ನೀತಿ ಆಯೋಗ

ನೀತಿ ಆಯೋಗವು ‘ಸಂಪೂರ್ಣತಾ ಅಭಿಯಾನʼವನ್ನು ಆರಂಭಿಸಲಿದೆ


ಜುಲೈ 4 ರಿಂದ ಸೆಪ್ಟೆಂಬರ್ 30, 2024 ರವರೆಗೆ ನಡೆಯುವ ಅಭಿಯಾನವು ಎಡಿಪಿ/ಎಬಿಪಿ ಜಿಲ್ಲೆಗಳು ಮತ್ತು ತಾಲ್ಲೂಕುಗಳಲ್ಲಿ ಗುರುತಿಸಲಾದ 6 ಸೂಚಕಗಳಲ್ಲಿ ಸಂಪೂರ್ಣತೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ

Posted On: 03 JUL 2024 4:37PM by PIB Bengaluru

ದೇಶಾದ್ಯಂತ ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ 6 ಪ್ರಮುಖ ಸೂಚಕಗಳು ಮತ್ತು ಮಹತ್ವಾಕಾಂಕ್ಷಿ ತಾಲ್ಲೂಕುಗಳಲ್ಲಿ 6 ಪ್ರಮುಖ ಸೂಚಕಗಳ ಸಂಪೂರ್ಣತೆಯನ್ನು ಸಾಧಿಸಲು ಸುಸ್ಥಿರ ಪ್ರಯತ್ನವನ್ನು ಕೈಗೊಳ್ಳಲು ನೀತಿ ಆಯೋಗವು ಜುಲೈ 4 ರಿಂದ -  ಸೆಪ್ಟೆಂಬರ್ 30, 2024 ರವರೆಗೆ 3 ತಿಂಗಳ ಕಾಲ 'ಸಂಪೂರ್ಣತಾ ಅಭಿಯಾನ' ವನ್ನು ಪ್ರಾರಂಭಿಸುತ್ತಿದೆ. ‘ಸಂಪೂರ್ಣತಾ ಅಭಿಯಾನ’ವು ಮಹತ್ವಾಕಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮ ಮತ್ತು ಮಹತ್ವಾಕಾಂಕ್ಷಿ ತಾಲ್ಲೂಕುಗಳ ಕಾರ್ಯಕ್ರಮದ ಅಡಿಯಲ್ಲಿ 112 ಮಹತ್ವಾಕಾಂಕ್ಷಿ ಜಿಲ್ಲೆಗಳು ಮತ್ತು 500 ಮಹತ್ವಾಕಾಂಕ್ಷಿ ತಾಲ್ಲೂಕುಗಳಲ್ಲಿ ಗುರುತಿಸಲಾದ 6 ಸೂಚಕಗಳಲ್ಲಿ ಪ್ರತಿಯೊಂದರಲ್ಲೂ ಸಂಪೂರ್ಣತೆಯನ್ನು ಸಾಧಿಸಲು ಪ್ರಯತ್ನಿಸುತ್ತದೆ.

'ಸಂಪೂರ್ಣತಾ ಅಭಿಯಾನ'ವು ಎಲ್ಲಾ ಮಹತ್ವಾಕಾಂಕ್ಷಿ ತಾಲ್ಲೂಕುಗಳಲ್ಲಿ ಕೆಳಗಿನ ಗುರುತಿಸಲಾದ  6 KPI ಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ:

1. ಮೊದಲ ತ್ರೈಮಾಸಿಕದಲ್ಲಿ ಪ್ರಸವಪೂರ್ವ ಆರೈಕೆ (ANC) ಗಾಗಿ ನೋಂದಾಯಿಸಲಾದ ಗರ್ಭಿಣಿ ಮಹಿಳೆಯರ ಶೇಕಡಾವಾರು ಸಂಖ್ಯೆ

2.   ತಾಲ್ಲೂಕಿನಲ್ಲಿ ಉದ್ದೇಶಿತ ಜನಸಂಖ್ಯೆಯಲ್ಲಿ ಮಧುಮೇಹವನ್ನು ಪರೀಕ್ಷಿಸಿದ ವ್ಯಕ್ತಿಗಳ ಶೇಕಡಾವಾರು ಸಂಖ್ಯೆ

3.   ತಾಲ್ಲೂಕಿನಲ್ಲಿ ಉದ್ದೇಶಿತ ಜನಸಂಖ್ಯೆಯಲ್ಲಿ ಅಧಿಕ ರಕ್ತದೊತ್ತಡಕ್ಕಾಗಿ ಪರೀಕ್ಷಿಸಲ್ಪಟ್ಟ ವ್ಯಕ್ತಿಗಳ ಶೇಕಡಾವಾರು ಸಂಖ್ಯೆ

