ಪ್ರಧಾನ ಮಂತ್ರಿಯವರ ಕಛೇರಿ

ಸಂಸತ್ ಅಧಿವೇಶನಕ್ಕೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಪ್ರಧಾನಿ ಭಾಷಣ


​​​​​​​"ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಮಾರ್ಗದರ್ಶನ ಮತ್ತು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಮಧ್ಯಂತರ ಬಜೆಟ್ ನಾರಿ ಶಕ್ತಿಗೆ ಪೂರಕವಾಗಿದೆ"

"ರಚನಾತ್ಮಕ ಟೀಕೆಗಳು ಸ್ವಾಗತಾರ್ಹವಾದರೂ, ವಿಚ್ಛಿದ್ರಕಾರಕ ನಡವಳಿಕೆಯು ಮರೆಯಾಗುತ್ತದೆ"

"ಎಂದಿಗೂ ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸೋಣ, ನಮ್ಮ ಆಲೋಚನೆಗಳಿಂದ ಕಲಾಪಗಳನ್ನು ಉತ್ತೇಜಿಸೋಣ, ಶ್ರೀಮಂತಗೊಳಿಸೋಣ ಮತ್ತು ರಾಷ್ಟ್ರವನ್ನು ಉತ್ಸಾಹ ಮತ್ತು ಆಶಾವಾದದಿಂದ ತುಂಬಿಸೋಣ"

"ಸಾಮಾನ್ಯವಾಗಿ, ಚುನಾವಣಾ ಸಮಯ ಬಂದಾಗ, ಪೂರ್ಣ ಬಜೆಟ್ ಅನ್ನು ಮಂಡಿಸುವುದಿಲ್ಲ, ನಾವು ಸಹ ಅದೇ ಸಂಪ್ರದಾಯವನ್ನು ಅನುಸರಿಸುತ್ತೇವೆ ಮತ್ತು ಹೊಸ ಸರ್ಕಾರ ರಚನೆಯ ನಂತರ ಪೂರ್ಣ ಬಜೆಟ್ ಅನ್ನು ನಿಮ್ಮ ಮುಂದೆ ತರುತ್ತೇವೆ"

Posted On: 31 JAN 2024 12:04PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು ನೂತನ ಸಂಸತ್ತಿನ ಮೊದಲ ಅಧಿವೇಶನವನ್ನು ನೆನಪಿಸಿಕೊಂಡರು ಮತ್ತು ಮೊದಲ ಅಧಿವೇಶನದಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರದ ಬಗ್ಗೆ ಗಮನ ಸೆಳೆದರು. "ಮಹಿಳಾ ಸಬಲೀಕರಣ ಮತ್ತು ಅಭಿಮಾನ ಕಾಯಿದೆಯ ಅಂಗೀಕಾರವು ನಮ್ಮ ರಾಷ್ಟ್ರಕ್ಕೆ ಒಂದು ಪ್ರಮುಖ ಕ್ಷಣವಾಗಿದೆ" ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಜನವರಿ 26 ರಂದು ಗಣರಾಜ್ಯೋತ್ಸವದ ಆಚರಣೆಯನ್ನು ಉಲ್ಲೇಖಿಸಿದ ಅವರು, ನಾರಿ ಶಕ್ತಿಯ ಶಕ್ತಿ, ಶೌರ್ಯ ಮತ್ತು ನಿರ್ಣಯವನ್ನು ದೇಶವು ಸ್ವೀಕರಿಸಿದೆ ಎಂದು ತಿಳಿಸಿದರು. 

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮಧ್ಯಂತರ ಬಜೆಟ್ ಮಂಡನೆಯ ಮಹತ್ವದ ಬಗ್ಗೆ ತಿಳಿಸಿದರು. ಇದನ್ನು ಮಹಿಳಾ ಸಬಲೀಕರಣದ ಆಚರಣೆ ಎಂದು ಬಣ್ಣಿಸಿದರು.

ಸಂಸತ್ತಿನ ಪ್ರತಿಯೊಬ್ಬ ಸದಸ್ಯರ ಕೊಡುಗೆಯನ್ನು ಗುರುತಿಸಿದ್ದಾರೆ. ಆದರೆ, ಪ್ರಜಾಸತ್ತಾತ್ಮಕ ಮೌಲ್ಯಗಳಿಂದ ದೂರ ಸರಿದು ಗಲಾಟೆ ಮತ್ತು ಅಡ್ಡಿಪಡಿಸುತ್ತಿರುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಪ್ರಧಾನಿ ಒತ್ತಾಯಿಸಿದರು. "ಪ್ರಜಾಪ್ರಭುತ್ವದಲ್ಲಿ ಟೀಕೆ ಮತ್ತು ವಿರೋಧ ಅತ್ಯಗತ್ಯ, ಆದರೆ ರಚನಾತ್ಮಕ ಆಲೋಚನೆಗಳಿಂದ ಸದನವನ್ನು ಶ್ರೀಮಂತಗೊಳಿಸಿದವರನ್ನು ನೆನಪಿಸಿಕೊಳ್ಳುತ್ತಾರೆ. ಕೇವಲ ಅಡ್ಡಿಪಡಿಸಿದವರನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ" ಎಂದು ಪ್ರಧಾನಿ ಹೇಳಿದರು.


ಪ್ರಧಾನಿ ಮೋದಿ ಅವರು ಸಂಸತ್ತಿನ ಚರ್ಚೆಗಳ ನಿರಂತರ ಪರಿಣಾಮವನ್ನು ಒತ್ತಿಹೇಳಿದರು, "ಇಲ್ಲಿ ಮಾತನಾಡುವ ಪ್ರತಿಯೊಂದು ಪದವೂ ಇತಿಹಾಸದಲ್ಲಿ ಪ್ರತಿಧ್ವನಿಸುತ್ತದೆ" ಎಂದು ಪ್ರತಿಪಾದಿಸಿದರು. ಸದಸ್ಯರು ಸಕಾರಾತ್ಮಕವಾಗಿ ಕೊಡುಗೆ ನೀಡುವಂತೆ ಕರೆ ನೀಡಿದ ಅವರು, "ರಚನಾತ್ಮಕ ಟೀಕೆಗಳು ಸ್ವಾಗತಾರ್ಹವಾದರೂ, ವಿಚ್ಛಿದ್ರಕಾರಕ ನಡವಳಿಕೆಯು ಮರೆಯಾಗುತ್ತದೆ" ಎಂದು ಹೇಳಿದರು. 

ಬಜೆಟ್ ಅಧಿವೇಶನ ನಡೆಯುತ್ತಿರುವುದರಿಂದ, ಎಲ್ಲಾ ಗೌರವಾನ್ವಿತ ಸದಸ್ಯರು ಸಕಾರಾತ್ಮಕವಾಗಿ ಪಾಲ್ಗೊಳ್ಳುವ ಅವಕಾಶವನ್ನು ಬಳಸಿಕೊಳ್ಳುವಂತೆ ಪ್ರಧಾನಿ ಮೋದಿ ಒತ್ತಾಯಿಸಿದರು. ರಾಷ್ಟ್ರೀಯ ಹಿತಾಸಕ್ತಿಗಳಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದೆ.

"ಎಂದಿಗೂ ಅತ್ಯುತ್ತಮವಾದದ್ದನ್ನು ತಲುಪಿಸಲು ನಾವು ಶ್ರಮಿಸೋಣ, ನಮ್ಮ ಆಲೋಚನೆಗಳಿಂದ ಸದನವನ್ನು ಶ್ರೀಮಂತಗೊಳಿಸೋಣ ಮತ್ತು ರಾಷ್ಟ್ರವನ್ನು ಉತ್ಸಾಹ ಮತ್ತು ಆಶಾವಾದದಿಂದ ತುಂಬಿಸೋಣ."

“ಸಾಮಾನ್ಯವಾಗಿ, ಚುನಾವಣಾ ಸಮಯ ಬಂದಾಗ, ಪೂರ್ಣ ಬಜೆಟ್ ಅನ್ನು ಮಂಡಿಸುವುದಿಲ್ಲ, ನಾವು ಸಹ ಅದೇ ಸಂಪ್ರದಾಯವನ್ನು ಅನುಸರಿಸುತ್ತೇವೆ ಮತ್ತು ಹೊಸ ಸರ್ಕಾರ ರಚನೆಯ ನಂತರ ಪೂರ್ಣ ಬಜೆಟ್ ಅನ್ನು ನಿಮ್ಮ ಮುಂದೆ ತರುತ್ತೇವೆ. ಈ ಬಾರಿ ಹಣಕಾಸು ಸಚಿವೆ ನಿರ್ಮಲಾ ಜೀ ಅವರು ತಮ್ಮ ಬಜೆಟ್ ಅನ್ನು ನಾಳೆ ಕೆಲವು ಮಾರ್ಗದರ್ಶಿ ಅಂಶಗಳೊಂದಿಗೆ ಮಂಡಿಸಲಿದ್ದಾರೆ.

"ಜನರ ಆಶೀರ್ವಾದದಿಂದ ಪ್ರೇರಿತರಾಗಿ ಎಲ್ಲರನ್ನೂ ಒಳಗೊಳ್ಳುವ ಮತ್ತು ಸಮಗ್lರ ಅಭಿವೃದ್ಧಿಯ ಭಾರತದ ಪಯಣ ಮುಂದುವರಿಯುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

****



(Release ID: 2000887) Visitor Counter : 40