ಪ್ರಧಾನ ಮಂತ್ರಿಯವರ ಕಛೇರಿ

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಜಯಂತಿ; ಪ್ರಧಾನ ಮಂತ್ರಿ ಅವರಿಂದ ಗೌರವ ನಮನ

Posted On: 06 JUL 2021 8:20AM by PIB Bengaluru

ಧೀಮಂತ ಜನನಾಯಕ, ದೇಶಪ್ರೇಮಿ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜಯಂತಿ ಅಂಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.

ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು, “ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜಯಂತಿ ನೆನಪಲ್ಲಿ ಧೀಮಂತ ಜನನಾಯಕನಿಗೆ ತಲೆಬಾಗಿ ನಮಿಸುತ್ತೇನೆ. ಅವರಿಗಿದ್ದ ಉದಾತ್ತ ಪರಿಕಲ್ಪನೆಗಳು ದೇಶಾದ್ಯಂತ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿವೆ. ಮುಖರ್ಜಿ ಅವರು ತಮ್ಮ ಸಂಪೂರ್ಣ ಜೀವನವನ್ನು ಭಾರತದ ಏಕತೆ, ಸಮಗ್ರತೆ ಮತ್ತು ಪ್ರಗತಿಗಾಗಿ ಮೀಸಲಿಟ್ಟಿದ್ದರು. ಅವರು ದೇಶದ ಜನತೆಯ ನಡುವೆ ವಿದ್ವತ್|ಪೂರ್ಣ ವಿದ್ವಾಂಸರಾಗಿ ಮತ್ತು ಬುದ್ಧಿಜೀವಿಯಾಗಿ ಗುರುತಿಸಿಕೊಂಡಿದ್ದರುಎಂದು ಬಣ್ಣಿಸಿದ್ದಾರೆ.

***



(Release ID: 1733060) Visitor Counter : 215