ಪ್ರಧಾನ ಮಂತ್ರಿಯವರ ಕಛೇರಿ
ಕಾಶಿ ತಮಿಳು ಸಂಗಮಕ್ಕೆ ಶುಭಾಶಯಗಳನ್ನು ಕೋರಿದ ಪ್ರಧಾನಮಂತ್ರಿ
प्रविष्टि तिथि:
02 DEC 2025 6:40PM by PIB Bengaluru
ಇಂದಿನಿಂದ ಆರಂಭವಾಗಲಿರುವ ಕಾಶಿ ತಮಿಳು ಸಂಗಮಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭ ಕೋರಿದ್ದಾರೆ. ಈ ವೈಬ್ರೆಂಟ್ ಕಾರ್ಯಕ್ರಮವು ಏಕ್ ಭಾರತ್, ಶ್ರೇಷ್ಠ ಭಾರತ್’ ನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. “ಸಂಗಮಕ್ಕೆ ಬರುವ ಎಲ್ಲರಿಗೂ ಕಾಶಿಯಲ್ಲಿ ಆಹ್ಲಾದಕರ ಮತ್ತು ಸ್ಮರಣೀಯ ವಾಸ್ತವ್ಯವಿರಲಿ ಎಂದು ನಾನು ಬಯಸುತ್ತೇನೆ..!’’ ಎಂದು ಶ್ರೀ ನರೇಂದ್ರ ಮೋದಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಹೀಗೆ ಹೇಳಿದ್ದಾರೆ.
"ಕಾಶಿ ತಮಿಳು ಸಂಗಮವು ಇಂದು ಆರಂಭವಾಗುತ್ತಿದೆ, ಇದು ‘ಏಕ್ ಭಾರತ್, ಶ್ರೇಷ್ಠ ಭಾರತ್’ ನ ಉತ್ಸಾಹವನ್ನು ಮತ್ತಷ್ಟು ಗಾಢವಾಗಿಸುವ ಈ ರೋಮಾಂಚಕ ಕಾರ್ಯಕ್ರಮಕ್ಕೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಸಂಗಮಕ್ಕೆ ಬರುವ ಎಲ್ಲರಿಗೂ ಕಾಶಿಯಲ್ಲಿ ಆಹ್ಲಾದಕರ ಮತ್ತು ಸ್ಮರಣೀಯ ವಾಸ್ತವ್ಯವಿರಲಿ ಎಂದು ನಾನು ಬಯಸುತ್ತೇನೆ!"
*****
(रिलीज़ आईडी: 2197898)
आगंतुक पटल : 6