ಗೃಹ ವ್ಯವಹಾರಗಳ ಸಚಿವಾಲಯ
ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಐಎಸ್ಐ ಬೆಂಬಲಿತ ಭಯೋತ್ಪಾದಕ ಗುಂಪು ಶಹಜಾದ್ ಭಟ್ಟಿ ಜಾಲವನ್ನು ನಾಶಪಡಿಸಿದ ನರೇಂದ್ರ ಮೋದಿ ಸರ್ಕಾರ ಮತ್ತು 200ಕ್ಕೂ ಅಧಿಕ ಕಾರ್ಯಕರ್ತರನ್ನು ಬಂಧಿಸುವ ಮೂಲಕ ಅದರ ವಿಧ್ವಂಸಕ ದಾಳಿಯ ಸಂಚು ವಿಫಲ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ 'ಶೂನ್ಯ ಸಹಿಷ್ಣುತೆ' ನೀತಿಯ ಭಾಗವಾಗಿ 14 ರಾಜ್ಯಗಳಲ್ಲಿ 253 ಜನರನ್ನು ಬಂಧನ
ಶಹಜಾದ್ ಭಟ್ಟಿ ಜಾಲದ ವಿರುದ್ಧ 80ಕ್ಕೂ ಅಧಿಕ ಎಫ್ಐಆರ್, 200ಕ್ಕೂ ಅಧಿಕ ಮಂದಿ ಬಂಧನ ದಾಖಲು
प्रविष्टि तिथि:
17 AUG 2026 3:00PM by PIB Bengaluru
ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಭದ್ರತಾ ಸಂಸ್ಥೆಗಳು ಐಎಸ್ಐ ಬೆಂಬಲಿತ ಶಹಜಾದ್ ಭಟ್ಟಿ ಜಾಲ (ಎಸ್ಬಿಎನ್) ವಿರುದ್ಧ ಹಲವು ರಾಜ್ಯಗಳಲ್ಲಿ ಪ್ರಮುಖ ಕಾರ್ಯಾಚರಣೆ ನಡೆಸಿ ಅದರ ಭಯೋತ್ಪಾದಕ ಗುಂಪನ್ನು ಭೇದಿಸಿವೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, 14 ರಾಜ್ಯಗಳಲ್ಲಿ 253 ಜನರನ್ನು ಬಂಧಿಸಲಾಗಿದೆ. ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ 'ಶೂನ್ಯ ಸಹಿಷ್ಣುತೆ' ನೀತಿಯ ಭಾಗವಾಗಿ ಎಸ್ಬಿಎನ್ ವಿರುದ್ಧ 80ಕ್ಕೂ ಅಧಿಕ ಎಫ್ಐಆರ್ಗಳು ಮತ್ತು 200ಕ್ಕೂ ಅಧಿಕ ಮಂದಿಯ ಬಂಧನಗಳನ್ನು ದಾಖಲಿಸಲಾಗಿದೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಎಕ್ಸ್ ವೇದಿಕೆಯ ಪೋಸ್ಟ್ ನಲ್ಲಿ "ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ನರೇಂದ್ರ ಮೋದಿ ಸರ್ಕಾರ ಐಎಸ್ಐ ಬೆಂಬಲಿತ ಭಯೋತ್ಪಾದಕ ಗುಂಪು