ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತವು 400 ಶತಕೋಟಿ ರೂಪಾಯಿ ಮೌಲ್ಯದ ಸರಕು ರಫ್ತು ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಿರುವುದಕ್ಕೆ ರೈತರು, ನೇಕಾರರು, MSME(ಸಣ್ಣ ಅತಿ ಸಣ್ಣ ಮಧ್ಯಮ ಉದ್ಯಮಗಳು) ಗಳು, ತಯಾರಕರು, ರಫ್ತುದಾರರನ್ನು ಪ್ರಧಾನಮಂತ್ರಿ ಅಭಿನಂದಿಸಿದರು

प्रविष्टि तिथि: 23 MAR 2022 9:58AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರು, ನೇಕಾರರು, ಎಂಎಸ್‌ಎಂಇಗಳು, ತಯಾರಕರು, ರಫ್ತುದಾರರನ್ನು ಶ್ಲಾಘಿಸಿದ್ದಾರೆ. ಏಕೆಂದರೆ ಭಾರತವು ನಿಗದಿತ ಸಮಯಕ್ಕಿಂತ 9 ದಿನಗಳ ಮುಂಚಿತವಾಗಿ 400 ಶತಕೋಟಿ ರೂಪಾಯಿ ಮೌಲ್ಯದ ಸರಕು ರಫ್ತು ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಮಂತ್ರಿ ;

" ಭಾರತವು 400 ಶತಕೋಟಿ  ರೂಪಾಯಿ ಮೌಲ್ಯದ ಸರಕು ರಫ್ತುಗಳ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿತ್ತು ಮತ್ತು ಮೊದಲ ಬಾರಿಗೆ ಈ ಗುರಿಯನ್ನು ಸಾಧಿಸಿದೆ. ಈ ಯಶಸ್ಸಿಗಾಗಿ ನಾನು ನಮ್ಮ ರೈತರು, ನೇಕಾರರು, MSMEಗಳು, ತಯಾರಕರು, ರಫ್ತುದಾರರನ್ನು ಅಭಿನಂದಿಸುತ್ತೇನೆ.

ಇದು ನಮ್ಮ ಆತ್ಮನಿರ್ಭರ ಭಾರತ ಪಯಣದಲ್ಲಿ ಪ್ರಮುಖ ಮೈಲಿಗಲ್ಲು. #ಲೋಕಲ್ ಗೋಸ್ ಗ್ಲೋಬಲ್" ಎಂದಿದ್ದಾರೆ.

****


(रिलीज़ आईडी: 1808545) आगंतुक पटल : 247
इस विज्ञप्ति को इन भाषाओं में पढ़ें: Malayalam , English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu