳ 11 ನೇ ವಾರ್ಷಿಕೋತ್ಸವವನ್ನು ನಾವು ಗುರುತಿಸುತ್ತಿರುವ ಈ ಸಂದರ್ಭದಲ್ಲಿ, ಈ ಯೋಜನೆಗಳನ್ನು ದೊಡ್ಡ ಯಶಸ್ಸಿಗೆ ಕಾರಣರಾದ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳ ಕಾರ್ಯಕರ್ತರು ಸೇರಿದಂತೆ ಎಲ್ಲಾ ಪಾಲುದಾರರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ”ಎಂದು ಶ್ರೀಮತಿ ಸೀತಾರಾಮನ್ ತಮ್ಮ ಮಾತು ಮುಕ್ತಾಯಗೊಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಶ್ರೀ ಪಂಕಜ್ ಚೌಧರಿ, “ಬಡವರಲ್ಲಿ ಬಡವರಿಗೆ ವಿಮಾ ರಕ್ಷಣೆ ಮತ್ತು ಪಿಂಚಣಿ ಬೆಂಬಲವನ್ನು ಒದಗಿಸುವುದು ಈ ಯೋಜನೆಗಳ ಉದ್ದೇಶವಾಗಿದೆ. ಈ ಯೋಜನೆಗಳ ಪ್ರಮುಖವಾಗಿ ಡಿಜಿಟಲೀಕರಣ ಮತ್ತು ದಾಖಲಾತಿ ಮತ್ತು ಕ್ಲೈಮ್ಗಳ ಸರಳೀಕರಣಕ್ಕೆ ಗಮನ ಹರಿಸಲಾಗಿದೆ. ಆನ್ಲೈನ್ ಜನ್ ಸುರಕ್ಷಾ ಪೋರ್ಟಲ್ನ ಆರಂಭವು ನಾಗರಿಕರು ಬ್ಯಾಂಕ್ ಶಾಖೆಗಳು ಅಥವಾ ಅಂಚೆ ಕಚೇರಿಗಳಿಗೆ ಭೇಟಿ ನೀಡದೆ ಅನುಕೂಲಕರವಾಗಿ ನೋಂದಾಯಿಸಲು ಸಾಧ್ಯವಾಗಿಸಿದೆ. ಕ್ಲೈಮ್ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸುವುದರಿಂದ ತ್ವರಿತ ಇತ್ಯರ್ಥಗಳು ಖಾತ್ರಿಯಾಗಿದ್ದು, ದುಃಖಿತ ಕುಟುಂಬಗಳಿಗೆ ಅವರಿಗೆ ಹೆಚ್ಚು ಅಗತ್ಯವಿರುವಾಗ ಸಕಾಲಿಕ ಬೆಂಬಲ ದೊರೆಯುತ್ತದೆ’’ ಎಂದರು.
ನಾವು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ ಬಿವೈ) ಮತ್ತು ಅಟಲ್ ಪಿಂಚಣಿ ಯೋಜನೆ (ಎಪಿವೈ) ಎಂಬ ಮೂರು ಸಾಮಾಜಿಕ ಭದ್ರತಾ (ಜನ್ ಸುರಕ್ಷಾ) ಯೋಜನೆಗಳ 11 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಈ ಯೋಜನೆಗಳು ಜನರಿಗೆ ಕೈಗೆಟುಕುವ ವಿಮೆ ಮತ್ತು ಭದ್ರತೆಯನ್ನು (ಜನ್ ಸುರಕ್ಷಾ) ಹೇಗೆ ಸಕ್ರಿಯಗೊಳಿಸಿವೆ ಎಂಬುದನ್ನು ನಾವು ನೆನಪಿಸಿಕೊಳ್ಳೋಣ, ಅವುಗಳ ಸಾಧನೆಗಳು ಮತ್ತು ಪ್ರಮುಖ ವೈಶಿಷ್ಟ್ಯಗಳು ಹೀಗಿವೆ.
1. ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ)
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಯಾವುದೇ ಕಾರಣದಿಂದಾಗಿ ಮರಣ ಹೊಂದಿದವರಿಗೆ ದಿನಕ್ಕೆ ರೂ. 2/- ಕ್ಕಿಂತ ಕಡಿಮೆ ಪ್ರೀಮಿಯಂನಲ್ಲಿ ಜೀವ ವಿಮಾ ರಕ್ಷಣೆಯನ್ನು ಒದಗಿಸುವಂತೆ ರೂಪಿಸಲಾಗಿದೆ.
