PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 09 JUL 2020 6:30PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002NZFB.png

https://static.pib.gov.in/WriteReadData/userfiles/image/image001L7XC.jpg

https://static.pib.gov.in/WriteReadData/userfiles/image/image005GOD5.jpg https://static.pib.gov.in/WriteReadData/userfiles/image/image006N1S9.jpg

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೋವಿಡ್-19 ತಾಜಾ ಮಾಹಿತಿ: ಸಕ್ರಿಯ ಪ್ರಕರಣಗಳಿಗೆ ಹೋಲಿಸಿದರೆ ಗುಣಮುಖವಾದ ಪ್ರಕರಣಗಳು 1.75 ಪಟ್ಟು ಅಧಿಕ; ಸಕ್ರಿಯ ಪ್ರಕರಣಗಳು ಮತ್ತು ಗುಣಮುಖರಾದವರ ನಡುವಿನ ಪ್ರಮಾಣ 2 ಲಕ್ಷಕ್ಕೂ ಅಧಿಕ; ಗುಣಮುಖರಾದವರ ಪ್ರಮಾಣ ರಾಷ್ಟ್ರೀಯ ಸರಾಸರಿ ಮತ್ತಷ್ಟು ಸುಧಾರಣೆಗೊಂಡು ಶೇ.62.09ಕ್ಕೆ ಏರಿಕೆ

ಮಹತ್ವದ ಸಾಧನೆಯಲ್ಲಿ ಕೋವಿಡ್-19 ಸೋಂಕು ಸಕ್ರಿಯವಾಗಿರುವವರ ಸಂಖ್ಯೆಗಿಂತ ಗುಣಮುಖರಾಗಿರುವವರ ಸಂಖ್ಯೆ  2,06,588ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳಿಗೆ ಹೋಲಿಸಿದರೆ ಗುಣಮುಖರಾದವರ ಪ್ರಕರಣಗಳು 1.75 ಪಟ್ಟು ಅಧಿಕ. ಕಳೆದ 24 ಗಂಟೆಗಳಿಂದೀಚೆಗೆ ಒಟ್ಟು 19,547 ಸೋಂಕಿತರು ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟು ಕೋವಿಡ್-19 ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 4,76,377ಕ್ಕೆ ಏರಿಕೆಯಾಗಿದೆ. ತೀವ್ರ ನಿಗಾ, ಪರಿಣಾಮಕಾರಿ ಕಣ್ಗಾವಲು ಮತ್ತು ಮನೆ ಮನೆ ಸಮೀಕ್ಷೆ, ಕೋವಿಡ್-19 ಸೋಂಕಿತರ ತ್ವರಿತ ಪತ್ತೆ ಮತ್ತು ಐಸೋಲೇಷನ್, ಸಕಾಲದಲ್ಲಿ ಪರಿಣಾಮಕಾರಿ ಚಿಕಿತ್ಸೆ ಹಾಗೂ ನಿರ್ವಹಣೆ ಎಲ್ಲ ಕಾರಣಗಳಿಂದಾಗಿ ಉತ್ತಮ ಫಲಿತಾಂಶ ಸಾಧ್ಯವಾಗಿದೆ. ಪ್ರಸ್ತುತ 2,69,789 ಸಕ್ರಿಯ ಪ್ರಕರಣಗಳು ಇವೆ ಮತ್ತು ಅವೆಲ್ಲಾ ತೀವ್ರ ವೈದ್ಯಕೀಯ ನಿಗಾದಲ್ಲಿವೆ. ಭಾರತದಲ್ಲಿ ಕೋವಿಡ್-19 ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಕ್ರಮೇಣ ಏರಿಕೆಯಾಗುತ್ತಿದೆ. ಕೋವಿಡ್-19 ರೋಗಿಗಳಲ್ಲಿ ಗುಣಮುಖರಾಗಿರುವವರ ಪ್ರಮಾಣ ಇಂದು ಶೇ.62.09ಕ್ಕೆ ಏರಿಕೆಯಾಗಿದೆ.