4.   ಐಸಿಡಿಎಸ್ ಕಾರ್ಯಕ್ರಮದಡಿಯಲ್ಲಿ ಪೂರಕ ಪೋಷಣೆಯನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತಿರುವ ಗರ್ಭಿಣಿಯರಲ್ಲಿ ಶೇಕಡಾವಾರು ಸಂಖ್ಯೆ

5.  ಮಣ್ಣಿನ ಮಾದರಿ ಸಂಗ್ರಹಣೆ ಗುರಿಯಲ್ಲಿ ಮಣ್ಣಿನ ಆರೋಗ್ಯ ಕಾರ್ಡ್‌ಗಳ ಶೇಕಡಾವಾರು ಸಂಖ್ಯೆ

6. ತಾಲ್ಲೂಕಿನಲ್ಲಿರುವ ಒಟ್ಟು ಸ್ವಸಹಾಯ ಗುಂಪುಗಳಲ್ಲಿ ಆವರ್ತ ನಿಧಿಯನ್ನು ಪಡೆದ ಸ್ವಸಹಾಯ ಗುಂಪುಗಳ ಶೇಕಡಾವಾರು ಸಂಖ್ಯೆ

 

'ಸಂಪೂರ್ಣತಾ ಅಭಿಯಾನ' ಅಡಿಯಲ್ಲಿ ಮಹತ್ವಾಕಾಂಕ್ಷಿ ಜಿಲ್ಲೆಗಳಾದ್ಯಂತ ಗುರುತಿಸಲಾದ 6 KPI ಗಳು:

1. ಮೊದಲ ತ್ರೈಮಾಸಿಕದಲ್ಲಿ ಪ್ರಸವಪೂರ್ವ ಆರೈಕೆ (ANC) ಗಾಗಿ ನೋಂದಾಯಿಸಲಾದ ಗರ್ಭಿಣಿ ಮಹಿಳೆಯರ ಶೇಕಡಾವಾರು ಸಂಖ್ಯೆ

2. ಐಸಿಡಿಎಸ್ ಕಾರ್ಯಕ್ರಮದಡಿಯಲ್ಲಿ ಪೂರಕ ಪೋಷಣೆಯನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತಿರುವ ಗರ್ಭಿಣಿಯರ ಶೇಕಡಾವಾರು ಸಂಖ್ಯೆ

3. ಸಂಪೂರ್ಣವಾಗಿ ಲಸಿಕೆ ಪಡೆದ ಮಕ್ಕಳ ಶೇಕಡಾವಾರು (9-11 ತಿಂಗಳುಗಳು) ಸಂಖ್ಯೆ (BCG+DPT3+OPV3+ದಡಾರ 1)

                        4.  ವಿತರಿಸಲಾದ ಮಣ್ಣಿನ ಆರೋಗ್ಯ ಕಾರ್ಡ್‌ಗಳ ಸಂಖ್ಯೆ

                        5.  ಮಾಧ್ಯಮಿಕ ಹಂತದಲ್ಲಿ ವಿದ್ಯುಚ್ಛಕ್ತಿ ಹೊಂದಿರುವ ಶಾಲೆಗಳ ಶೇಕಡಾವಾರು ಸಂಖ್ಯೆ

6.  ಶೈಕ್ಷಣಿಕ ಅವಧಿ ಪ್ರಾರಂಭವಾದ 1 ತಿಂಗಳೊಳಗೆ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ಒದಗಿಸುವ ಶಾಲೆಗಳ ಶೇಕಡಾವಾರು ಸಂಖ್ಯೆ

‘ಸಂಪೂರ್ಣತಾ ಅಭಿಯಾನ’ದ ಭಾಗವಾಗಿ ಜಿಲ್ಲೆಗಳು ಮತ್ತು ತಾಲ್ಲೂಕುಗಳು ಆಯೋಜಿಸಬಹುದಾದ ಚಟುವಟಿಕೆಗಳ ಪಟ್ಟಿಯನ್ನು ನೀತಿ ಆಯೋಗವು ಒದಗಿಸುತ್ತಿದೆ. ಹೆಚ್ಚುವರಿಯಾಗಿ, ಅಭಿಯಾನದ ಆವೇಗವನ್ನು ಕಾಪಾಡಿಕೊಳ್ಳಲು ಮತ್ತು ಭಾಗವಹಿಸುವಿಕೆಯನ್ನು ಉತ್ತೇಜಿಸಲು ತಾಲ್ಲೂಕುಗಳು ಮತ್ತು ಜಿಲ್ಲೆಗಳಲ್ಲಿ ನಿಯಮಿತವಾಗಿ ಔಟ್‌ರೀಚ್ ಚಟುವಟಿಕೆಗಳನ್ನು ನಡೆಸಲು ಪ್ರೋತ್ಸಾಹಿಸಲಾಗುತ್ತಿದೆ.

