PIB Headquarters
ಕೋವಿಡ್-19: ಪಿ ಐ ಬಿ ದೈನಿಕ ವರದಿ
Posted On:
04 MAY 2020 6:44PM by PIB Bengaluru
ಕೋವಿಡ್-19: ಪಿ ಐ ಬಿ ದೈನಿಕ ವರದಿ


(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಕೋವಿಡ್-19 ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್
ಇದುವರೆಗೆ, 11,706 ಮಂದಿ ಗುಣಮುಖರಾಗಿದ್ದಾರೆ. ಇದರಿಂದಾಗಿ ನಮ್ಮ ಚೇತರಿಕೆಯ ಪ್ರಮಾಣ ಶೇ. 27.52 ಕ್ಕೇರಿದೆ. ಈಗ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ 42,533. ನಿನ್ನೆಯಿಂದ ದೇಶದಲ್ಲಿ 2,553 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಎಲ್ಲಾ ಗುಣಮುಖವಾದ ಪ್ರಕರಣಗಳ ಫಲಿತಾಂಶದ ಅನುಪಾತವು (ಚೇತರಿಸಿಕೊಂಡ ವರ್ಸಸ್ ಸಾವು) ಆಸ್ಪತ್ರೆಗಳಲ್ಲಿನ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಸ್ಥಿತಿಯನ್ನು ಸೂಚಿಸುತ್ತದೆ, ಇದು ಏಪ್ರಿಲ್ 17, 2020 ಕ್ಕೆ (ಫಲಿತಾಂಶ ಅನುಪಾತವು 80:20 ಆಗಿತ್ತು) ಹೋಲಿಸಿದರೆ ದೇಶದಲ್ಲಿ ಸುಧಾರಣೆಯಾಗಿದೆ ಎಂದು ತೋರಿಸುತ್ತದೆ ಈಗ ಅದು 90:10 ಆಗಿದೆ.
ಹೆಚ್ಚಿನ ವಿವರಗಳಿಗಾಗಿ: https://pib.gov.in/PressReleseDetail.aspx?PRID=1621000
ಕೋವಿಡ್-19 ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳಿಗೆ ಕೇಂದ್ರ ತಂಡಗಳ ನಿಯೋಜನೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ಇಪ್ಪತ್ತು ಕೇಂದ್ರ ಸಾರ್ವಜನಿಕ ಆರೋಗ್ಯ ತಂಡಗಳನ್ನು ರಚಿಸಿದ್ದ, ದೇಶದಲ್ಲಿ ಗರಿಷ್ಠ ಕೋವಿಡ್-19 ಪ್ರಕರಣಗಳು ವರದಿಯಾಗಿರುವ 20 ಜಿಲ್ಲೆಗಳಿಗೆ ಈ ತಂಡಗಳನ್ನು ಕಳುಹಿಸಲಾಗುತ್ತಿದೆ.