https://static.pib.gov.in/WriteReadData/userfiles/image/image0078Q69.jpg

ಕೋವಿಡ್-19 ಕುರಿತ ಸಚಿವರ ಉನ್ನತ ಮಟ್ಟದ 18ನೇ ಸಭೆಯ ಅಧ್ಯಕ್ಷತೆ ವಹಿಸಿದ ಡಾ. ಹರ್ಷವರ್ಧನ್

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅಧ್ಯಕ್ಷತೆಯಲ್ಲಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್-19 ಕುರಿತಂತೆ ರಚಿಸಲಾಗಿರುವ ಉನ್ನತ ಮಟ್ಟದ ಸಚಿವರ ಸಮಿತಿಯ 18ನೇ ಸಭೆ ನಡೆಯಿತು. ಸಭೆಯಲ್ಲಿ ದೇಶದಲ್ಲಿ ಈವರೆಗೆ 3914 ಸೌಕರ್ಯಗಳನ್ನು ಸೃಷ್ಟಿಸಲಾಗಿದ್ದು, ಅವುಗಳಲ್ಲಿ 3,77,737 ಐಸೋಲೇಷನ್ ಹಾಸಿಗೆಗಳು(ಐಸಿಯು ಇಲ್ಲದಿರುವುದು), 39,820 ಐಸಿಯು ಹಾಸಿಗೆಗಳು ಮತ್ತು 1,42,415 ಆಕ್ಸಿಜನ್ ಸೌಕರ್ಯವಿರುವ ಹಾಗೂ 20,047 ವೆಂಟಿಲೇಶನ್ ಸೌಕರ್ಯವಿರುವ ಹಾಸಿಗೆಗಳಿವೆ ಎಂದು ಮಾಹಿತಿ ನೀಡಲಾಯಿತು. ಆರೋಗ್ಯ ರಕ್ಷಣಾ ಸೌಕರ್ಯಗಳಿಗೆ ಸಂಬಂಧಿಸಿದಂತೆ 213.55 ಲಕ್ಷ ಎನ್ 95  ಮಾಸ್ಕ್ ಗಳು, 120.94 ಲಕ್ಷ ಪಿಪಿಇಗಳು ಮತ್ತು 612.57 ಲಕ್ಷ ಹೆಚ್ ಸಿಕ್ಯೂ ಮಾತ್ರೆಗಳನ್ನು ವಿತರಿಸಲಾಗಿದೆ. ಜಾಗತಿಕವಾಗಿ ತೀವ್ರ ಸೋಂಕಿನಿಂದ ಬಾಧಿತವಾಗಿರುವ 5 ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಸ್ಥಿತಿ ಉತ್ತಮವಾಗಿದೆ. ಭಾರತದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ ಅತಿ ಕಡಿಮೆ ಜನರಿಗೆ ಸೋಂಕು(538) ಇದ್ದು, ಪ್ರತಿ ಮಿಲಿಯನ್ ಜನಸಂಖ್ಯೆಗೆ ಸಾವಿನ ಪ್ರಮಾಣ(15) ಇದೆ. ಜಾಗತಿಕ ಸರಾಸರಿ ಕ್ರಮವಾಗಿ 1453 ಮತ್ತು 68.7ರಷ್ಟಿದೆ. ದೇಶದ ಒಳಗೆ 8 ರಾಜ್ಯಗಳು(ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ಗುಜರಾತ್) ಇವು ಶೇ.90ರಷ್ಟು ಸಕ್ರಿಯ ಪ್ರಕರಣಗಳನ್ನು ಹೊಂದಿವೆ. 49 ಜಿಲ್ಲೆಗಳಲ್ಲಿ ಶೇ.890ರಷ್ಟು ಸಕ್ರಿಯ ಪ್ರಕರಣಗಳಿವೆ. ಅಲ್ಲದೆ 6 ರಾಜ್ಯಗಳು(ಮಹಾರಾಷ್ಟ್ರ, ದೆಹಲಿ, ಗುಜರಾತ್, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ) ಇಲ್ಲಿ ಒಟ್ಟಾರೆ ಸಾವಿನ ಸಂಖ್ಯೆಯಲ್ಲಿ ಶೇ.86ರಷ್ಟು ಸಂಭವಿಸಿವೆ ಮತ್ತು 32 ಜಿಲ್ಲೆಗಳಲ್ಲಿ ಶೇ.80ರಷ್ಟು ಸಾವು ಸಂಭವಿಸಿವೆ.

ಭಾರತೀಯ ಜಾಗತಿಕ ಸಪ್ತಾಹ ಉದ್ಘಾಟನಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ; ಜಾಗತಿಕ ಪುನಶ್ಚೇತನದಲ್ಲಿ ಭಾರತ ಮುಂಚೂಣಿ ಪಾತ್ರವಹಿಸಲಿದೆ: ಪ್ರಧಾನಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತೀಯ ಜಾಗತಿಕ ಸಪ್ತಾಹ ಉದ್ಘಾಟನಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಪ್ರಸಕ್ತ ಸಂಕಷ್ಟದ ಸಮಯವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಜಾಗತಿಕ ಪುನಶ್ಚೇತನ ಕಾರ್ಯದಲ್ಲಿ ಭಾರತ ಮುಂಚೂಣಿ ಪಾತ್ರವಹಿಸಲಿದೆ ಎಂದರು. ಇದಕ್ಕೆ ಎರಡು ಅಂಶಗಳು ಪ್ರಮುಖ ಕಾರಣವಾಗಿವೆ. ಮೊದಲನೆಯದು ಭಾರತದ ಪ್ರತಿಭೆ ಮತ್ತು ಎರಡನೆಯದು ಸುಧಾರಣೆ ಮತ್ತು ಪುನರುಜ್ಜೀವನದಲ್ಲಿ ಭಾರತದ ಸಾಮರ್ಥ್ಯ. ಅವರು ಭಾರತದ ಪ್ರತಿಭೆಯ ಶಕ್ತಿಗೆ ವಿಶ್ವದಾದ್ಯಂತ ಹೆಚ್ಚಿನ ಮನ್ನಣೆ ಇದೆ ಎಂದರು. ವಿಶೇಷವಾಗಿ ಭಾರತೀಯ ತಂತ್ರಜ್ಞಾನ ಉದ್ಯಮ ಮತ್ತು ತಂತ್ರಜ್ಞಾನದ ವೃತ್ತಿಪರರ ಕೊಡುಗೆಯನ್ನು ಅವರು ಪ್ರಶಂಸಿಸಿದರು. ಭಾರತವನ್ನು ಪ್ರತಿಭೆಯ ಶಕ್ತಿ ಕೇಂದ್ರ ಎಂದು ಬಣ್ಣಿಸಿದ ಅವರು ಅದರ ಕೊಡುಗೆಯನ್ನು ನೋಡಲು ಕಾತುರದಿಂದಿರುವುದಾಗಿ ಹೇಳಿದರು. ಭಾರತೀಯರು ಸ್ವಾಭಾವಿಕ ಸುಧಾರಣಾಕಾರರು ಮತ್ತು ಭಾರತ ಪ್ರತಿಯೊಂದು ಸವಾಲುಗಳನ್ನು ಅದು ಸಾಮಾಜಿಕ ಅಥವಾ ಆರ್ಥಿಕದ್ದಾಗಿರಬಹುದು, ಎಲ್ಲವನ್ನು ಸಮರ್ಥವಾಗಿ ಎದುರಿಸಿ ಹೊರಬಂದಿರುವ ಇತಿಹಾಸವಿದೆ ಎಂದರು. ಭಾರತ ಪುನಶ್ಚೇತನದ ಬಗ್ಗೆ ಮಾತನಾಡಿದರೆ ಅದು ಎಚ್ಚರಿಕೆಯ ಪುನಶ್ಚೇತನ, ಅನುಕಂಪ ಹೊಂದಿದ ಪುನಶ್ವೇತನ, ಸುಸ್ಥಿರವಾದ ಪರಿಸರ ಮತ್ತು ಆರ್ಥಿಕ ಎರಡೂ ದೃಷ್ಟಿಯಲ್ಲೂ ಪರಿಗಣಿಸಬಹುದಾದ ಪುನಶ್ಚೇತನವಾಗಲಿದೆ ಎಂದರು.