ಈ ಪ್ರಯತ್ನವನ್ನು ಯಶಸ್ವಿಗೊಳಿಸಲು ಮತ್ತು ವಾಸ್ತವವದಲ್ಲಿ ಸ್ಪಷ್ಟವಾದ ಫಲಿತಾಂಶವನ್ನು ಪಡೆಯಲು:

1.       ಜಿಲ್ಲೆಗಳು/ ತಾಲ್ಲೂಕುಗಳು ಆರು ಸೂಚಕಗಳಲ್ಲಿ ಸಂಪೂರ್ಣತೆಯನ್ನು ಸಾಧಿಸಲು 3 ತಿಂಗಳ ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸುತ್ತವೆ

2.       ಜಿಲ್ಲೆಗಳು/ ತಾಲ್ಲೂಕುಗಳು ಪ್ರತಿ ತಿಂಗಳು ಸಂಪೂರ್ಣತೆಯ ಪ್ರಗತಿಯನ್ನು ಟ್ರ್ಯಾಕ್ ಮಾಡುತ್ತವೆ

3.       ಜಾಗೃತಿ ಮತ್ತು ನಡವಳಿಕೆ ಬದಲಾವಣೆಯ ಅಭಿಯಾನಗಳನ್ನು ಅನುಷ್ಠಾನಗೊಳಿಸುತ್ತವೆ

4.       ಜಿಲ್ಲಾ ಮಟ್ಟದ ಅಧಿಕಾರಿಗಳು ಮೇಲ್ವಿಚಾರಣಾ ಕ್ಷೇತ್ರ ಭೇಟಿಗಳನ್ನು ನಡೆಸುತ್ತಾರೆ

ನೀತಿ ಆಯೋಗವು ಸಂಬಂಧಿತ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಸಹಯೋಗದೊಂದಿಗೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು, ಈ ಜಿಲ್ಲೆಗಳು ಮತ್ತು ತಾಲ್ಲೂಕುಗಳ ಪರಿಣಾಮಕಾರಿ ಮತ್ತು ತ್ವರಿತ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡುತ್ತವೆ. ಈ ಸಹಯೋಗವು ಸುಧಾರಿತ ಯೋಜನೆ ಮತ್ತು ಅನುಷ್ಠಾನ, ಸಾಮರ್ಥ್ಯ ನಿರ್ಮಾಣ ಮತ್ತು ವರ್ಧಿತ ಮತ್ತು ಸುಸ್ಥಿರ ಸೇವೆ ವಿತರಣೆಗಾಗಿ ವ್ಯವಸ್ಥೆಗಳನ್ನು ಸ್ಥಾಪಿಸುವುದರ ಮೇಲೆ ಗಮನ ಕೇಂದ್ರೀಕರಿಸುತ್ತದೆ.