ಯೋಜನೆಯ ಪ್ರಮುಖಾಂಶಗಳು: ಪಿಎಂಜೆಜೆಬಿವೈ ಒಂದು ವರ್ಷದ ಕವರೇಜ್ ಆಗಿದ್ದು, ವರ್ಷದಿಂದ ವರ್ಷಕ್ಕೆ ನವೀಕರಿಸಬಹುದಾಗಿದೆ. ಈ ಯೋಜನೆಯನ್ನು ಎಲ್ ಐಸಿ ಮತ್ತು ಇತರ ಜೀವ ವಿಮಾ ಕಂಪನಿಗಳ ಮೂಲಕ ನೀಡಲಾಗುತ್ತದೆ / ನಿರ್ವಹಿಸಲಾಗುತ್ತದೆ. ಈ ಉದ್ದೇಶಕ್ಕಾಗಿ ಅಗತ್ಯ ಅನುಮೋದನೆಗಳು ಮತ್ತು ಬ್ಯಾಂಕುಗಳು / ಅಂಚೆ ಕಚೇರಿಯೊಂದಿಗೆ ಒಪ್ಪಂದಗಳೊಂದಿಗೆ ಇದೇ ರೀತಿಯ ನಿಯಮಗಳ ಮೇಲೆ ಉತ್ಪನ್ನವನ್ನು ನೀಡಲು ಸಿದ್ಧರಿದ್ದಾರೆ. ಭಾಗವಹಿಸುವ ಬ್ಯಾಂಕುಗಳು / ಅಂಚೆ ಕಚೇರಿಗಳು ತಮ್ಮ ಚಂದಾದಾರರಿಗೆ ಯೋಜನೆಯನ್ನು ಕಾರ್ಯಗತಗೊಳಿಸಲು ಅಂತಹ ಯಾವುದೇ ಜೀವ ವಿಮಾ ಕಂಪನಿಯನ್ನು ತೊಡಗಿಸಿಕೊಳ್ಳಲು ಮುಕ್ತವಾಗಿವೆ.
ಅರ್ಹತಾ ಷರತ್ತುಗಳು: ಭಾಗವಹಿಸುವ ಬ್ಯಾಂಕ್ಗಳು/ಅಂಚೆ ಕಚೇರಿಯ 18 ರಿಂದ 50 ವರ್ಷ ವಯಸ್ಸಿನ ಎಲ್ಲಾ ವೈಯಕ್ತಿಕ ಬ್ಯಾಂಕ್/ಅಂಚೆ ಕಚೇರಿ ಖಾತೆದಾರರು, ಸ್ವಯಂ-ಡೆಬಿಟ್ ಅನ್ನು ಸಕ್ರಿಯಗೊಳಿಸಲು ತಮ್ಮ ಒಪ್ಪಿಗೆಯನ್ನು ನೀಡಿದರೆ ಅವರು ಈ ಯೋಜನೆಗೆ ಸೇರಲು ಅರ್ಹರಾಗಿರುತ್ತಾರೆ. ಒಬ್ಬ ವ್ಯಕ್ತಿಯು ಒಂದು ಅಥವಾ ವಿಭಿನ್ನ ಬ್ಯಾಂಕ್ಗಳು/ಅಂಚೆ ಕಚೇರಿಯಲ್ಲಿ ಬಹು ಬ್ಯಾಂಕ್/ಅಂಚೆ ಕಚೇರಿ ಖಾತೆಗಳನ್ನು ಹೊಂದಿದ್ದರೆ, ಆ ವ್ಯಕ್ತಿಯು ಒಂದು ಬ್ಯಾಂಕ್/ಅಂಚೆ ಕಚೇರಿ ಖಾತೆಯ ಮೂಲಕ ಮಾತ್ರ ಯೋಜನೆಗೆ ಸೇರಲು ಅರ್ಹರಾಗಿರುತ್ತಾರೆ.