ವಾರಣಾಸಿ ಮೂಲದ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಪ್ರಧಾನಮಂತ್ರಿ ಸಂವಾದ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪ್ರಸಕ್ತ ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿರುವ ವಾರಾಣಸಿಯ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಸಂವಾದ ನಡೆಸಿದರು. ಕೊರೊನಾ ಸಾಂಕ್ರಾಮಿಕ ಎದುರಿಸುತ್ತಾ ಭರವಸೆ ಮತ್ತು ಉತ್ಸಾಹದಿಂದ ವಾರಾಣಸಿಯ ಜನರು ಇದ್ದು, ಅಲ್ಲಿನ ಜನರಿಗೆ ಆಶೀರ್ವಾದವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಸ್ವೀಕರಿಸುತ್ತಿದ್ದೆ, ಆಸ್ಪತ್ರೆಗಳ ಸ್ಥಿತಿಗತಿ, ಕ್ವಾರಂಟೈನ್ ವ್ಯವಸ್ಥೆ ಮತ್ತು ವಲಸೆ ಕಾರ್ಮಿಕರ ಕಲ್ಯಾಣ ಕುರಿತಂತೆಯೂ ಮಾಹಿತಿಗಳನ್ನು ಪಡೆಯುತ್ತಿದ್ದುದಾಗಿ ಅವರು ಹೇಳಿದರು. ಪವಿತ್ರ ನಗರಿಯಲ್ಲಿ ಸಾಕಷ್ಟು ಧಾರ್ಮಿಕ ಕಾರ್ಯಗಳು ಸ್ಥಗಿತಗೊಂಡಿರುವುದರ ನಡುವೆಯೂ ವಾರಾಣಸಿಯ ಜನರು ಕೊರೊನಾ ವಿರುದ್ಧದ ಹೋರಾಟದಲ್ಲಿ ತಾವೂ ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ ಮತ್ತು ಬಡವರು ಹಾಗೂ ಅಗತ್ಯವಿರುವವರಿಗೆ ನಿರಂತರ ಆಹಾರ ಮತ್ತು ವೈದ್ಯಕೀಯ ಪೂರೈಕೆ ಬೆಂಬಲವನ್ನು ನೀಡಿದ್ದಾರೆ. ಸ್ಥಳೀಯ ಆಡಳಿತಗಳು ಮತ್ತು ಸರ್ಕಾರಗಳ ಜೊತೆ ನಿರಂತರವಾಗಿ ಶ್ರಮಿಸುತ್ತಿರುವ ಸರ್ಕಾರೇತರ ಸಂಸ್ಥೆಗಳ ಕಾರ್ಯವನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು. ಆಹಾರ ಸಹಾಯವಾಣಿ, ಸಂಪರ್ಕಜಾಲ ವಿಸ್ತರಣೆ ಮತ್ತು ಅತ್ಯಲ್ಪ ಅವಧಿಯಲ್ಲಿಯೇ ಸಮುದಾಯ ಅಡುಗೆ ಕೋಣೆಗಳನ್ನು ಆರಂಭಿಸಿದ್ದು, ಸಹಾಯವಾಣಿಗಳ ಸ್ಥಾಪನೆ, ದತ್ತಾಂಶ ವಿಜ್ಞಾನದ ಸಹಾಯ ಪಡೆದಿರುವುದು, ವಾರಾಣಸಿ ಸ್ಮಾರ್ಟ್ ಸಿಟಿ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರದ ಸಂಪೂರ್ಣ ಬಳಕೆ, ಪ್ರತಿಯೊಂದು ಹಂತದಲ್ಲೂ ಬಡವರಿಗೆ ಸಂಪೂರ್ಣ ಸಹಾಯ ನೀಡಿದ್ದು, ಮತ್ತಿತರ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಕೇಂದ್ರ ಸಂಪುಟದಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಕ್ಕೆ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಷಾ ಶ್ಲಾಘನೆ; ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಕೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೊರೊನಾ ವಿಪತ್ತಿನ ಸಂದರ್ಭದಲ್ಲಿ ಯಾರೊಬ್ಬರು ಹಸಿವಿನಿಂದ ಬಳಲಬಾರದು ಎಂದು ಪಣತೊಟ್ಟು, ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಷಾ ಹೇಳಿದ್ದಾರೆ. ಅವರು ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರಿಗೆ ಅಭಿನಂದನೆ ಮತ್ತು ಧನ್ಯವಾದಗಳನ್ನು ಹೇಳಿದ್ದಾರೆ. ಕೋಟ್ಯಾಂತರ ಜನರಿಗೆ ನವೆಂಬರ್ ತಿಂಗಳವರೆಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ) ವಿಸ್ತರಣೆ ಮಾಡಿರುವ ಸಂಪುಟದ ನಿರ್ಧಾರವನ್ನು ಅವರು ಶ್ಲಾಘಿಸಿದರು. ಉಜ್ವಲ ಯೋಜನೆ ಅಡಿ ಬಡ ಮಹಿಳೆಯರಿಗೆ ಉಚಿತವಾಗಿ ಮೂರು ಸಿಲಿಂಡರ್ ವಿತರಿಸುವ ಯೋಜನೆಯನ್ನು ಸೆಪ್ಟೆಂಬರ್ ವರೆಗೆ ವಿಸ್ತರಿಸಿರುವುದರಿಂದ 7 ಕೋಟಿ 40 ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದು ಅಮಿತ್ ಷಾ ಹೇಳಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಮೂರು ರಾಷ್ಟ್ರಗಳ ಪ್ರತಿನಿಧಿಗಳಿಂದ ಪರಿಚಯ ಪತ್ರಗಳ ಸಲ್ಲಿಕೆ       