ಮಹತ್ವಾಕಾಂಕ್ಷಿ ಜಿಲ್ಲೆಗಳು ಮತ್ತು ತಾಲ್ಲೂಕುಗಳು ಕಾರ್ಯಕ್ರಮದ ಬಗ್ಗೆ

ದೇಶದಲ್ಲಿ ತುಲನಾತ್ಮಕವಾಗಿ ಹಿಂದುಳಿದ ಮತ್ತು ದೂರ ಪ್ರದೇಶಗಳ ತ್ವರಿತ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು 112 ಜಿಲ್ಲೆಗಳನ್ನು ಒಳಗೊಂಡ ಮಹತ್ವಾಕಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮವನ್ನು (ADP) 2018 ರಲ್ಲಿ ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮವು ತನ್ನ ನಾಗರಿಕರ ಜೀವನವನ್ನು ಉನ್ನತೀಕರಿಸುವ ಪ್ರಮುಖ ಸೂಚಕಗಳನ್ನು ಸುಧಾರಿಸುವಲ್ಲಿ ಮಾಪನ ಮಾಡಬಹುದಾದ ಮತ್ತು ಸ್ಪಷ್ಟವಾದ ಪ್ರಭಾವವನ್ನು ಹೊಂದಿದೆ. ಮಹತ್ವಾಕಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮದ ಯಶಸ್ಸಿನ ಆಧಾರದ ಮೇಲೆ, ಮಹತ್ವಾಕಾಂಕ್ಷಿ ತಾಲ್ಲೂಕುಗಳ ಕಾರ್ಯಕ್ರಮಕ್ಕೆ (ABP) 2023 ರಲ್ಲಿ ಗೌರವಾನ್ವಿತ ಪ್ರಧಾನಮಂತ್ರಿಯವರು ಚಾಲನೆ ನೀಡಿದರು ಮತ್ತು ದೇಶದಾದ್ಯಂತ 500 ತಾಲ್ಲೂಕುಗಳಲ್ಲಿ ಆರೋಗ್ಯ, ಪೋಷಣೆ, ಶಿಕ್ಷಣ, ಕುಡಿಯುವ ನೀರು ಮತ್ತು ನೈರ್ಮಲ್ಯ, ಕೃಷಿ, ಜಲಸಂಪನ್ಮೂಲಗಳು, ಆರ್ಥಿಕ ಸೇರ್ಪಡೆ ಮತ್ತು ಮೂಲಭೂತ ಮೂಲಸೌಕರ್ಯದಂತಹ ಅನೇಕ ವಲಯಗಳಲ್ಲಿ ಅಗತ್ಯ ಸರ್ಕಾರಿ ಸೇವೆಗಳ ಸಂಪೂರ್ಣತೆಯ ಗುರಿಯನ್ನು ಹೊಂದಿದೆ.

ಮಹತ್ವಾಕಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮ

ಮಹತ್ವಾಕಾಂಕ್ಷಿತಾಲ್ಲೂಕುಗಳ ಕಾರ್ಯಕ್ರಮ

ಜನವರಿ 2018 ರಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಯವರು ಚಾಲನೆ ನೀಡಿದರು.

ಜನವರಿ 2023 ರಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಯವರು ಪ್ರಾರಂಭಿಸಿದರು.

ದೇಶಾದ್ಯಂತ 112 ಜಿಲ್ಲೆಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪರಿವರ್ತಿಸುವ ಗುರಿ ಹೊಂದಿದೆ.

ದೇಶಾದ್ಯಂತ 500 ತಾಲ್ಲೂಕುಗಳಲ್ಲಿ (329 ಜಿಲ್ಲೆಗಳು) ಅಗತ್ಯ ಸರ್ಕಾರಿ ಸೇವೆಗಳ ಸಂಪೂರ್ಣತೆ ಸಾಧಿಸುವ ಗುರಿ ಹೊಂದಿದೆ.

ಐದು ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ:

  • ಆರೋಗ್ಯ ಮತ್ತು ಪೋಷಣೆ
  • ಶಿಕ್ಷಣ
  • ಕೃಷಿ ಮತ್ತು ಜಲ ಸಂಪನ್ಮೂಲಗಳು
  • ಆರ್ಥಿಕ ಸೇರ್ಪಡೆ ಮತ್ತು ಕೌಶಲ್ಯ ಅಭಿವೃದ್ಧಿ
  • ಮೂಲಸೌಕರ್ಯ

ಐದು ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ:

  • ಆರೋಗ್ಯ ಮತ್ತು ಪೋಷಣೆ
  • ಶಿಕ್ಷಣ
  • ಕೃಷಿ ಮತ್ತು ಸಂಬಂಧಿತ ಸೇವೆಗಳು
  • ಮೂಲಭೂತ ಮೂಲಸೌಕರ್ಯ
  • ಸಾಮಾಜಿಕ ಅಭಿವೃದ್ಧಿ

ಪ್ರಗತಿಯನ್ನು ಅಭಿವೃದ್ಧಿಯ 81 ಸೂಚಕಗಳಲ್ಲಿ ಅಳೆಯಲಾಗುತ್ತದೆ

ಪ್ರಗತಿಯನ್ನು ಅಭಿವೃದ್ಧಿಯ 40 ಸೂಚಕಗಳಲ್ಲಿ ಅಳೆಯಲಾಗುತ್ತದೆ

ತಾಲ್ಲೂಕುಗಳ ವಿವರಗಳನ್ನು ಇಲ್ಲಿ  ನೋಡಬಹುದು.

Block Profile can be accessed from here.

 

*****



(Release ID: 2030554) Visitor Counter : 6