ನೋಂದಣಿ ಅವಧಿ : ಜೂನ್ 1 ರಿಂದ ಮೇ 31 ರವರೆಗೆ ಒಂದು ವರ್ಷದ ಅವಧಿಗೆ ವಿಮಾ ಕವರ್ ಇರುತ್ತದೆ,ಅದಕ್ಕಾಗಿ ನಿಗದಿತ ನಮೂನೆಗಳಲ್ಲಿ ಗೊತ್ತುಪಡಿಸಿದ ವೈಯಕ್ತಿಕ ಬ್ಯಾಂಕ್/ಅಂಚೆ ಕಚೇರಿ ಖಾತೆಯಿಂದ ಸ್ವಯಂ-ಡೆಬಿಟ್ ಮೂಲಕ ಸೇರಲು / ಪಾವತಿಸಲು ಆಯ್ಕೆಯ ಅಗತ್ಯವಿರುತ್ತದೆ.
ಪ್ರೀಮಿಯಂ: ಪ್ರತಿ ಸದಸ್ಯರಿಗೆ ವಾರ್ಷಿಕ 436/- ರೂ. ಪಾವತಿಸಬೇಕು. ಯೋಜನೆಯಡಿಯಲ್ಲಿ ನೋಂದಣಿ ಸಮಯದಲ್ಲಿ ನೀಡಲಾದ ಆಯ್ಕೆಯ ಪ್ರಕಾರ, ಖಾತೆದಾರರ ಬ್ಯಾಂಕ್ / ಅಂಚೆ ಕಚೇರಿ ಖಾತೆಯಿಂದ ಪ್ರೀಮಿಯಂ ಅನ್ನು 'ಆಟೋ ಡೆಬಿಟ್' ಸೌಲಭ್ಯದ ಮೂಲಕ ಒಂದೇ ಕಂತಿನಲ್ಲಿ ಕಡಿತಗೊಳಿಸಲಾಗುತ್ತದೆ. ಕೆಳಗೆ ವಿವರಿಸಿದಂತೆ ಪ್ರೋ-ರೇಟಾ ಪ್ರೀಮಿಯಂ ಪಾವತಿಸುವ ಮೂಲಕ ನಿರೀಕ್ಷಿತ ವಿಮಾ ರಕ್ಷಣೆಗೆ ವಿಳಂಬವಾದ ನೋಂದಣಿ ಸಾಧ್ಯ;
ಎ) ಜೂನ್, ಜುಲೈ ಮತ್ತು ಆಗಸ್ಟ್ನಲ್ಲಿ ನೋಂದಣಿಗಾಗಿ - 436/- ರೂ. ಪೂರ್ಣ ವಾರ್ಷಿಕ ಪ್ರೀಮಿಯಂ ಅನ್ನು ಪಾವತಿಸಬೇಕು.
ಬಿ) ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನೋಂದಣಿಗಾಗಿ - 342/- ರೂ. ಪ್ರೋ-ರೇಟಾ ಪ್ರೀಮಿಯಂ ಅನ್ನು ಪಾವತಿಸಬೇಕು.
ಸಿ) ಡಿಸೆಂಬರ್, ಜನವರಿ ಮತ್ತು ಫೆಬ್ರವರಿಯಲ್ಲಿ ನೋಂದಣಿಗಾಗಿ - 228/- ರೂ.ಪ್ರೋ-ರೇಟಾ ಪ್ರೀಮಿಯಂ ಅನ್ನು ಪಾವತಿಸಬೇಕು.
ಡಿ) ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೋಂದಣಿಗಾಗಿ - 114/- ರೂ. ಪ್ರೋ-ರೇಟಾ ಪ್ರೀಮಿಯಂ ಅನ್ನು ಪಾವತಿಸಬೇಕು.
ಪ್ರಯೋಜನಗಳು: ಯಾವುದೇ ಕಾರಣದಿಂದಾಗಿ ಚಂದಾದಾರರ ಮರಣಕ್ಕೆ ರೂ.2 ಲಕ್ಷ ಪರಿಹಾರವನ್ನು ಪಾವತಿಸಲಾಗುತ್ತದೆ. ನೋಂದಣಿ ದಿನಾಂಕದಿಂದ 30 ದಿನಗಳ ಅವಧಿ ಅನ್ವಯವಾಗುತ್ತದೆ.
ಸಾಧನೆಗಳು: 29.04.2026 ರ ವೇಳೆಗೆ ಪಿಎಂಜೆಜೆಬಿವೈ ಅಡಿಯಲ್ಲಿ ಒಟ್ಟು 27.43 ಕೋಟಿಗೂ ಹೆಚ್ಚು ನೋಂದನಿಗಳಾಗಿವೆ ಮತ್ತು 10,75,625 ಕ್ಲೈಮ್ಗಳಿಗೆ 21,512.50 ಕೋಟಿ ರೂ. ಮೊತ್ತವನ್ನು ಪಾವತಿಸಲಾಗಿದೆ.
29.04.2026 ರ ವೇಳೆಗೆ ಈ ಯೋಜನೆಯು 12.72 ಕೋಟಿ ಮಹಿಳಾ ನೋಂಧಣಿಗಳನ್ನು ಮತ್ತು ಪಿಎಂಜೆಡಿವೈ ಖಾತೆದಾರರಿಂ 8.09 ಕೋಟಿ ನೋಂದಣಿಗಳನ್ನು ದಾಖಲಿಸಿದೆ.

ಮೂಲ: ಸಂಚಿತ ದಾಖಲಾತಿಗಳಿಗಾಗಿ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳು, ಮಹಿಳಾ ಫಲಾನುಭವಿಗಳು ಮತ್ತು PMJDY ಖಾತೆದಾರರಿಗೆ ಬ್ಯಾಂಕುಗಳು

ಮೂಲ: ವಿಮಾ ಕಂಪನಿಗಳು
2. ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ ಬಿವೈ)
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ ಬಿವೈ) 18-70 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಅಪಘಾತದಿಂದ ಉಂಟಾಗುವ ಸಾವು ಅಥವಾ ಅಂಗವೈಕಲ್ಯಕ್ಕೆ 2 ಲಕ್ಷ ರೂ.ವರೆಗೆ, ತಿಂಗಳಿಗೆ ರೂ. 2/- ಕ್ಕಿಂತ ಕಡಿಮೆ ಕನಿಷ್ಠ ಪ್ರೀಮಿಯಂನಲ್ಲಿ ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯ ರಕ್ಷಣೆಯನ್ನು ಒದಗಿಸಲು ರೂಪಿಸಲಾಗಿದೆ.
ಯೋಜನೆಯ ಪ್ರಮುಖ ಲಕ್ಷಣ: ಪಿಎಂಎಸ್ ಬಿವೈ ಒಂದು ವರ್ಷದ ಕವರೇಜ್ ಆಗಿದ್ದು, ವರ್ಷದಿಂದ ವರ್ಷಕ್ಕೆ ನವೀಕರಿಸಬಹುದಾಗಿದೆ. ಈ ಯೋಜನೆಯನ್ನು ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳು (ಪಿಎಸ್ ಜಿಐಸಿ ಗಳು) ಮತ್ತು ಇತರ ಸಾಮಾನ್ಯ ವಿಮಾ ಕಂಪನಿಗಳ ಮೂಲಕ ಅಗತ್ಯ ಅನುಮೋದನೆಗಳೊಂದಿಗೆ ಇದೇ ರೀತಿಯ ನಿಯಮಗಳ ಮೇಲೆ ಉತ್ಪನ್ನವನ್ನು ನೀಡಲು ಸಿದ್ಧರಿದ್ದಾರೆ ಮತ್ತು ಈ ಉದ್ದೇಶಕ್ಕಾಗಿ ಬ್ಯಾಂಕುಗಳು / ಅಂಚೆ ಕಚೇರಿಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಭಾಗವಹಿಸುವ ಬ್ಯಾಂಕುಗಳು / ಅಂಚೆ ಕಚೇರಿಗಳು ತಮ್ಮ ಚಂದಾದಾರರಿಗೆ ಯೋಜನೆಯನ್ನು ಕಾರ್ಯಗತಗೊಳಿಸಲು ಅಂತಹ ಯಾವುದೇ ವಿಮಾ ಕಂಪನಿಯನ್ನು ತೊಡಗಿಸಿಕೊಳ್ಳಲು ಮುಕ್ತವಾಗಿರುತ್ತವೆ.
