ಪ್ರಧಾನ ಮಂತ್ರಿಯವರ ಕಛೇರಿ

ಖ್ಯಾತ ವ್ಯಂಗ್ಯಚಿತ್ರಕಾರ ಶ್ರೀ ನಾರಾಯಣ್ ದೇವ್ ನಾಥ್ ಜಿ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 18 JAN 2022 2:32PM by PIB Bengaluru

ಖ್ಯಾತ ವ್ಯಂಗ್ಯಚಿತ್ರಕಾರ ಶ್ರೀ ನಾರಾಯಣ್ ದೇವ್ ನಾಥ್ ಜಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿಯವರು:

“ಶ್ರೀ ನಾರಾಯಣ್ ದೇವ್ ನಾಥ್ ಜಿ ಅವರು ತಮ್ಮ ಕೃತಿಗಳು, ವ್ಯಂಗ್ಯಚಿತ್ರಗಳು ಮತ್ತು ವಿವರಣೆಗಳ ಮೂಲಕ ಹಲವರ ಜೀವನವನ್ನು ಪ್ರಜ್ವಲಗೊಳಿಸಿದ್ದಾರೆ. ಅವರು ರಚಿಸಿದ ಚಿತ್ರಗಳು ಶಾಶ್ವತವಾಗಿ ಜನಪ್ರಿಯವಾಗಿವೆ. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ” ಎಂದು ಹೇಳಿದ್ದಾರೆ.

***



(Release ID: 1790733) Visitor Counter : 168