ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಕನ್ನಡದ ಹೆಸರಾಂತ ಸಾಹಿತಿ ಮತ್ತು ಕವಿ ಶ್ರೀ ಚೆನ್ನವೀರ ಕಣವಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 16 FEB 2022 7:23PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕನ್ನಡದ ಹೆಸರಾಂತ ಲೇಖಕ ಮತ್ತು ಕವಿ ಶ್ರೀ ಚೆನ್ನವೀರ ಕಣವಿ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. 

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು;

"ಶ್ರೀ ಚೆನ್ನವೀರ ಕಣವಿ ಅವರ ಉತ್ಕೃಷ್ಟ ಕಾವ್ಯ ಮತ್ತು ಬರಹಗಳು ಕನ್ನಡ ಸಾಹಿತ್ಯವನ್ನು ದಶಕಗಳಿಂದ ಶ್ರೀಮಂತಗೊಳಿಸಿವೆ. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ." ಎಂದು ತಿಳಿಸಿದ್ದಾರೆ. 

***



(Release ID: 1798911) Visitor Counter : 181