ಅರ್ಹತಾ ಷರತ್ತುಗಳು: 18 ರಿಂದ 70 ವರ್ಷ ವಯಸ್ಸಿನ ಭಾಗವಹಿಸುವ ಬ್ಯಾಂಕುಗಳು / ಅಂಚೆ ಕಚೇರಿಯ ಎಲ್ಲಾ ವೈಯಕ್ತಿಕ ಬ್ಯಾಂಕ್ / ಅಂಚೆ ಕಚೇರಿ ಖಾತೆದಾರರು, ಸ್ವಯಂ-ಡೆಬಿಟ್ ಸೇರಲು / ಸಕ್ರಿಯಗೊಳಿಸಲು ತಮ್ಮ ಒಪ್ಪಿಗೆಯನ್ನು ನೀಡುತ್ತಾರೆ, ಅವರು ಯೋಜನೆಗೆ ಸೇರಲು ಅರ್ಹರಾಗಿರುತ್ತಾರೆ. ಒಬ್ಬ ವ್ಯಕ್ತಿಯು ಒಂದು ಅಥವಾ ಬೇರೆ ಬೇರೆ ಬ್ಯಾಂಕ್ಗಳು/ಅಂಚೆ ಕಚೇರಿಯಲ್ಲಿ ಬಹು ಬ್ಯಾಂಕ್/ಅಂಚೆ ಕಚೇರಿ ಖಾತೆಗಳನ್ನು ಹೊಂದಿದ್ದರೆ, ಆ ವ್ಯಕ್ತಿಯು ಒಂದು ಬ್ಯಾಂಕ್/ಅಂಚೆ ಕಚೇರಿ ಖಾತೆಯ ಮೂಲಕ ಮಾತ್ರ ಯೋಜನೆಗೆ ಸೇರಲು ಅರ್ಹನಾಗಿರುತ್ತಾನೆ.
ನೋಂದಣಿ ಅವಧಿ: ಜೂನ್ 1 ರಿಂದ ಮೇ 31 ರವರೆಗೆ ಒಂದು ವರ್ಷದ ಅವಧಿಗೆ ವಿಮಾ ರಕ್ಷಣೆ ಇರುತ್ತದೆ. ಅದಕ್ಕಾಗಿ ನಿಗದಿತ ನಮೂನೆಗಳಲ್ಲಿ ಗೊತ್ತುಪಡಿಸಿದ ವೈಯಕ್ತಿಕ ಬ್ಯಾಂಕ್/ಅಂಚೆ ಕಚೇರಿ ಖಾತೆಯಿಂದ ಸ್ವಯಂ-ಡೆಬಿಟ್ ಮೂಲಕ ಸೇರಲು / ಪಾವತಿಸಲು ಆಯ್ಕೆಯನ್ನು ನೀಡಬೇಕಾಗುತ್ತದೆ.
ಪ್ರೀಮಿಯಂ: ಪ್ರತಿ ಸದಸ್ಯರಿಗೆ ವಾರ್ಷಿಕ 20/- ರೂ.ಯೋಜನೆಯಡಿಯಲ್ಲಿ ನೋಂದಣಿ ಸಮಯದಲ್ಲಿ ನೀಡಲಾದ ಆಯ್ಕೆಯ ಪ್ರಕಾರ, ಒಂದು ಕಂತಿನಲ್ಲಿ ಖಾತೆದಾರರ ಬ್ಯಾಂಕ್/ಅಂಚೆ ಕಚೇರಿ ಖಾತೆಯಿಂದ ಪ್ರೀಮಿಯಂ ಅನ್ನು 'ಆಟೋ ಡೆಬಿಟ್' ಸೌಲಭ್ಯದ ಮೂಲಕ ಕಡಿತಗೊಳಿಸಲಾಗುತ್ತದೆ.
ಪ್ರಯೋಜನಗಳು: ಈ ಕೆಳಗಿನ ಕೋಷ್ಠಕದಲ್ಲಿರುವಂತೆ
|
|
ಅನುಕೂಲಗಳ ಕೋಷ್ಠಕ
|
ಒಟ್ಟು ಮೊತ್ತ
|
|
ಎ
|
ಮರಣ
|
2 ಲಕ್ಷ ರೂ.
|
|
ಬಿ
|
ಎರಡೂ ಕಣ್ಣುಗಳ ಸಂಪೂರ್ಣ ಮತ್ತು ಸರಿಪಡಿಸಲಾಗದ ನಷ್ಟ ಅಥವಾ ಎರಡೂ ಕೈಗಳು ಅಥವಾ ಪಾದಗಳ ಬಳಕೆಯ ನಷ್ಟ ಅಥವಾ ಒಂದು ಕಣ್ಣಿನ ದೃಷ್ಟಿ ನಷ್ಟ ಮತ್ತು ಕೈ ಅಥವಾ ಪಾದದ ಬಳಕೆಯ ನಷ್ಟ
|
2 ಲಕ್ಷ ರೂ.
