ಉಪರಾಷ್ಟ್ರಪತಿಗಳ ಕಾರ್ಯಾಲಯ
ತಿರುವರೂರಿನ ತಮಿಳುನಾಡು ಕೇಂದ್ರೀಯ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಭಾಗಿ
ಜ್ಞಾನ ಮಾತ್ರ ಸಾಕಾಗುವುದಿಲ್ಲ; ಭವಿಷ್ಯಕ್ಕೆ ಜೀವನವೀಡಿ ಕಲಿಕೆ, ನಾವೀನ್ಯತೆ ಮತ್ತು ಹೊಂದಿಕೊಳ್ಳುವಿಕೆ ಅತ್ಯಗತ್ಯ: ಉಪರಾಷ್ಟ್ರಪತಿ
ಶಿಕ್ಷಣವು ಪರೀಕ್ಷೆಗಳು ಮತ್ತು ಅಂಕಗಳನ್ನು ಮೀರಿ, ಸ್ವತಂತ್ರ ಚಿಂತನೆ, ಸೃಜನಶೀಲತೆ ಮತ್ತು ಸಾಮಾಜಿಕ ಜವಾಬ್ದಾರಿ ಬೆಳೆಸಬೇಕು: ಉಪರಾಷ್ಟ್ರಪತಿ
ತಪ್ಪು ಮಾಡಿದವರನ್ನು ಶಿಕ್ಷಿಸಲು ಮತ್ತು ಪ್ರಾಮಾಣಿಕ ವಿದ್ಯಾರ್ಥಿಗಳ ಹಿತಾಸಕ್ತಿ ರಕ್ಷಿಸಲು ಸಾರ್ವಜನಿಕ ಪರೀಕ್ಷಾ ಸುಧಾರಣೆಗಳು ಅಗತ್ಯ: ಉಪರಾಷ್ಟ್ರಪತಿ
ತನಗಾಗಿ ಬದುಕುವುದು ಪಾಪವಲ್ಲ, ತನಗಾಗಿ ಮಾತ್ರ ಬದುಕುವುದು ಪಾಪ: ಉಪರಾಷ್ಟ್ರಪತಿ
“ಜ್ಞಾನದ ಗ್ರಾಹಕರಾಗುವುದಕ್ಕಿಂತ ಸೃಷ್ಟಿಕರ್ತರಾಗಬೇಕು; ಅನುಕರಿಸುವವರಿಗಿಂತ ನಾವೀನ್ಯಕಾರರಾಗಬೇಕು; ಅನುಯಾಯಿಗಳ ಬದಲಿಗೆ ನಾಯಕರಾಗಬೇಕು”: ಉಪರಾಷ್ಟ್ರಪತಿ
ಮಾದಕ ದ್ರವ್ಯ ದುರುಪಯೋಗದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭದ್ರತಾ ಸಂಸ್ಥೆಗಳಿಗೆ ಉಪರಾಷ್ಟ್ರಪತಿ ಆಗ್ರಹ
प्रविष्टि तिथि:
17 AUG 2026 1:56PM by PIB Bengaluru
ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಇಂದು ತಿರುವರೂರಿನಲ್ಲಿ ನಡೆದ ತಮಿಳುನಾಡು ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಟಿಎನ್) 11ನೇ ಘಟಿಕೋತ್ಸವದಲ್ಲಿ ಭಾಗವಹಿಸಿ, ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮಹತ್ವದ ಮೈಲಿಗಲ್ಲು ತಲುಪಿದ್ದಕ್ಕಾಗಿ ಅಭಿನಂದಿಸಿದರು.
ಪದವೀಧರರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸಿ. ಪಿ. ರಾಧಾಕೃಷ್ಣನ್, ಘಟಿಕೋತ್ಸವ ಸಂಭ್ರಮವು ಕೇವಲ ಪದವಿ ಪ್ರದಾನವನ್ನು ಮಾತ್ರವಲ್ಲ, ಶಿಕ್ಷಣದ ಪರಿವರ್ತಕ ಶಕ್ತಿ, ಜ್ಞಾನದ ಅನ್ವೇಷಣೆ ಮತ್ತು ವಿದ್ಯಾರ್ಥಿಗಳನ್ನು ಈ ಮಹತ್ವದ ಕ್ಷಣಕ್ಕೆ ಕರೆತಂದ ಬದ್ಧತೆ, ಪರಿಶ್ರಮ ಮತ್ತು ಸ್ಥಿತಿಸ್ಥಾಪಕತ್ವವನ್ನು ಆಚರಣೆಯಾಗಿದೆ ಎಂದು ಹೇಳಿದರು.