ಭಾರತದ ರಾಷ್ಟ್ರಪತಿಗಳಾದ ಶ್ರೀ ರಾಮನಾಥ್ ಕೋವಿಂದ್ ಅವರು, ನ್ಯೂಜಿಲ್ಯಾಂಡ್, ಯುನೈಟೆಡ್ ಕಿಂಗ್ ಡಂಮ್ ಮತ್ತು ಉಜ್ಬೇಕಿಸ್ತಾನದ ರಾಯಭಾರ ಕಚೇರಿಗಳ ಮುಖ್ಯಸ್ಥರಿಂದ ಇಂದು ಪರಿಚಯ ಪತ್ರಗಳನ್ನು ಸ್ವೀಕರಿಸಿದರು. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಎರಡನೇ ಪರಿಚಯ ಪತ್ರಗಳ ಸ್ವೀಕಾರ ಸಮಾರಂಭ ಇದಾಗಿದೆ. ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್, ಪ್ರತಿನಿಧಿಗಳ ನೇಮಕಕ್ಕಾಗಿ ಅವರನ್ನು ಅಭಿನಂದಿಸಿದರು. ಭಾರತ ಮೂರು ರಾಷ್ಟ್ರಗಳೊಂದಿಗೆ ಅತ್ಯಂತ ಆಳವಾದ ಸಂಬಂಧವನ್ನು ಹೊಂದಿದೆ. ಅವುಗಳೊಂದಿಗೆ ಜಾಗತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದರು. ಕೋವಿಡ್-19 ಸಾಂಕ್ರಾಮಿಕ ಎದುರಿಸಲು ಜಾಗತಿಕ ಸಹಕಾರ ವೃದ್ಧಿಗೆ ಇದು ಸಕಾಲ ಎಂದು ರಾಷ್ಟ್ರಪತಿ ಹೇಳಿದರು. ನಿಟ್ಟಿನಲ್ಲಿ ಸಾಂಕ್ರಾಮಿಕ ಸೋಲಿಸಲು ನಡೆಯುತ್ತಿರುವ ಅಂತಾರಾಷ್ಟ್ರೀಯ ಪ್ರಯತ್ನಗಳಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಸಮುದ್ರ ಸೇತು ಕಾರ್ಯಾಚರಣೆಮುಕ್ತಾಯಗೊಳಿಸಿದ ಭಾರತೀಯ ನೌಕಾಪಡೆ

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಪ್ರಜೆಗಳನ್ನು ಸ್ವದೇಶಕ್ಕೆ ಕರೆತರುವ ಪ್ರಯತ್ನಗಳ ಭಾಗವಾಗಿ 2020 ಮೇ 05 ರಂದು ಸಮುದ್ರಸೇತು ಕಾರ್ಯಾಚರಣೆ ಆರಂಭಿಸಲಾಯಿತು. ಅದರಡಿ ಸಮುದ್ರ ಮಾರ್ಗದ ಮೂಲಕ 3,992 ಭಾರತೀಯ ಪ್ರಜೆಗಳನ್ನು ಯಶಸ್ವಿಯಾಗಿ ಸ್ವದೇಶಕ್ಕೆ ಕರೆತರಲಾಗಿದೆ. ಭಾರತೀಯ ನೌಕಾಪಡೆಯ ಹಡಗು ಜಲಶ್ವ ಮತ್ತು ಐರಾವತ, ಶಾರ್ದೂಲ್ ಮತ್ತು ಮಗರ್ ಹಡಗುಗಳು ಕಾರ್ಯಾಚರಣೆಯಲ್ಲಿ ಸುಮಾರು 55 ದಿನಗಳ ಕಾಲ ಪಾಲ್ಗೊಂಡು 23,000 ಕಿಲೋಮೀಟರ್ ಗೂ ಅಧಿಕ ಸಮುದ್ರ ಮಾರ್ಗವನ್ನು ಕ್ರಮಿಸಿವೆ. ಭಾರತೀಯ ನೌಕಾಪಡೆಯ ಐಎಲ್-38 ಮತ್ತು ದ್ರೋಣಿಯರ್ ವಿಮಾನವನ್ನು ಬಳಸಿ, ವೈದ್ಯರು ಮತ್ತು ಕೋವಿಡ್-19 ಸಂಬಂಧಿಸಿದ ಸಾಮಗ್ರಿಗಳನ್ನು ದೇಶಾದ್ಯಂತ ಕೊಂಡೊಯ್ಯಲು ಉಪಯೋಗಿಸಲಾಯಿತು.

