ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಳೆದ 11 ವರ್ಷಗಳಲ್ಲಿ ಒಡಿಶಾದ ರೈಲ್ವೆ ಮೂಲಸೌಕರ್ಯಗಳ ಅಭಿವೃದ್ಧಿಯ ಮುಖ್ಯಾಂಶಗಳನ್ನು ಪ್ರಧಾನಮಂತ್ರಿಯವರು ಎತ್ತಿ ತೋರಿಸಿದರು

Posted On: 27 JUN 2025 1:10PM by PIB Bengaluru

ಕಳೆದ 11 ವರ್ಷಗಳಲ್ಲಿ ಆಗಿರುವ ಒಡಿಶಾದ ರೈಲ್ವೆ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಎತ್ತಿ ತೋರಿಸಿದ್ದಾರೆ. ವಿಶೇಷವಾಗಿ ಪವಿತ್ರ ನಗರವಾದ ಜಗನ್ನಾಥ ಪುರಿಗೆ ಯಾತ್ರಾರ್ಥಿಗಳಿಗೆ ಭಾರತೀಯ ರೈಲು ಪ್ರಯಾಣವನ್ನು ಉತ್ತಮ ಸೌಕರ್ಯಗಳ ಮೂಲಕ ಹೇಗೆ ಸರಾಗಗೊಳಿಸಲಾಗಿದೆ ಎಂಬ ಕುರಿತು ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಬರೆದ ಲೇಖನವನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು.

ಎಕ್ಸ್ ತಾಣದ ಖಾತೆಯಲ್ಲಿ ಪ್ರಧಾನಮಂತ್ರಿಯವರ ಕಾರ್ಯಾಲಯ ಹೀಗೆ ಹೇಳಿದೆ:

"ಕಳೆದ 11 ವರ್ಷಗಳು ಒಡಿಶಾದ ರೈಲ್ವೇ ಮೂಲಸೌಕರ್ಯಗಳ ಅಭಿವೃದ್ಧಿ ನಿಟ್ಟಿನಲ್ಲಿ ನಿಜವಾಗಿಯೂ ಐತಿಹಾಸಿಕವಾಗಿವೆ. ವಿಶೇಷವಾಗಿ ಮಹಾಪ್ರಭುವಿನ ಪವಿತ್ರ ನಗರವಾದ ಜಗನ್ನಾಥ ಪುರಿಗೆ ರಥಯಾತ್ರೆಯನ್ನು ವೀಕ್ಷಿಸಲು ಬರುವ ಯಾತ್ರಾರ್ಥಿಗಳಿಗೆ ಭಾರತೀಯ ರೈಲು ಪ್ರಯಾಣ ಅನುಭವವನ್ನು ಹೇಗೆ ಸರಾಗಗೊಳಿಸಿದೆ ಎಂಬುದರ ಕುರಿತು ಕೇಂದ್ರ ಸಚಿವರಾದ ಶ್ರೀ @AshwiniVaishnaw ಅವರು ಉತ್ತಮ ರೀತಿಯಲ್ಲಿ ಬರೆದಿದ್ದಾರೆ"

https://www.hindustantimes.com/opinion/pilgrims-progress-the-railways-look-east-policy-101750953515997.html

 ನಮೊ ಆಪ್ ಮೂಲಕ ವೀಕ್ಷಿಸಲು”

 

 

*****


(Release ID: 2140499)