ವಿವರಗಳಿಗಾಗಿ: https://pib.gov.in/PressReleseDetail.aspx?PRID=1620840
ವಿದೇಶದಲ್ಲಿ ಸಿಲುಕಿರುವ ಭಾರತೀಯ ನಾಗರಿಕರು ದೇಶಕ್ಕೆ ಮರಳಲು ಭಾರತ ಸರ್ಕಾರದಿಂದ ನೆರವು
ವಿದೇಶದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳು ಹಂತಹಂತವಾಗಿ ಮರಳಲು ಭಾರತ ಸರ್ಕಾರ ಅನುಕೂಲ ಕಲ್ಪಿಸಲಿದೆ. ವಿಮಾನ ಮತ್ತು ನೌಕಾ ಹಡಗುಗಳ ಮೂಲಕ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಎಸ್ಒಪಿ ಸಿದ್ಧಪಡಿಸಲಾಗಿದೆ. ಭಾರತೀಯ ರಾಯಭಾರ ಕಚೇರಿಗಳು ಮತ್ತು ಹೈ ಕಮಿಷನ್ಗಳು ತೊಂದರೆಗೀಡಾದ ಭಾರತೀಯ ನಾಗರಿಕರ ಪಟ್ಟಿಯನ್ನು ಸಿದ್ಧಪಡಿಸುತ್ತಿವೆ. ಈ ಸೌಲಭ್ಯವನ್ನು ಪಾವತಿ ಆಧಾರದ ಮೇಲೆ ಲಭ್ಯವಾಗುವಂತೆ ಮಾಡಲಾಗುವುದು. ನಿಗದಿತ ವಾಣಿಜ್ಯ ವಿಮಾನಗಳನ್ನು ವಿಮಾನ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗುವುದು. ಪ್ರಯಾಣವು ಮೇ 7 ರಿಂದ ಹಂತ ಹಂತವಾಗಿ ಪ್ರಾರಂಭವಾಗಲಿದೆ. ವಿಮಾನ ಪ್ರಯಾಣಕ್ಕೂ ಮೊದಲು ಪ್ರಯಾಣಿಕರನ್ನು ವೈದ್ಯಕೀಯವಾಗಿ ಪರೀಕ್ಷಿಸಲಾಗುವುದು. ಲಕ್ಷಣರಹಿತ ಪ್ರಯಾಣಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ.
ವಿವರಗಳಿಗಾಗಿ: https://pib.gov.in/PressReleseDetail.aspx?PRID=1620994
ರಕ್ತದಾನವು ಜೀವಗಳನ್ನು ಉಳಿಸುತ್ತದೆ, ರಕ್ತದಾನದ ಬಗ್ಗೆ ಜಾಗೃತಿ ಮೂಡಿಸೋಣ ಮತ್ತು ಅಗತ್ಯವಿರುವವರಿಗೆ ಸುರಕ್ಷಿತ ಮತ್ತು ಗುಣಮಟ್ಟದ ರಕ್ತವು ಸಮಯಕ್ಕೆ ಸರಿಯಾಗಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳೋಣ: ಡಾ.ಹರ್ಷವರ್ಧನ್
ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಕೇಂದ್ರ ಸಚಿವರು, “ಕೋವಿಡ್-19 ಸಂಕಷ್ಟದ ಸಮಯದಲ್ಲಿ ಅಗತ್ಯವಿರುವ ರೋಗಿಗಳಿಗೆ ರಕ್ತದ ನಿರ್ಣಾಯಕ ಪೂರೈಕೆಯನ್ನು ನಿರ್ವಹಿಸಲು ನಾವು ಸಮರ್ಥರಾಗಿದ್ದೇವೆ ಎಂದರು. ಸ್ವಯಂಪ್ರೇರಿತ ರಕ್ತದಾನವನ್ನು ಸಜ್ಜುಗೊಳಿಸಲು ರೆಡ್ ಕ್ರಾಸ್ ಅಧಿಕಾರಿಗಳ ಸಭೆಯನ್ನು ಕರೆಯಲಾಗಿತ್ತು. ರೆಡ್ ಕ್ರಾಸ್ ಸೊಸೈಟಿಯ ಕಾರ್ಮಿಕರು ಮತ್ತು ಅವರ ವಾಹನಗಳಿಗೆ ಸ್ವಯಂಪ್ರೇರಿತ ರಕ್ತದಾನವನ್ನು ಉತ್ತೇಜಿಸುವಲ್ಲಿ ತೊಡಗಿರುವ 30,000 ಪಾಸ್ ಗಳನ್ನು ವ್ಯವಸ್ಥೆ ಮಾಡುವ ಮೂಲಕ ಅವರಿಗೆ ಸಹಾಯ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ವಿವರಗಳಿಗಾಗಿ: https://pib.gov.in/PressReleseDetail.aspx?PRID=1620883