ಪದವಿ ಪಡೆದ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರನ್ನು ಅವರು ಅಭಿನಂದಿಸಿದರು, ಅವರ ತ್ಯಾಗಗಳನ್ನು ಗುರುತಿಸಿದರು ಮತ್ತು ಅವರು ತಮ್ಮ ಮಕ್ಕಳು ಮತ್ತು ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕಾಗಿ ತಮ್ಮ ಇಂದಿನ ಅನೇಕ ಆರಾಮದಾಯಕ ಕ್ಷಣಗಳನ್ನು ತ್ಯಜಿಸಿದ್ದಾರೆ ಎಂದು ಉಲ್ಲೇಖಿಸಿದರು.
ತಿರುವರೂರಿನ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ಸಿ. ಪಿ. ರಾಧಾಕೃಷ್ಣನ್, ಭವ್ಯವಾದ ತ್ಯಾಗರಾಜ ದೇವಾಲಯದ ನೆಲೆಯಾಗಿರುವ ಪವಿತ್ರ ಪಟ್ಟಣವು ಶತಮಾನಗಳಿಂದ ಆಧ್ಯಾತ್ಮಿಕತೆ, ಪಾಂಡಿತ್ಯ ಮತ್ತು ಕಲಾತ್ಮಕ ಶ್ರೇಷ್ಠತೆಯ ಕೇಂದ್ರವಾಗಿದೆ ಎಂದು ಹೇಳಿದರು.
ಪವಿತ್ರ ಭೂಮಿ ಸಂತರು, ವಿದ್ವಾಂಸರು ಮತ್ತು ಕರ್ನಾಟಕ ಸಂಗೀತದ ಪೌರಾಣಿಕ ತ್ರಿಮೂರ್ತಿಗಳನ್ನು ಪೋಷಿಸಿದೆ ಎಂದು ಅವರು ಉಲ್ಲೇಖಿಸಿದರು. ಸಂಸ್ಕೃತಿ, ಕಲಿಕೆ ಮತ್ತು ಮೌಲ್ಯಗಳು ಒಟ್ಟಿಗೆ ಪ್ರವರ್ಧಮಾನಕ್ಕೆ ಬಂದಾಗ ನಿಜವಾದ ಶ್ರೇಷ್ಠತೆ ಹೊರಹೊಮ್ಮುತ್ತದೆ ಎಂದು ಅವರು ಹೇಳಿದರು.
ಕಳೆದ ಹನ್ನೆರಡು ವರ್ಷಗಳಲ್ಲಿ ಉನ್ನತ ಶಿಕ್ಷಣದ ಅಗಾಧ ವಿಸ್ತರಣೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಉಪರಾಷ್ಟ್ರಪತಿಗಳು, ದೇಶಾದ್ಯಂತದ ಘಟಿಕೋತ್ಸವ ಸಮಾರಂಭಗಳಲ್ಲಿ, ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಪದವಿ ಮತ್ತು ಪದಕಗಳನ್ನು ಪಡೆಯುವುದನ್ನ ಹೆಚ್ಚಾಗಿ ನೋಡುತ್ತಿದ್ದೇನೆ ಎಂದು ಹೇಳಿದರು ಮತ್ತು ಈ ಪ್ರವೃತ್ತಿಯು ಸ್ವಾಗತಾರ್ಹ ಬೆಳವಣಿಗೆ ಎಂದು ಬಣ್ಣಿಸಿದರು.
ಇಂದಿನ ಶಿಕ್ಷಣವನ್ನು ಕೇವಲ ಪರೀಕ್ಷೆಗಳು ಅಥವಾ ಅಂಕಗಳಿಂದ ಅಳೆಯಲಾಗುವುದಿಲ್ಲ ಎಂದು ಉಪರಾಷ್ಟ್ರಪತಿ ಹೇಳಿದರು.
"ಸ್ವತಂತ್ರವಾಗಿ ಆಲೋಚಿಸುವ, ಪರಿಣಾಮಕಾರಿಯಾಗಿ ಸಂವಹನ ನಡೆಸುವ, ಸಹಯೋಗದಿಂದ ಕೆಲಸ ಮಾಡುವ ಮತ್ತು ಜೀವನದುದ್ದಕ್ಕೂ ಕಲಿಕೆಯನ್ನು ಮುಂದುವರಿಸುವ ಸಾಮರ್ಥ್ಯದಿಂದ ಅದನ್ನು ಅಳೆಯಬೇಕು" ಎಂದು ಅವರು ಹೇಳಿದರು.
