ಪ್ರಧಾನ ಮಂತ್ರಿಯವರ ಕಛೇರಿ

​​​​​​​ಫೆಬ್ರವರಿ 8 ರಂದು ಶ್ರೀಲ ಪ್ರಭುಪಾದರ 150 ನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

Posted On: 07 FEB 2024 4:33PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 8 ಫೆಬ್ರವರಿ 2024 ರಂದು ಮಧ್ಯಾಹ್ನ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಶ್ರೀಲ ಪ್ರಭುಪಾದ ಜೀಯವರ 150 ನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 

ಪ್ರಧಾನಮಂತ್ರಿಯವರು ಮಹಾನ್ ಆಧ್ಯಾತ್ಮಿಕ ಗುರು ಶ್ರೀಲ ಪ್ರಭುಪಾದ ಜೀ ಅವರ ಗೌರವಾರ್ಥ ಸ್ಮರಣಾರ್ಥ ಅಂಚೆಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ.

ಆಚಾರ್ಯ ಶ್ರೀಲ ಪ್ರಭುಪಾದರು ಗೌಡಿಯ ಮಿಷನ್ ಸಂಸ್ಥಾಪಕರು, ಅವರು ವೈಷ್ಣವ ಸಂಪ್ರದಾಯದ ಪ್ರತಿಪಾದಕರು, ಮೂಲಭೂತ ತತ್ವಗಳನ್ನು ಸಂರಕ್ಷಿಸುವ ಮತ್ತು ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಶ್ರೀ ಚೈತನ್ಯ ಮಹಾಪ್ರಭುಗಳ ಬೋಧನೆಗಳನ್ನು ಮತ್ತು ವೈಷ್ಣವರ ಶ್ರೀಮಂತ ಆಧ್ಯಾತ್ಮಿಕ ಪರಂಪರೆಯನ್ನು ಪ್ರಪಂಚದಾದ್ಯಂತ ಪ್ರಚಾರ ಮಾಡುವಲ್ಲಿ ಮತ್ತು ಹರೇ ಕೃಷ್ಣ ಭಕ್ತಿ ಅಭಿಯಾನ ಮುಂದುವರಿಸಲು ಗೌಡಿಯಾ ಮಿಷನ್ ಮಹತ್ವದ ಪಾತ್ರವನ್ನು ವಹಿಸಿದೆ.

******



(Release ID: 2003826) Visitor Counter : 47