ಪಿ ಐ ಬಿ ಪ್ರಾದೇಶಿಕ ಕಚೇರಿಗಳ ಮಾಹಿತಿ

  • ಕೇರಳ: ತಿರುವನಂತರಪುರದಲ್ಲಿ ಜಾರಿಗೊಳಿಸಿರುವ ಮೂರನೇ ಲಾಕ್ ಡೌನ್ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಆಡಳಿತ ಪೂನ್ ತುರಾ ಮೀನುಗಾರಿಕೆ ಗ್ರಾಮದಲ್ಲಿ, ಸೋಂಕು ಹರಡದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಮೂರು ವಾರ್ಡ್ ಗಳನ್ನು ಗಂಭೀರ ನಿರ್ಬಂಧಿತ ವಲಯಗಳನ್ನಾಗಿ ಘೋಷಿಸಲಾಗಿದೆ ಮತ್ತು ನಾಲ್ಕು ವಾರ್ಡ್ ಗಳನ್ನು ಬಫರ್ ವಲಯಗಳೆಂದು ಗುರುತಿಸಲಾಗಿದೆ, ಮೀನುಗಾರಿಕೆ ನಿಷೇಧಿಸಲಾಗಿದೆ ಮತ್ತು ಸೋಂಕು ಪತ್ತೆ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ. ಪಥನಂಥಿಟ್ಟದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಮತ್ತೆ ನಾಲ್ಕು ಮಂದಿಗೆ ಸೋಂಕು ದೃಢಪಟ್ಟಿದೆ, ಆದರೆ ಅವುಗಳ ಮೂಲ ಪತ್ತೆಯಾಗಿಲ್ಲ. ಸಂಪರ್ಕ ಪತ್ತೆಯನ್ನು ಚುರುಕುಗೊಳಿಸಲಾಗಿದೆ. ಸರ್ಕಾರ ಚಿಕಿತ್ಸಾ ಸೌಕರ್ಯ ಮತ್ತು ರಿವರ್ಸ್ ಕ್ವಾರಂಟೈನ್ ಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದೆ. ರಾಜ್ಯದಲ್ಲಿ ನಿನ್ನೆ ಒಂದೇ ದಿನ ಅತ್ಯಧಿಕ 301 ಕೋವಿಡ್-19 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಪೈಕಿ 90 ಪ್ರಕರಣಗಳು ಸ್ಥಳೀಯವಾಗಿ ಹರಡಿರುವಂತಹವು.
  • ತಮಿಳುನಾಡು: ಮುಖ್ಯಮಂತ್ರಿ ಪಳನಿಸ್ವಾಮಿ ಆಗಸ್ಟ್ 1 ರಿಂದ ಕೇರಳದಲ್ಲಿ ತಮಿಳುನಾಡಿನ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಅವಕಾಶ ನೀಡುವಂತೆ ಕೇರಳ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ. ತಮಿಳುನಾಡಿನ ಮೀನುಗಾರರಿಗೆ ಸೇರಿದ ಸುಮಾರು 350 ಯಾಂತ್ರಿಕ ಮೀನುಗಾರಿಕಾ ದೋಣಿ ಮತ್ತು 750 ಸಾಂಪ್ರದಾಯಿಕ ದೋಣಿಗಳು, ಪ್ರಸ್ತುತ ಕೇರಳದ ಮೀನುಗಾರಿಕೆ ಬಂದರು ಮತ್ತು ಮೀನು ಕೇಂದ್ರಗಳಲ್ಲಿವೆ. ಮದ್ರಾಸ್ ಹೈಕೋರ್ಟ್, ತಮಿಳುನಾಡಿನಲ್ಲಿ ಲಾಕ್ ಡೌನ್ ಸಮಯದಲ್ಲಿ ಹೆಚ್ಚಿನ ವಿದ್ಯುತ್ ದರ ವಿಧಿಸಿರುವ ಕುರಿತಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಿದೆ. ರಾಜ್ಯದಲ್ಲಿ ಬುಧವಾರ ಒಂದೇ ದಿನ 3,756 ಹೊಸ ಪ್ರಕರಣಗಳು ಪತ್ತೆಯಾಗಿವೆ, ಪೈಕಿ ಚೆನ್ನೈನಲ್ಲಿ 1,261 ಪ್ರಕರಣಗಳು ಸೇರಿವೆ. ತಿಂಗಳ ಆರಂಭದಲ್ಲಿ ಚೆನ್ನೈನಲ್ಲಿ 2,000ಕ್ಕೂ ಅಧಿಕ ಪ್ರಕರಣಗಳು ಕಂಡುಬಂದಿದ್ದವು. ಅದಕ್ಕೆ ಹೋಲಿಸಿದರೆ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಒಟ್ಟು ಪ್ರಕರಣಗಳು 1,22,350, ಸಕ್ರಿಯ ಪ್ರಕರಣಗಳು: 46,480, ಸಾವು: 1700, ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು 21,766
