ಪ್ರಧಾನ ಮಂತ್ರಿಯವರ ಕಛೇರಿ

ಆಯುಷ್ಮಾನ್ ಭಾರತ್ ಯೋಜನೆಗೆ ನಾಗರಿಕರು ನೀಡಿರುವ ಪ್ರತಿಕ್ರಿಯೆ ಹಂಚಿಕೊಂಡ ಪ್ರಧಾನ ಮಂತ್ರಿ

Posted On: 06 OCT 2022 3:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಆಯುಷ್ಮಾನ್ ಭಾರತ್ ಯೋಜನೆ’ಗೆ ದೇಶದ ನಾಗರಿಕರು ನೀಡಿರುವ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ. ಎಲ್ಲಾ ಭಾರತೀಯ ನಾಗರಿಕರಿಗೆ 5 ಲಕ್ಷ ರೂಪಾಯಿ ತನಕ ಆರೋಗ್ಯ ವಿಮಾ ರಕ್ಷಣೆ ಒದಗಿಸಿರುವ ಸರ್ಕಾರದ ನಿರ್ಧಾರವನ್ನು ನಾಗರಿಕರು ಹೆಚ್ಚಾಗಿ ಪ್ರಸ್ತಾಪಿಸಿದ್ದಾರೆ ಎಂದು ಪ್ರಧಾನಿ ಬೆಳಕು ಚೆಲ್ಲಿದ್ದಾರೆ. ಈ ಯೋಜನೆಯ ಲಾಭವನ್ನು ಭಾರತದಾದ್ಯಂತ ಪಡೆಯಬಹುದು ಎಂದು ಪ್ರಧಾನಿ ತಿಳಿಸಿದ್ದಾರೆ.

ನಾಗರಿಕರೊಬ್ಬರು ಮಾಡಿರುವ ಟ್ವೀಟ್ ಕುರಿತು ಪ್ರಧಾನ ಮಂತ್ರಿ ಟ್ವೀಟ್ ಮಾಡಿದ್ದು;

"ಇದು ಸಂಪೂರ್ಣವಾಗಿ ಆಗಿದೆ. ಭಾರತದಾದ್ಯಂತ ಫಲಾನುಭವಿಗಳು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು ಎಂಬ ಅಂಶವೂ ಅಷ್ಟೇ ಮುಖ್ಯವಾಗಿದೆ" ಎಂದಿದ್ದಾರೆ.

*****



(Release ID: 1865629) Visitor Counter : 136