ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್ ನ ಮಾಜಿ ಸಚಿವ ಶ್ರೀ ದೇವಾನಂದ್ ಭಾಯ್ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಮಂತ್ರಿ

Posted On: 17 JUL 2021 11:30PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ಮಾಜಿ ಸಚಿವ ಶ್ರೀ ದೇವಾನಂದ್ ಭಾಯ್ ಸೋಲಂಕಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು: "ಗುಜರಾತ್ ಮಾಜಿ ಸಚಿವ ಶ್ರೀ ದೇವಾನಂದ್ ಭಾಯ್ ಸೋಲಂಕಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಸಾಮಾಜಿಕ ಕೊಡುಗೆ ಸದಾ ಸ್ಮರಣೆಯಲ್ಲಿರುತ್ತದೆ. ಅಗಲಿದ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಮತ್ತು ಅವರ ಕುಟುಂಬದವರಿಗೆ ಸಂತಾಪ ಸೂಚಿಸುತ್ತೇನೆ.. ಓಂ ಶಾಂತಿ!" ಎಂದು ತಿಳಿಸಿದ್ದಾರೆ

***



(Release ID: 1736785) Visitor Counter : 147