  • ಕರ್ನಾಟಕ: ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ಇಂದು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಹೈ-ಫ್ಲೋ ಆಕ್ಸಿಜನ್ ವ್ಯವಸ್ಥೆ ಅಳವಡಿಕೆ ಮತ್ತು ಹಾಸಿಗೆಗಳ ಸಂಖ್ಯೆ ಹೆಚ್ಚಳಕ್ಕೆ 207 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಅಲ್ಲದೆ ಪಿಎಚ್ ಸಿಗಳಿಗೆ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣಗಳ ಖರೀದಿಗೆ 81 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಿದೆ. ಖಾಸಗಿ ಆಸ್ಪತ್ರೆಗಳು, ಹೊಟೇಲ್ ಗಳ ಸಹಾಯದಿಂದ ಸೋಂಕಿಲ್ಲದ ಮತ್ತು ಸ್ವಲ್ಪ ಪ್ರಮಾಣದ ಸೋಂಕು ಇರುವವರಿಗೆ ಚಿಕಿತ್ಸೆ ನೀಡಲು ಕೋವಿಡ್ ಆರೈಕೆ ಕೇಂದ್ರಗಳನ್ನು ನಡೆಸಲಿದೆ. ಆಸ್ಪತ್ರೆಗಳ ಹಾಸಿಗೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳು ಸೇರಿ, ಖಾಸಗಿ ಆಸ್ಪತ್ರೆಗಳು ಮುಂದಿನ ದಿನಗಳಲ್ಲಿ ಒಟ್ಟು 6000 ದಿಂದ 7000 ಹಾಸಿಗೆಗಳನ್ನು ಸೇರ್ಪಡೆ ಮಾಡಲಿವೆ. ನಿನ್ನೆ 2062 ಹೊಸ ಪ್ರಕರಣಗಳು, 778 ಮಂದಿ ಗುಣಮುಖರಾಗಿದ್ದಾರೆ ಮತ್ತು 54 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಪಾಸಿಟಿವ್ ಪ್ರಕರಣಗಳು: 28,877 ಸಕ್ರಿಯ ಪ್ರಕರಣಗಳು: 16,527 ಸಾವು: 470.
  • ಆಂಧ್ರಪ್ರದೇಶ: ರಾಜ್ಯ ಸರ್ಕಾರ ಕೋವಿಡ್-19 ಚಿಕಿತ್ಸೆಗೆ ಆಸ್ಪತ್ರೆಗಳಿಗೆ ನಾನಾ ಪ್ಯಾಕೇಜ್ ಗಳ ದರಗಳನ್ನು ನಿಗದಿಪಡಿಸಿದೆ. ಆರೋಗ್ಯಶ್ರೀ ಯೋಜನೆ ಅಡಿ ಕೋವಿಡ್-19 ಚಿಕಿತ್ಸೆ ಸೇರಿ ಆದೇಶವನ್ನು ಹೊರಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಕ್ಯಾಟಗರಿ - ಕೋವಿಡ್-19 ಚಿಕಿತ್ಸೆಗೆ ವಿಶೇಷವಾಗಿ ನಿಗದಿ, ಬಿ ಕ್ಯಾಟಗರಿ - ಕೋವಿಡ್-19 ಮತ್ತು ಇತರೆ ಕಾಯಿಲೆಗಳ ಚಿಕಿತ್ಸೆಗೆ, ಸಿ ಕ್ಯಾಟಗರಿ - ಕೋವಿಡ್-19 ಹೊರತುಪಡಿಸಿ ಇತರೆ ಪ್ರಕರಣಗಳು. ಕರ್ನೂಲ್ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕರ್ನೂಲ್ ಸರ್ಕಾರಿ ವೈದ್ಯಕೀಯ ಕೇಂದ್ರವನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತಿಸಿದೆ. ರಾಜ್ಯ ಸರ್ಕಾರ ಒಂದರಿಂದ 10ನೇ ತರಗತಿ ವರಗೆ ನೇರ ಪ್ರಸಾರದ ತರಗತಿಗಳನ್ನು ನಡೆಸಲು ಹೊಸ ಪಠ್ಯಕ್ರಮ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ದೂರದರ್ಶನದಲ್ಲಿ ಜುಲೈ 13 ರಿಂದ 31 ವರೆಗೆ ಪ್ರಸಾರವಾಗಲಿದೆ. ಕಳೆದ 24 ಗಂಟೆಗಳಲ್ಲಿ 1555 ಹೊಸ ಪ್ರಕರಣಗಳು, 904 ಗುಣಮುಖ ಮತ್ತು 13 ಸಾವು ಸಂಭವಿಸಿವೆ. ಒಟ್ಟು ಪ್ರಕರಣಗಳು 23,814, ಸಕ್ರಿಯ ಪ್ರಕರಣ 11,383, ಗುಣಮುಖರಾದವರು12,154, ಸಾವು 277.
  • ತೆಲಂಗಾಣ: ಪೌರಾಡಳಿತ ಸಚಿವ ಕೆ.ಟಿ. ರಾಮರಾವ್ ದೇಶದ ಜನತೆಗೆ ಸುದೀರ್ಘ ಲಾಕ್ ಡೌನ್ ಸೂಕ್ತವಲ್ಲ ಎಂದು ಹೇಳಿದ್ದಾರೆ. ಹೈದ್ರಾಬಾದ್, ಮೇದ್ ಚಲ್ ಮತ್ತು ರಂಗಾರೆಡ್ಡಿ ಜಿಲ್ಲೆಗಳಲ್ಲಿ ಗುರುವಾರದಿಂದ ಆಂಟಿಜನ್ ಕಿಟ್ ಬಳಸಿ ಕೋವಿಡ್-19 ಪರೀಕ್ಷೆ ಮಾಡಲಾಗುತ್ತಿದೆ. ಸರ್ಕಾರ ಇನ್ನೂ ಹೆಚ್ಚಿನ ಸಂಖ್ಯೆಯ ಆರ್ ಟಿ ಪಿಸಿಆರ್ ಪರೀಕ್ಷೆಗಳನ್ನು ನಡೆಸಲು ಹಿಂದೇಟು ಹಾಕುತ್ತಿದೆ. ನಿನ್ನೆಯವರೆಗೆ ದಾಖಲಾದ ಒಟ್ಟು ಪ್ರಕರಣಗಳು 29,536, ಸಕ್ರಿಯ ಪ್ರಕರಣಗಳು: 11,933, ಸಾವು: 324, ಗುಣಮುಖರಾದವರು :17,279.
