ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಯ ಶ್ರೀ ಮಹಾ ಬೋಧಿ ದೇವಸ್ಥಾನಕ್ಕೆ ಪ್ರಧಾನಮಂತ್ರಿ ಭೇಟಿ

Posted On: 06 APR 2025 11:24AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಶ್ರೀಲಂಕಾದ ಅಧ್ಯಕ್ಷ ಘನತೆವೆತ್ತ ಅನುರಾ ಕುಮಾರ ದಿಸ್ಸನಾಯಕೆ ಅವರೊಂದಿಗೆ ಅನುರಾಧಪುರದ ಪವಿತ್ರ ಜಯ ಶ್ರೀ ಮಹಾ ಬೋಧಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜ್ಯ ಮಹಾಬೋಧಿ ಮರಕ್ಕೆ ಪೂಜೆ ಸಲ್ಲಿಸಿದರು.

ಕ್ರಿ.ಪೂ 3ನೇ ಶತಮಾನದಲ್ಲಿ ಭಾರತದಿಂದ ಸಂಗಮಿತ ಮಹಾ ಥೆರಿ ಶ್ರೀಲಂಕಾಕ್ಕೆ ತಂದ ಬೋ ಸಸಿಯಿಂದ ಈ ಮರ ಬೆಳೆದಿದೆ ಎಂದು ನಂಬಲಾಗಿದೆ. ಈ ದೇವಾಲಯವು ಭಾರತ-ಶ್ರೀಲಂಕಾ ನಡುವಿನ ನಿಕಟ ಪಾಲುದಾರಿಕೆಯ ಅಡಿಪಾಯವನ್ನು ರೂಪಿಸುವ ಬಲವಾದ ನಾಗರಿಕ ಸಂಪರ್ಕಗಳಿಗೆ ಸಾಕ್ಷಿಯಾಗಿ ನಿಂತಿದೆ.

 

*****


(Release ID: 2119666) Visitor Counter : 11