|
|
ಸಿ
|
ಒಂದು ಕಣ್ಣಿನ ಸಂಪೂರ್ಣ ಮತ್ತು ಸರಿಪಡಿಸಲಾಗದ ದೃಷ್ಟಿ ನಷ್ಟ ಅಥವಾ ಒಂದು ಕೈ ಅಥವಾ ಪಾದದ ಬಳಕೆಯ ನಷ್ಟ
|
2 ಲಕ್ಷ ರೂ.
|
ಸಾಧನೆಗಳು: 29.04.2026 ರ ವೇಳೆಗೆ ಪಿಎಂಎಸ್ ಬಿವೈ ಅಡಿಯಲ್ಲಿ ಒಟ್ಟು 58.09 ಕೋಟಿಗೂ ಹೆಚ್ಚು ನೋಂದಣಿಗಳು ನಡೆದಿವೆ ಮತ್ತು 1,84,662 ಕ್ಲೇಮ್ಗಳಿಗೆ 3,667.52 ಕೋಟಿ ರೂ.ಗಳನ್ನು ಪಾವತಿಸಲಾಗಿದೆ.
29.04.2026 ರ ವೇಳೆಗೆ ಈ ಯೋಜನೆಯು 27.45 ಕೋಟಿ ಮಹಿಳಾ ನೋಂದಣಿಗಳನ್ನು ಮತ್ತು ಪಿಎಂಜೆಡಿವೈ ಖಾತೆದಾರರಿಂದ 19.30 ಕೋಟಿ ನೋಂದಣಿಗಳನ್ನು ದಾಖಲಿಸಿದೆ.
ಮೂಲ: ಸಂಚಿತ ನೋಂದಣಿಗಾಗಿ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳು, ಮಹಿಳಾ ಫಲಾನುಭವಿಗಳು ಮತ್ತು PMJDY ಖಾತೆದಾರರಿಗಾಗಿ ಬ್ಯಾಂಕುಗಳು

ಮೂಲ: ವಿಮಾ ಕಂಪನಿಗಳು
3. ಅಟಲ್ ಪಿಂಚಣಿ ಯೋಜನೆ (ಎಪಿವೈ)
ಎಲ್ಲಾ ಭಾರತೀಯರಿಗೆ ವಿಶೇಷವಾಗಿ ಬಡವರು, ಸೌಲಭ್ಯ ವಂಚಿತರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ರಚಿಸಲು ಅಟಲ್ ಪಿಂಚಣಿ ಯೋಜನೆ (ಎಪಿವೈ) ಅನ್ನು ಆರಂಭಿಸಲಾಯಿತು. ಇದು ಅಸಂಘಟಿತ ವಲಯದ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಮತ್ತು ಭವಿಷ್ಯದ ಅಗತ್ಯಗಳನ್ನು ಪೂರೈಸಲು ಸರ್ಕಾರದ ಒಂದು ಉಪಕ್ರಮವಾಗಿದೆ. ಎಪಿವೈ ಅನ್ನು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (ಎನ್ ಪಿಎಸ್) ಒಟ್ಟಾರೆ ಆಡಳಿತಾತ್ಮಕ ಮತ್ತು ಸಾಂಸ್ಥಿಕ ರೂಪುರೇಷೆಯಡಿಯಲ್ಲಿ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ ಆರ್ ಡಿಎ) ನಿರ್ವಹಿಸುತ್ತದೆ.
ಅರ್ಹತೆ: ಎಪಿವೈ ಆದಾಯ ತೆರಿಗೆ ಪಾವತಿದಾರರಲ್ಲದ 18 ರಿಂದ 40 ವರ್ಷ ವಯಸ್ಸಿನ ಎಲ್ಲಾ ಬ್ಯಾಂಕ್ ಖಾತೆದಾರರಿಗೆ ಮುಕ್ತವಾಗಿದೆ ಮತ್ತು ಆಯ್ಕೆ ಮಾಡಿದ ಪಿಂಚಣಿ ಮೊತ್ತವನ್ನು ಆಧರಿಸಿ ಕೊಡುಗೆಗಳು ಬದಲಾಗುತ್ತವೆ.