ಬಹುಶಿಸ್ತೀಯ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಮತ್ತು ಮೌಲ್ಯಾಧಾರಿತ ಕಲಿಕೆಗೆ ಒತ್ತು ನೀಡುವ ಮೂಲಕ ಈ ದೂರದೃಷ್ಟಿಯನ್ನು ಅಳವಡಿಸಿಕೊಂಡಿದ್ದಕ್ಕಾಗಿ ತಮಿಳುನಾಡು ಕೇಂದ್ರೀಯ ವಿಶ್ವವಿದ್ಯಾಲಯವನ್ನು ಅವರು ಶ್ಲಾಘಿಸಿದರು.
ಇತ್ತೀಚೆಗೆ ಸಂಸತ್ತು ಅಂಗೀಕರಿಸಿದ ಸಾರ್ವಜನಿಕ ಪರೀಕ್ಷೆಗಳು (ಅಕ್ರಮ ವಿಧಾನಗಳ ತಡೆ) ತಿದ್ದುಪಡಿ ಮಸೂದೆಯನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಗಳು, ಪರೀಕ್ಷೆಗಳಲ್ಲಿ ಅನ್ಯಾಯದ ವಿಧಾನಗಳನ್ನು ತಡೆಗಟ್ಟುವುದು ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ರಕ್ಷಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಜಾರ್ಖಂಡ್ ರಾಜ್ಯಪಾಲರಾಗಿ ತಮ್ಮ ಅಧಿಕಾರಾವಧಿಯನ್ನು ನೆನಪಿಸಿಕೊಂಡ ಶ್ರೀ ಸಿ.ಪಿ. ರಾಧಾಕೃಷ್ಣನ್, ತಮ್ಮ ಅಧಿಕಾರಾವಧಿಯಲ್ಲಿ ಜಾರ್ಖಂಡ್ ಸರ್ಕಾರವು ಇದೇ ರೀತಿಯ ಮಸೂದೆಯನ್ನು ಅಂಗೀಕರಿಸಿದೆ ಮತ್ತು ಆಗಿನ ರಾಜ್ಯಪಾಲರಾಗಿ ತಾನು ತಕ್ಷಣವೇ ಅದಕ್ಕೆ ಸಹಿ ಹಾಕಿ, ಅದು ಕಾನೂನಾಗಲು ಅನುವು ಮಾಡಿಕೊಟ್ಟಿದ್ದೆ ಎಂದು ಸ್ಮರಿಸಿದರು.
"ಒಳ್ಳೆಯ ಜನರ ಹಿತಾಸಕ್ತಿಗಳನ್ನು ರಕ್ಷಿಸಲು ಸಮಾಜದಲ್ಲಿನ ಕೆಟ್ಟ ವ್ಯಕ್ತಿಗಳನ್ನು ಶಿಕ್ಷಿಸಬೇಕು" ಎಂದು ಅವರು ಹೇಳಿದರು, ಸಾರ್ವಜನಿಕ ಪರೀಕ್ಷೆಗಳ ದಕ್ಷತೆ ಮತ್ತು ನ್ಯಾಯಸಮ್ಮತತೆಯನ್ನು ಕಾಪಾಡಲು ಬಲವಾದ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಿದರು.
