ಪ್ರಧಾನ ಮಂತ್ರಿಯವರ ಕಛೇರಿ

ಮಲಾವಿ, ಮೊಜಾಂಬಿಕ್ ಮತ್ತು ಮಡಗಾಸ್ಕರ್ ನಲ್ಲಿ ಫ್ರೆಡ್ಡಿ ಚಂಡಮಾರುತದಿಂದ ಉಂಟಾದ ಜೀವಹಾನಿಗೆ ಪ್ರಧಾನ ಮಂತ್ರಿ  ಸಂತಾಪ

Posted On: 15 MAR 2023 6:32PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಲಾವಿ, ಮೊಜಾಂಬಿಕ್ ಮತ್ತು ಮಡಗಾಸ್ಕರ್ ನಲ್ಲಿ ಫ್ರೆಡ್ಡಿ ಚಂಡಮಾರುತದಿಂದ ಉಂಟಾದ ಜೀವಹಾನಿಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು; 

"ಮಲಾವಿ, ಮೊಜಾಂಬಿಕ್ ಮತ್ತು ಮಡಗಾಸ್ಕರ್ ನಲ್ಲಿ ಫ್ರೆಡ್ಡಿ ಚಂಡಮಾರುತದಿಂದ ಉಂಟಾದ ವಿನಾಶದಿಂದ ದುಃಖಿತನಾಗಿದ್ದೇನೆ. ಅಧ್ಯಕ್ಷ @LAZARUSCHAKWERA, ಅಧ್ಯಕ್ಷ ಫಿಲಿಪ್ ನ್ಯೂಸಿ ಮತ್ತು ಅಧ್ಯಕ್ಷ @SE_Rajoelina ಅವರಿಗೆ, ದುಃಖಿತ ಕುಟುಂಬಗಳು ಮತ್ತು ಚಂಡಮಾರುತದಿಂದ ಬಾಧಿತರಾದವರಿಗೆ ಸಂತಾಪಗಳು. ಈ ಕಠಿಣ ಸಮಯದಲ್ಲಿ ಭಾರತ ನಿಮ್ಮೊಂದಿಗೆ ನಿಲ್ಲುತ್ತದೆ” ಎಂದು ಹೇಳಿದ್ದಾರೆ.

 

***



(Release ID: 1907455) Visitor Counter : 118