ಶಹಜಾದ್ ಭಟ್ಟಿ ಜಾಲವನ್ನು ನಾಶಪಡಿಸಿದೆ ಮತ್ತು 200 ಕ್ಕೂ ಅಧಿಕ ಕಾರ್ಯಕರ್ತರನ್ನು ಬಂಧಿಸುವ ಮೂಲಕ ವಿಧ್ವಂಸಕ ದಾಳಿಯ ಸಂಚನ್ನು ವಿಫಲಗೊಳಿಸಿವೆ. ಭಾರತೀಯ ಭದ್ರತಾ ಪಡೆಗಳು 14 ರಾಜ್ಯಗಳ ವಿವಿಧ ಸ್ಥಳಗಳಲ್ಲಿ ಸಂಘಟಿತ ಕಾರ್ಯಾಚರಣೆಗಳನ್ನು ಆರಂಭಿಸುವ ಮೂಲಕ ಜಾಲವನ್ನು ಛಿದ್ರಗೊಳಿಸಿದವು, ಇದು ಭಾರತದ ಭಯೋತ್ಪಾದನೆಯ ಶೂನ್ಯ ಸಹಿಷ್ಣುತೆಯ ಅದ್ಭುತ ಉದಾಹರಣೆಯಾಗಿದೆ. ಐಇಡಿಗಳು, ಪಾಕಿಸ್ತಾನ ಆರ್ಡ್ನೆನ್ಸ್ ಫ್ಯಾಕ್ಟರಿ ಗುರುತುಗಳನ್ನು ಹೊಂದಿರುವ ಗ್ರೆನೇಡ್ಗಳು, ಪಿಸ್ತೂಲ್ಗಳು, ಜೀವಂತ ಕಾರ್ಟ್ರಿಡ್ಜ್ಗಳು ಮತ್ತು ಬೇಹುಗಾರಿಕೆಗೆ ಬಳಸುವ ಸಿಸಿಟಿವಿ ಕ್ಯಾಮೆರಾಗಳು ಸೇರಿ ಅಪಾರ ಪ್ರಮಾಣದ ವಸ್ತುಗಳನ್ನು ಐಎಸ್ಐ ಬೆಂಬಲಿತ ಗುಂಪಿನಿಂದ ವಶಪಡಿಸಿಕೊಳ್ಳಲಾಗಿದೆ. ಈ ಜಾಲವು ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವು’’ ಎಂದು ಹೇಳಿದ್ದಾರೆ.
ಪಾಕಿಸ್ತಾನ ಮೂಲದ, ಐಎಸ್ಐ ಬೆಂಬಲಿತ ಭಯೋತ್ಪಾದಕ ಸಿಂಡಿಕೇಟ್ ಆಗಿರುವ ಶಹಜಾದ್ ಭಟ್ಟಿ ನೆಟ್ವರ್ಕ್ (ಎಸ್ಬಿಎನ್), ಭಾರತದಾದ್ಯಂತ ಗ್ರೆನೇಡ್, ಐಇಡಿ ಮತ್ತು ಪೆಟ್ರೋಲ್ ಬಾಂಬ್ ದಾಳಿಗಳು ಮತ್ತು ಗುರಿ ಹತ್ಯೆಗಳಿಗೆ ಸಂಬಂಧಿಸಿದೆ. ಪೊಲೀಸ್, ರಕ್ಷಣಾ ಮತ್ತು ಧಾರ್ಮಿಕ ಸ್ಥಳಗಳನ್ನು ಪರಿಶೀಲಿಸಲು ಮತ್ತು ಬೇಹುಗಾರಿಕೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಲು ಎಸ್ಬಿಎನ್ ಸ್ಥಳೀಯ ಮಾರ್ಗಗಳಿಗೆ ಹಣ ನೀಡುತ್ತಿದೆ
ಸ್ವಾತಂತ್ರ್ಯ ದಿನಾಚರಣೆಯಂದು ಯೋಜಿಸಲಾದ ಎಸ್ ಬಿಎನ್ ಸಂಬಂಧಿತ ಅಡಚಣೆಗಳನ್ನು ಎದುರಿಸಲು, ಆಗಸ್ಟ್ 12 ರಂದು ರಾಜ್ಯ ಪೊಲೀಸ್ ಪಡೆಗಳೊಂದಿಗೆ ನೈಜ-ಸಮಯದ ಗುಪ್ತಚರ ಹಂಚಿಕೆ ವ್ಯವಸ್ಥೆಯನ್ನು ಬಳಸಿಕೊಂಡು ಸಂಘಟಿತ ಬಹು-ರಾಜ್ಯ ಕಾರ್ಯಾಚರಣೆಯನ್ನು ನಡೆಸಲಾಯಿತು. ಇದು 14 ರಾಜ್ಯಗಳಲ್ಲಿ 253 ಬಂಧನಗಳಿಗೆ ಕಾರಣವಾಗಿದೆ- ಉತ್ತರ ಪ್ರದೇಶ (62), ಹರಿಯಾಣ (52), ದೆಹಲಿ (51), ಪಂಜಾಬ್ (44), ರಾಜಸ್ಥಾನ (15), ಮಹಾರಾಷ್ಟ್ರ (8), ಉತ್ತರಾಖಂಡ (5), ಕರ್ನಾಟಕ, ಗುಜರಾತ್ ಮತ್ತು ಬಿಹಾರ (ತಲಾ 3), ಮತ್ತು ತೆಲಂಗಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಕೇರಳ (ತಲಾ 2) - ದೆಹಲಿ ಮತ್ತು ಕರ್ನಾಟಕದಲ್ಲಿ ಹೊಸ ಎಫ್ ಐಆರ್ ಗಳು ದಾಖಲಾಗಿವೆ.
ಒಟ್ಟಾರೆ, ಯುಎಪಿಎ, ಬಿಎನ್ ಎಸ್, ಶಸ್ತ್ರಾಸ್ತ್ರ ಕಾಯ್ದೆ, ಎನ್ ಡಿಪಿಎಸ್ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಎಸ್ ಬಿಎನ್ ವಿರುದ್ಧ 80 ಕ್ಕೂ ಅಧಿಕ ಎಫ್ ಐಅರ್ ಗಳು ಮತ್ತು 200ಕ್ಕೂ ಅಧಿಕ ಮಂದಿಯ ಬಂಧನ ದಾಖಲಿಸಲಾಗಿದೆ. ವಶಪಡಿಸಿಕೊಂಡವುಗಳಲ್ಲಿ ಐಇಡಿಗಳು, ಪಾಕಿಸ್ತಾನ ಶಸ್ತ್ರಾಸ್ತ್ರ ಕಾರ್ಖಾನೆ ಗುರುತುಗಳನ್ನು ಹೊಂದಿರುವ ಗ್ರೆನೇಡ್ಗಳು, ಪಿಸ್ತೂಲ್ಗಳು, ಲೈವ್ ಕಾರ್ಟ್ರಿಜ್ಗಳು ಮತ್ತು ಬೇಹುಗಾರಿಕೆ ಸಿಸಿಟಿವಿಗಳು ಸೇರಿವೆ - ಇದು ಜಾಲದ ನೇರ ಗಡಿಯಾಚೆಗಿನ ಸಂಪರ್ಕಗಳನ್ನು ದೃಢಪಡಿಸುತ್ತದೆ.
ಗಡಿಯಾಚೆಗಿನ ಭಯೋತ್ಪಾದನೆಗೆ ಭಾರತದ ಶೂನ್ಯ ಸಹಿಷ್ಣುತೆ ಮತ್ತು ದೇಶಾದ್ಯಂತ ಎಸ್ಬಿಎನ್ನ ಜಾಲಗಳನ್ನು ನಾಶಮಾಡಲು ನಿರಂತರ ಸಂಘಟಿತ ಕ್ರಮದ ಬಗ್ಗೆ ಭಾರತ ಸರ್ಕಾರವನ್ನುಬದ್ಧತೆಯನ್ನು ಭದ್ರತಾ ಸಂಸ್ಥೆಗಳು ಪುನರುಚ್ಚರಿಸುತ್ತವೆ.
*****
(रिलीज़ आईडी: 2300459)
आगंतुक पटल : 24
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Bengali-TR
,
Assamese
,
Punjabi
,
Gujarati
,
Tamil
,
Telugu
,
Malayalam