ಮಧ್ಯಪ್ರದೇಶದಲ್ಲಿ ಕೋವಿಡ್-19 ನಿರ್ವಹಣೆಗೆ ಕೈಗೊಂಡ ಸಿದ್ಧತೆ ಮತ್ತು ನಿಗ್ರಹ ಕ್ರಮಗಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪರಿಶೀಲಿಸಿದ ಡಾ. ಹರ್ಷವರ್ಧನ್
ಕೋವಿಡ್-19 ರಿಂದಾಗಿ ಹೆಚ್ಚುತಿರುವ ಸಾವಿನ ಪ್ರಮಾಣದ ಬಗ್ಗೆ ಆತಂಕ ವ್ಯಕ್ತಪಡಿಸಿದ ಡಾ. ಹರ್ಷವರ್ಧನ್, "ಕೆಲವು ಜಿಲ್ಲೆಗಳಲ್ಲಿ ಸಾವಿನ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿರುವುದು ನೋವಿನ ಸಂಗತಿ" ಎಂದು ಹೇಳಿದ್ದಾರೆ. SARI / Influenza ದಂತಹ ಕಾಯಿಲೆ ಪ್ರಕರಣಗಳ ಹುಡುಕಾಟ, ಕಣ್ಗಾವಲು ಮತ್ತು ಪರೀಕ್ಷೆಯನ್ನು ನಡೆಸುವ ಮೂಲಕ ರಾಜ್ಯವು ಬಾಧಿತವಲ್ಲದ ಜಿಲ್ಲೆಗಳತ್ತ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು, ಇದರಿಂದ ಇತರ ಪ್ರದೇಶಗಳಲ್ಲಿ ಪ್ರಕರಣಗಳು ಮತ್ತಷ್ಟು ಹರಡುವುದನ್ನು ತಪ್ಪಿಸಬಹುದು. ಕೋವಿಡ್-19 ನಿರ್ವಹಣೆಗೆ ಒತ್ತು ನೀಡುವುದರಿಂದ ಕೋವಿಡ್ ಅಲ್ಲದ ಸೇವೆಗಳಿಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಮದು ಸಚಿವರು ತಿಳಿಸಿದರು.
ವಿವರಗಳಿಗಾಗಿ: https://pib.gov.in/PressReleseDetail.aspx?PRID=1620978
ಕೊರೊನಾ ಯೋಧರಿಗೆ ಭಾರತೀಯ ನೌಕಾಪಡೆಯಿಂದ ಭೂಮಿ, ವಾಯು ಮತ್ತು ಸಾಗರಗಳಲ್ಲಿ ಗೌರವ ಸಲ್ಲಿಕೆ
ಮೇ 03 ರ ಭಾನುವಾರದಂದು ಕೊರೊನಾ ಯೋಧರಿಗೆ ಕೃತಜ್ಞತೆ ಮತ್ತು ಅಭಿನಂದನೆ ಸಲ್ಲಿಸಲು ಭಾರತೀಯ ನೌಕಾಪಡೆಯು ಭಾರತೀಯ ಸಶಸ್ತ್ರ ಪಡೆಗಳ ಪ್ರತಿನಿಧಿಯಾಗಿ ಇಡೀ ರಾಷ್ಟ್ರದೊಂದಿಗೆ ಸೇರಿಕೊಂಡಿತು. ನಮ್ಮ ಕೊರೊನಾ ಯೋಧರಿಗೆ - ವೈದ್ಯಕೀಯ ವೃತ್ತಿಪರರು, ಆರೋಗ್ಯ ಕಾರ್ಯಕರ್ತರು, ಪೊಲೀಸರು, ಸರ್ಕಾರಿ ಸಿಬ್ಬಂದಿ ಮತ್ತು ಮಾಧ್ಯಮಗಳು ದೃಢನಿಶ್ಚಯ ಮತ್ತು ಬದ್ಧತೆಯಿಂದ ಕೋವಿಡ್- 19 ರ ವಿರುದ್ಧ ಹಲವಾರು ಚಟುವಟಿಕೆಗಳ ಮೂಲಕ ಸತತ ಪ್ರಯತ್ನ ಮಾಡಿದ್ದಕ್ಕಾಗಿ 03 ಮೇ 2020 ರಂದು ನೆಲ, ಗಾಳಿ ಮತ್ತು ನೀರಿನ ಮೇಲೆ ಅವರಿಗೆ ಇಡೀ ರಾಷ್ಟ್ರದ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲಾಯಿತು.
ವಿವರಗಳಿಗಾಗಿ: https://pib.gov.in/PressReleseDetail.aspx?PRID=1620788
ಕೊರೊನಾ ಯೋಧರಿಗೆ ಗೌರವ ಸಲ್ಲಿಸಿದ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ ರಕ್ಷಣಾ ಸಚಿವರು
ಕೊರೊನಾ ವೈರಾಣು ಹರಡುವುದನ್ನು ತಡೆಯಲು ಸತತವಾಗಿ ಹೋರಾಡುತ್ತಿರುವ ಕೊರೊನಾ ಯೋಧರಿಗೆ ಅಭಿನಂದನೆ ಸಲ್ಲಿಸಲು ದೇಶಾದ್ಯಂತ ವಿವಿಧ ನೆಲ, ನೀರು ಮತ್ತು ಗಾಳಿಯಲ್ಲಿ ನೂರಾರು ಚಟುವಟಿಕೆಗಳನ್ನು ಕೈಗೊಂಡ ಸಶಸ್ತ್ರ ಪಡೆಗಳ ಕ್ರಮವನ್ನು ಶ್ರೀ ರಾಜನಾಥ್ ಸಿಂಗ್ ಶ್ಲಾಘಿಸಿದ್ದಾರೆ. ಸಶಸ್ತ್ರ ಪಡೆಗಳು ಭಾರತದ ಕೊರೊನಾ ಯೋಧರಿಗೆ ಭಾನುವಾರ ವಿಶಿಷ್ಟ ಮಿಲಿಟರಿ ರೀತಿಯಲ್ಲಿ ಗೌರವ ಸಲ್ಲಿಸಿದವು. ಶ್ರೀನಗರದಿಂದ ತಿರುವನಂತಪುರಂ ಮತ್ತು ದಿಬ್ರುಗಢ ದಿಂದ ಕಚ್ಚ್ ವರೆಗೆ ಸೇನೆಯು ಪೊಲೀಸ್ ಸ್ಮಾರಕಗಳಿಗೆ ಮಾಲಾರ್ಪಣೆ ಮಾಡುವುದು, ಆರೋಗ್ಯ ವೃತ್ತಿಪರರು ಮತ್ತು ತುರ್ತು ಸರಬರಾಜು ಕಾರ್ಯಕರ್ತರನ್ನು ಗೌರವಿಸುವುದು ಮತ್ತು ಸನ್ಮಾನಿಸುವುದು ಮುಂತಾದ ವಿವಿಧ ಚಟುವಟಿಕೆಗಳನ್ನು ನಡೆಸಿತು. ರಾಷ್ಟ್ರದಾದ್ಯಂತ ಎಲ್ಲಾ ರಾಜ್ಯಗಳ ನೂರಾರು ಪಟ್ಟಣಗಳ ಆಸ್ಪತ್ರೆಗಳಿಗೆ ಭೇಟಿ ನೀಡಿ ಸೇನಾ ಬ್ಯಾಂಡ್ ತಂಡಗಳು ಕೊರೊನಾ ವಿರುದ್ಧದ ರಾಷ್ಟ್ರದ ಮುಂಚೂಣಿ ಯೋಧರಿಗೆ ಗೌರವ ಸಲ್ಲಿಕೆಯಾಗಿ ದೇಶಭಕ್ತಿ ಹಾಡುಗಳನ್ನು ನುಡಿಸಿದವು.
ವಿವರಗಳಿಗಾಗಿ: https://pib.gov.in/PressReleseDetail.aspx?PRID=1620861
“ಖಾದಿ” ಬ್ರಾಂಡ್ ಹೆಸರು ಬಳಸಿ ನಕಲಿ ಪಿಪಿಇ ಕಿಟ್ಗಳನ್ನು ಮಾರಾಟ ಮಾಡುತ್ತಿರುವ ಸಂಸ್ಥೆಗಳು; <