ಪ್ರಧಾನ ಮಂತ್ರಿಯವರ ಕಛೇರಿ

ಬಾಬು ಜಗಜೀವನರಾಮ್ ಜಯಂತಿ; ಧೀಮಂತ ನಾಯಕನಿಗೆ ಪ್ರಧಾನ ಮಂತ್ರಿ ಗೌರವ ನಮನ

Posted On: 05 APR 2022 9:13AM by PIB Bengaluru

ಸ್ವಾತಂತ್ರ್ಯ ಹೋರಾಟಗಾರ, ಮಾಜಿ ರಕ್ಷಣಾ ಸಚಿವ ಬಾಬು ಜಗಜೀವನ ರಾಮ್ ಅವರ ಜಯಂತಿ ಅಂಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ;
"ಬಾಬು ಜಗಜೀವನ್ ರಾಮ್ ಜೀ ಅವರಿಗೆ ಅವರ ಜನ್ಮದಿನದ ಗೌರವ ನಮನಗಳು. ಸ್ವಾತಂತ್ರ್ಯ ಚಳುವಳಿ ಸಂದರ್ಭದಲ್ಲಿ ಮತ್ತು ಸ್ವಾತಂತ್ರ್ಯಾ ನಂತರ ಅವರ ಗಮನಾರ್ಹ ಕೊಡುಗೆಯನ್ನು ನಮ್ಮ ದೇಶವು ಸದಾ ಸ್ಮರಿಸುತ್ತದೆ. ಅವರ ಆಡಳಿತ ಕೌಶಲ್ಯ ಮತ್ತು ಬಡವರ ಬಗ್ಗೆ ಹೊಂದಿದ್ದ ಕಾಳಜಿಗಾಗಿ ಅವರು ವ್ಯಾಪಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ" ಎಂದು ಪ್ರಧಾನಿ ಬಣ್ಣಿಸಿದ್ದಾರೆ.

***



(Release ID: 1813662) Visitor Counter : 237