ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮುಂಬೈನ ಜುಹು ಕಡಲ ತೀರದಲ್ಲಿ ಕ್ಲೀನಥಾನ್ ಆಯೋಜನೆ ಬಗ್ಗೆ ಪ್ರಧಾನಿ ಮೆಚ್ಚುಗೆ

ಪ್ರಕಟಣಾ ದಿನಾಂಕ: 12 SEP 2022 8:03PM by PIB Bengaluru

ಮುಂಬೈನ ಜುಹು ಕಡಲ ತೀರದಲ್ಲಿ ಕ್ಲೀನಥಾನ್ ಆಯೋಜನೆ ಕುರಿತು ಡಾ.ಜಿತೇಂದ್ರ ಸಿಂಗ್ ಟ್ವೀಟ್ ಹಂಚಿಕೊಂಡಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಆ ಉದ್ದೇಶವನ್ನು ಶ್ಲಾಘಿಸಿದ್ದಾರೆ. ಕ್ಲೀನಥಾನ್ ನಲ್ಲಿ ಭಾಗಿಯಾಗಿರುವ ಜನರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ಶ್ರೀ ನರೇಂದ್ರ ಮೋದಿ ಅವರು, ನಮ್ಮ ಕರಾವಳಿ ತೀರಗಳು ಸ್ವಚ್ಛವಾಗಿರುವುದಕ್ಕೆ ನಾವು ಹೆಚ್ಚಿನ ಗಮನ ಹರಿಸುವುದು ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಶ್ಲಾಘನೀಯ...ಈ ಪ್ರಯತ್ನದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ನಾನು ಶ್ಲಾಘಿಸುತ್ತೇನೆ.

ಭಾರತವು ಸುದೀರ್ಘ ಮತ್ತು ಸುಂದರವಾದ ಕರಾವಳಿ ವರದಾನವಾಗಿದೆ ಮತ್ತು ನಮ್ಮ ಕರಾವಳಿಯನ್ನು ಸ್ವಚ್ಛವಾಗಿಡಲು ನಾವು ಗಮನಹರಿಸುವುದು ಮುಖ್ಯವಾಗಿದೆ’’

 

 

*****


(ಪ್ರಕಟಣೆ ಐ.ಡಿ.: 1859179) ವಿಸಿಟರ್ ಕೌಂಟರ್ : 135