  • ಚಂಡಿಗಢ: ಚಂಡಿಗಢ ಆಡಳಿತ ವೈದ್ಯಕೀಯ ತ್ಯಾಜ್ಯ ವಿಶೇಷವಾಗಿ ಪಿಪಿಇ ಕಿಟ್ ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೆ ತಪಾಸಣೆಗೆ ತೆರಳುವ ತಂಡಗಳು ಆಕ್ಸಿಮಿಟರ್ ಅನ್ನು ಕೊಂಡೊಯ್ಯಬೇಕು, ಮೂಲಕ ಆಕ್ಸಿಜನ್ ಪ್ರಮಾಣವನ್ನು ತಕ್ಷಣ ಪರಿಶೀಲಿಸಬಹುದಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರಿಂದ ಸೋಂಕಿನ ತೀವ್ರತೆಯನ್ನು ಪತ್ತೆಹಚ್ಚಲು ಸಹಾಯಕವಾಗಲಿದೆ.
  • ಪಂಜಾಬ್: ಕೋವಿಡ್-19 ಅಪಾಯದ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರ -ಸಂಜೀವಿನಿ ಒಪಿಡಿ ಸೇವೆಗಳ ಅವಧಿಯನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ(ಸೋಮವಾರದಿಂದ ಶನಿವಾರ) ಸ್ತ್ರೀರೋಗ ಒಪಿಡಿ ಮತ್ತು ಜನರಲ್ ಒಪಿಡಿ ಸೇವೆಗಳಿಗೆ ಅವಧಿ ವಿಸ್ತರಿಸಲಾಗಿದೆ. ಅಲ್ಲದೆ ಪರಿಣಿತ ವೈದ್ಯರ ಮೂಲಕ ಆನ್ ಲೈನ್ ಟೆಲಿ ಕನ್ಸಲ್ಟೇಶನ್ ಸೌಕರ್ಯಗಳನ್ನು ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದ್ದು, ಅದರಿಂದ ರೋಗಿಗಳಿಗೆ ವರ್ಚುಯಲ್ ರೂಪದಲ್ಲಿ ಸಕಾಲದಲ್ಲಿ ಲಭ್ಯವಾಗುವುದಲ್ಲದೆ, ರಾಜ್ಯದಾದ್ಯಂತ ಜನರ ರಕ್ಷಣೆಗೆ ಸಹಾಯಕವಾಗಲಿದೆ.
  • ಹರಿಯಾಣ: ಹರಿಯಾಣ ಮುಖ್ಯ ಕಾರ್ಯದರ್ಶಿ, ರಾಜ್ಯದಲ್ಲಿ ಮಾರಕ ಕೊರೊನಾ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ಎದುರಿಸಲು ಕ್ರಿಯಾಶೀಲ ಕಾರ್ಯತಂತ್ರಗಳನ್ನು ಕೈಗೊಳ್ಳಲು ಆದೇಶಿಸಿದ್ದಾರೆ. ಅವರು ಜಿಲ್ಲಾಧಿಕಾರಿಗಳಿಗೆ ಕೋವಿಡ್-19 ನಿರ್ವಹಣಾ ಸಿದ್ಧತೆಗಳನ್ನು ತೀವ್ರಗೊಳಿಸುವಂತೆ ತೀವ್ರ ನಿಗಾವಹಿಸುವಂತೆ, ನಿರ್ಬಂಧಿತ ವಲಯಗಳಲ್ಲಿ ಬಿಗಿಗೊಳಿಸುವಂತೆ ಕ್ಷಿಪ್ರವಾಗಿ ಸಂಪರ್ಕಗಳನ್ನು ಪತ್ತೆಹಚ್ಚುವಂತೆ, ಮಾಹಿತಿ ಶಿಕ್ಷಣ ಮತ್ತು ಸಂವಹನ(ಐಇಸಿ) ಸಕ್ರಿಯ ಚಟುವಟಿಕೆಗಳ ಮೂಲಕ ಕ್ಲಿನಿಕಲ್ ನಿರ್ವಹಣೆಗೆ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ. ನಿರ್ಬಂಧಿತ ವಲಯಗಳಿಗೆ ಪ್ರವೇಶ ಮತ್ತು ನಿರ್ಗಮನ ಕುರಿತಂತೆ ನಿಗಾವಹಿಸುವಂತೆ ಅವರು ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
  • ಹಿಮಾಚಲಪ್ರದೇಶ: ಕೋವಿಡ್-19 ಸಾಂಕ್ರಾಮಿಕ ನಮಗೆ ಭಿನ್ನವಾಗಿ ಯೋಚಿಸಲು ಮತ್ತು ಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸಲು ಒತ್ತಡ ಹೇರುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅವರು ಅಂಗನವಾಡಿ ಕಾರ್ಯಕರ್ತರು ತಳಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರು ಇಂತಹ ಕಷ್ಟಕರ ಸಂದರ್ಭದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎಂದರು. ಅಂಗನವಾಡಿ ಕಾರ್ಯಕರ್ತರು ಸೋಂಕು ಸಮುದಾಯ ಮಟ್ಟಕ್ಕೆ ಹರಡದಂತೆ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು. ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಗಳ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದಲ್ಲದೆ, ಗೃಹ ಕ್ವಾರಂಟೈನ್ ನಿಯಮಾವಳಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನೆರವು ನೀಡುತ್ತಿದ್ದಾರೆ ಎಂದರು.
  • ಮಹಾರಾಷ್ಟ್ರ: ರಾಜ್ಯದಲ್ಲಿ 6,603 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 2,23,724ಕ್ಕೆ ಏರಿಕೆಯಾಗಿದೆ. 1,23,192 ರೋಗಿಗಳು ಗುಣಮುಖರಾಗಿದ್ದಾರೆ. ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 91,065. ಮುಂಬೈನಲ್ಲಿ ಮಂಗಳವಾರ 1,381 ಹೊಸ ಪ್ರಕರಣ ವರದಿಯಾಗಿವೆ.
  • ಗುಜರಾತ್: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 783 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಕೋವಿಡ್-19 ಸೋಂಕಿತರ ಸಂಖ್ಯೆ  38,419ಕ್ಕೆ ಏರಿಕೆಯಾಗಿದೆ. ಅಲ್ಲದೆ 16 ಮಂದಿ ಪ್ರಾಣ ಕಳೆದುಕೊಂಡಿದ್ದು, ಇದರಿಂದಾಗಿ ಕೋವಿಡ್-19ನಿಂದಾಗಿ ಮೃತಪಟ್ಟವರ ಸಂಖ್ಯೆ 1,995ಕ್ಕೆ ಹೆಚ್ಚಳವಾಗಿದೆ. ಗರಿಷ್ಠ ಸಂಖ್ಯೆಯ ಪ್ರಕರಣಗಳು 215 ರೋಗಿಗಳು ಸೂರತ್ ನವರಾಗಿದ್ದಾರೆ. ಅಹಮದಾಬಾದ್ ನಲ್ಲಿ 149 ಹೊಸ ಪ್ರಕರಣ ದೃಢಪಟ್ಟಿವೆ. ರಾಜ್ಯದಲ್ಲಿ ಈವರೆಗೆ 4 ಲಕ್ಷದ 33 ಸಾವಿರಕ್ಕೂ ಅಧಿಕ ಸೋಂಕು ಪರೀಕ್ಷೆಗಳನ್ನು ನಡೆಸಲಾಗಿದೆ.
  • ರಾಜಸ್ಥಾನ: ರಾಜ್ಯದಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ 22,000 ದಾಟಿದೆ. ಇಂದು ಬೆಳಗ್ಗೆ 149 ಹೊಸ ಪ್ರಕರಣಗಳು ಪತ್ತೆಯಾಗಿವೆ ಮತ್ತು ಬುಧವಾರ 659 ಪ್ರಕರಣಗಳು ಕಂಡುಬಂದಿದ್ದವು, ಇದರಿಂದಾಗಿ ರಾಜ್ಯದಲ್ಲಿ ಒಟ್ಟು 22,212 ಕೋವಿಡ್-19 ಪ್ರಕರಣಗಳಾಗಿವೆ. ಬಹುತೇಕ ಹೊಸ ಪ್ರಕರಣಗಳು ನಾಗೌರ್ ನಲ್ಲಿ 29, ಜೈಪುರದಲ್ಲಿ 25 ಮತ್ತು ಆಳ್ವರದಲ್ಲಿ 21 ಹೊಸ ಪ್ರಕರಣಗಳಾಗಿವೆ.
  • ಮಧ್ಯಪ್ರದೇಶ: ಬುಧವಾರ 409 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 16,036ಕ್ಕೆ ಏರಿಕೆಯಾಗಿದೆ. ಅಲ್ಲಿ 3420 ಸಕ್ರಿಯ ಪ್ರಕರಣಗಳಿದ್ದು, 11987 ರೋಗಿಗಳು ಗುಣಮುಖರಾಗಿದ್ದಾರೆ. ಈವರೆಗೆ ಕೋವಿಡ್-19 ಸೋಂಕಿಗೆ 629 ಮಂದಿ ಬಲಿಯಾಗಿದ್ದಾರೆ. ಮೊರೆನಾ ಜಿಲ್ಲೆಯಲ್ಲಿ ದಾಖಲೆಯ 115 ಪ್ರಕರಣ ಪತ್ತೆಯಾಗಿದ್ದು, ನಂತರ ಭೂಪಾಲ್ ನಲ್ಲಿ 70, ಗ್ವಾಲಿಯರ್ ನಲ್ಲಿ 68 ಮತ್ತು ಇಂದೋರ್ ನಲ್ಲಿ 44 ಪ್ರಕರಣ ದೃಢಪಟ್ಟಿವೆ.
  • ಛತ್ತೀಸ್ ಗಢ: ರಾಜ್ಯದಲ್ಲಿ ಹೊಸದಾಗಿ 100 ಪಾಸಿಟಿವ್ ಪ್ರಕರಣ ಪತ್ತೆಯಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ  3,526ಕ್ಕೆ ಹೆಚ್ಚಳವಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 677.
  • ಗೋವಾ: ಬುಧವಾರ 136 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 2,039ಕ್ಕೆ ಏರಿಕೆಯಾಗಿದೆ ಮತ್ತು ಅವುಗಳಲ್ಲಿ 824 ಸಕ್ರಿಯ ಪ್ರಕರಣಗಳಿವೆ.

ವಾಸ್ತವ ಪರಿಶೀಲನೆ

A stamp with the word Fake on a press note which claims that CBSE has released result dates for Board exams and also lists 3 websites to view the results

***



(Release ID: 1638280) Visitor Counter : 217