ಪ್ರಧಾನ ಮಂತ್ರಿಯವರ ಕಛೇರಿ

ಕಂಚಿನ ಪದಕವನ್ನು ಗೆದ್ದಿದ್ದಕ್ಕಾಗಿ ಟೇಬಲ್ ಟೆನ್ನಿಸ್ ಆಟಗಾರ ಸತ್ಯನ್ ಜ್ಞಾನಶೇಖರನ್ ಅವರ ದೃಢತೆ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 08 AUG 2022 7:49PM by PIB Bengaluru

ಬರ್ಮಿಂಗ್ ಹ್ಯಾಮ್  ಕಾಮನ್‍ ವೆಲ್ತ್ ಕ್ರೀಡಾಕೂಟ 2022 ರಲ್ಲಿ ಪುರುಷರ ಸಿಂಗಲ್ಸ್ ಟೇಬಲ್ ಟೆನಿಸ್ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಕ್ಕಾಗಿ ಟೇಬಲ್ ಟೆನಿಸ್ ಆಟಗಾರ ಸತ್ಯನ್ ಜ್ಞಾನಶೇಖರನ್ ಅವರ ದೃಢತೆ ಮತ್ತು ಸಮರ್ಪಣೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶ್ಲಾಘಿಸಿದರು.

 

ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ;

 

" 2022 ಕಾಮನ್‍ ವೆಲ್ತ್ ಕ್ರೀಡಾಕೂಟ ದಾದ್ಯಂತ @sathiyantt ಅವರಿಂದ ಅದ್ಭುತ ಪ್ರದರ್ಶನ. ಟೇಬಲ್ ಟೆನಿಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಅವರ ದೃಢತೆ ಮತ್ತು ಸಮರ್ಪಣಾ ಮನೋಭಾವ ಶ‍್ಲಾಘನೀಯ. ಮುಂಬರುವ ಪಂದ್ಯಾವಳಿಗಳಲ್ಲಿಯೂ ಅವರು ಮಿಂಚುತ್ತಾರೆ ಎಂದು ನನಗೆ ಖಾತ್ರಿಯಿದೆ. #Cheer4India".

 


************



(Release ID: 1850438) Visitor Counter : 123