“ಜ್ಞಾನದ ಗ್ರಾಹಕರಾಗುವ ಬದಲು ಸೃಷ್ಟಿಕರ್ತರಾಗಬೇಕು, ಅನುಕರಿಸುವವರಿಗಿಂತ ನಾವೀನ್ಯಕಾರರಾಗಬೇಕು ಮತ್ತು ಅನುಯಾಯಿಗಳಾಗುವ ಬದಲು ನಾಯಕರಾಗಬೇಕು" ಎಂದು ಉಪರಾಷ್ಟ್ರಪತಿಗಳು ಪದವೀಧರರಿಗೆ ಕರೆ ನೀಡಿದರು.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು 2047 ರ ವಿಕಸಿತ ಭಾರತದ ದೂರದೃಷ್ಟಿಯ ಸಾಕಾರದತ್ತ ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀ ಸಿ.ಪಿ. ರಾಧಾಕೃಷ್ಣನ್ ಹೇಳಿದರು. ಯುವಕರು "ರಾಷ್ಟ್ರ ಮೊದಲು - ರಾಷ್ಟ್ರ ಪ್ರಥಮ" ವನ್ನು ತಮ್ಮ ಕಾರ್ಯಗಳ ಹೃದಯದಲ್ಲಿಟ್ಟುಕೊಳ್ಳಬೇಕು ಮತ್ತು ರಾಷ್ಟ್ರೀಯ ಅಭಿವೃದ್ಧಿಗಾಗಿ ತಮ್ಮ ಜ್ಞಾನ, ಕೌಶಲ್ಯ ಮತ್ತು ನಾಯಕತ್ವವನ್ನು ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಮಾದಕ ದ್ರವ್ಯ ಮಾರಾಟಗಾರರು ಮತ್ತು ಮಾದಕ ದ್ರವ್ಯಗಳ ಪಿಡುಗನ್ನು ಹರಡುವಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉಪರಾಷ್ಟ್ರಪತಿಗಳು ಪೊಲೀಸ್ ಮತ್ತು ಭದ್ರತಾ ಸಂಸ್ಥೆಗಳನ್ನು ಒತ್ತಾಯಿಸಿದರು.
ಮಾದಕ ವಸ್ತುಗಳ ದುರುಪಯೋಗವು ವ್ಯಕ್ತಿಗಳ ಜೀವನವನ್ನು ನಾಶಪಡಿಸುವುದಲ್ಲದೆ, ಕುಟುಂಬಗಳು ಮತ್ತು ಸಮಾಜದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ಯುವಜನರನ್ನು ಈ ಪಿಡುಗಿನಿಂದ ರಕ್ಷಿಸುವುದು ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
"ಮಾದಕ ವಸ್ತುಗಳ ಸೇವನೆಯನ್ನು ನಿಲ್ಲಿಸಿ" ಎಂದು ವಿದ್ಯಾರ್ಥಿಗಳಿಗೆ ತಮ್ಮ ಮನವಿಯನ್ನು ಪುನರುಚ್ಚರಿಸಿದರು ಮತ್ತು ಮಾದಕ ವಸ್ತುಗಳ ದುರುಪಯೋಗದಿಂದ ದೂರವಿರಲು ತಮ್ಮ ಸ್ನೇಹಿತರನ್ನು ಒತ್ತಾಯಿಸಲು ಪ್ರೋತ್ಸಾಹಿಸಿದರು.
ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಉಪರಾಷ್ಟ್ರಪತಿಗಳು ಪ್ರತಿ ಪದವೀಧರರ ಯಶಸ್ಸು, ತೃಪ್ತಿ, ಉತ್ತಮ ಆರೋಗ್ಯದ ಮೂಲಕ ಸಮಾಜಕ್ಕೆ ಅರ್ಥಪೂರ್ಣ ಬದಲಾವಣೆಯನ್ನು ತರುವಂತೆ ಅವರು ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಘಟಿಕೋತ್ಸವದಲ್ಲಿ ಒಟ್ಟು 1,103 ಪದವೀಧರರು ತಮ್ಮ ಪದವಿಗಳನ್ನು ಪಡೆದರು, ಅದರಲ್ಲಿ ಶೈಕ್ಷಣಿಕ ಶ್ರೇಷ್ಠತೆಯ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡ 50 ಚಿನ್ನದ ಪದಕ ವಿಜೇತರು ಸೇರಿದ್ದಾರೆ. 1,103 ಪದವೀಧರರಲ್ಲಿ 616 ಮಹಿಳೆಯರು. 50 ಚಿನ್ನದ ಪದಕಗಳಲ್ಲಿ 37 ಮಹಿಳೆಯರು ಸಹ ಸೇರಿದ್ದಾರೆ.
ತಮಿಳುನಾಡು ರಾಜ್ಯಪಾಲ ಶ್ರೀ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಲೋಕಸಭಾ ಸದಸ್ಯ (ನಾಗಪಟ್ಟಣಂ) ತಿರು ವಿ. ಸೆಲ್ವರಾಜ್, ಕುಲಪತಿ ಪ್ರೊ. ಜಿ. ಪದ್ಮನಾಭನ್, ಉಪ ಕುಲಪತಿ ಹಿರಿಯ ಪ್ರೊ. ಸುಲೋಚನಾ ಶೇಖರ್, ಅಧ್ಯಾಪಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(रिलीज़ आईडी: 2300410)
आगंतुक पटल : 4