ಪ್ರಯೋಜನಗಳು: ಚಂದಾದಾರರು 60 ವರ್ಷ ವಯಸ್ಸಿನ ನಂತರ 1000 ರೂ.ಅಥವಾ 2000 ರೂ. ಅಥವಾ 3000 ರೂ.ಅಥವಾ 4000 ರೂ.ಅಥವಾ 5000 ರೂ.ರ ಖಾತರಿಪಡಿಸಿದ ಕನಿಷ್ಠ ಮಾಸಿಕ ಪಿಂಚಣಿಯನ್ನು ಪಡೆಯುತ್ತಾರೆ, ಇದು ಯೋಜನೆಗೆ ಸೇರಿದ ನಂತರ ಚಂದಾದಾರರು ಮಾಡಿದ ಕೊಡುಗೆಗಳ ಆಧಾರದ ಮೇಲೆ.
ಯೋಜನೆಯ ವಿತರಣೆ ಪ್ರಯೋಜನಗಳು: ಮಾಸಿಕ ಪಿಂಚಣಿ ಚಂದಾದಾರರಿಗೆ ಲಭ್ಯವಿದೆ ಮತ್ತು ಅವರ ನಂತರ ಅವರ ಸಂಗಾತಿಗೆ ಮತ್ತು ಅವರ ಮರಣದ ನಂತರ ಚಂದಾದಾರರ 60 ನೇ ವಯಸ್ಸಿನಲ್ಲಿ ಸಂಗ್ರಹವಾದ ಪಿಂಚಣಿ ನಿಧಿಯನ್ನು ಚಂದಾದಾರರ ನಾಮನಿರ್ದೇಶಿತರಿಗೆ ಹಿಂತಿರುಗಿಸಲಾಗುವುದು.
ಚಂದಾದಾರರ ಅಕಾಲಿಕ ಮರಣದ ಸಂದರ್ಭದಲ್ಲಿ (60 ವರ್ಷಕ್ಕಿಂತ ಮೊದಲು ಮರಣ) ಚಂದಾದಾರರ ಸಂಗಾತಿಯು ಮೂಲ ಚಂದಾದಾರರು 60 ವರ್ಷ ವಯಸ್ಸನ್ನು ತಲುಪುವವರೆಗೆ ಉಳಿದ ವೆಸ್ಟಿಂಗ್ ಅವಧಿಗೆ ಚಂದಾದಾರರ ಎಪಿವೈ ಖಾತೆಗೆ ಕೊಡುಗೆಯನ್ನು ಮುಂದುವರಿಸಬಹುದು.
ಪಾವತಿ ಆವರ್ತನ: ಚಂದಾದಾರರು ಮಾಸಿಕ/ತ್ರೈಮಾಸಿಕ/ಅರ್ಧ-ವಾರ್ಷಿಕ ಆಧಾರದ ಮೇಲೆ ಎಪಿವೈ ಗೆ ಕೊಡುಗೆಗಳನ್ನು ನೀಡಬಹುದು.
ಯೋಜನೆಯಿಂದ ಹಿಂತೆಗೆದುಕೊಳ್ಳುವಿಕೆ: ಚಂದಾದಾರರು ಕೆಲವು ಷರತ್ತುಗಳಿಗೆ ಒಳಪಟ್ಟು ಸರ್ಕಾರದ ಸಹ-ಕೊಡುಗೆ ಮತ್ತು ಅದರ ಮೇಲಿನ ಆದಾಯ/ಬಡ್ಡಿಯನ್ನು ಕಡಿತಗೊಳಿಸಿ ಸ್ವಯಂಪ್ರೇರಣೆಯಿಂದ ಎಪಿವೈ ನಿಂದ ನಿರ್ಗಮಿಸಬಹುದು.
ಯೋಜನೆಯ ಪ್ರಗತಿ - ಲಕ್ಷದಲ್ಲಿ ಸಂಚಿತ ದಾಖಲಾತಿಗಳು:

ಯೋಜನೆಯಡಿ ಒಟ್ಟು ನೋಂದಣಿಯಲ್ಲಿ ಮಹಿಳೆಯರ ಪ್ರಮಾಣ ಸುಮಾರು ಶೇ.49ರಷ್ಟಿದೆ.
ಸಾಧನೆಗಳು: 30.04.2026 ರ ವೇಳೆಗೆ 9.04 ಕೋಟಿಗೂ ಅಧಿಕ ವ್ಯಕ್ತಿಗಳು ಈ ಯೋಜನೆಯಲ್ಲಿ ದಾಖಲಾಗಿದ್ದಾರೆ.
*****
(ಪ್ರಕಟಣೆ ಐ.ಡಿ.: 2259289)
ವಿಸಿಟರ್ ಕೌಂಟರ್ : 19
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Nepali
,
Marathi
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam