ಪ್ರಧಾನ ಮಂತ್ರಿಯವರ ಕಛೇರಿ

ರಾಧಾ ಸ್ವಾಮಿ ಸತ್ಸಂಗ್ ಬ್ಯಾಸ್ ಗೆ ಭೇಟಿ ನೀಡಿದ ಪ್ರಧಾನಮಂತ್ರಿ

Posted On: 05 NOV 2022 8:07PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಧಾ ಸ್ವಾಮಿ ಸತ್ಸಂಗ್ ಬ್ಯಾಸ್ ಗೆ ಭೇಟಿ ನೀಡಿದರು. ಅವರು ಬಾಬಾ ಗುರಿಂದರ್ ಸಿಂಗ್ ಧಿಲ್ಲೋನ್ ಅವರೊಂದಿಗೆ ಸಂವಾದ ನಡೆಸಿ,  ಅಲ್ಲಿನ ಚಟುವಟಿಕೆಗಳನ್ನು ವೀಕ್ಷಿಸಿದರು.

ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದು:

"ರಾಧಾ ಸ್ವಾಮಿ ಸತ್ಸಂಗ್ ಬ್ಯಾಸ್ ಗೆ ಭೇಟಿ ನೀಡುವ ಮತ್ತು ಅವರು ಮಾಡುತ್ತಿರುವ ಅಸಾಧಾರಣ ಕಾರ್ಯವನ್ನು ನೋಡುವ ಅವಕಾಶ ಸಿಕ್ಕಿದ್ದಕ್ಕೆ ಸಂತಸವಾಗಿದೆ. ಬಾಬಾ ಗುರಿಂದರ್ ಸಿಂಗ್ ಧಿಲ್ಲೋನ್ ಜಿ ಅವರೊಂದಿಗೆ ಉದ್ದಿಶ್ಯಪೂರ್ಣ ಸಂವಾದವನ್ನು ಸಹ ನಡೆಸಿದೆ, ಅವರ ಸೇವಾ ಸ್ಫೂರ್ತಿ ಪ್ರಶಂಸನೀಯ ಮತ್ತು ಸ್ಫೂರ್ತಿದಾಯಕವಾಗಿದೆ." ಎಂದು ತಿಳಿಸಿದ್ದಾರೆ.

***



(Release ID: 1874114) Visitor Counter : 69