ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಂಜಾಬ್‌ ರಾಜ್ಯದಲ್ಲಿ ಆಧುನಿಕ ರೈಲ್ವೆ ಅಭಿವೃದ್ಧಿಯಿಂದ ಹೊಸ ಪ್ರಗತಿಯ ದಾರಿಗಳು ಹೇಗೆ ತೆರೆಯುತ್ತಿವೆ ಎಂಬ ಲೇಖನವನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 13 MAY 2026 2:23PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಂಜಾಬ್‌ನಲ್ಲಿ ಆಧುನಿಕ ರೈಲು ನಿಲ್ದಾಣಗಳು ಮತ್ತು ಸುಧಾರಿತ ರೈಲ್ವೆ ಜಾಲವು ಹೊಸ ಪ್ರಗತಿಯ ದಾರಿಗಳನ್ನು ಹೇಗೆ ತೆರೆಯುತ್ತಿದೆ ಎಂಬ ಕುರಿತು ಕೇಂದ್ರ ಸಚಿವರಾದ ರವನೀತ್ ಸಿಂಗ್ ಬಿಟ್ಟು ಅವರು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ. ಈ ಪರಿವರ್ತನೆಯಿಂದ ಜನರಿಗೆ ಅಪಾರ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. 

ಪ್ರಧಾನಮಂತ್ರಿ ಶ್ರೀ ಮೋದಿ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹೀಗೆ ಬರೆದಿದ್ದಾರೆ;

“ಪಂಜಾಬ್‌ನಲ್ಲಿ ಆಧುನಿಕ ರೈಲು ನಿಲ್ದಾಣಗಳು ಮತ್ತು ಸುಧಾರಿತ ರೈಲ್ವೆ ಜಾಲವು ಹೊಸ ಪ್ರಗತಿಯ ದಾರಿಗಳನ್ನು ತೆರೆಯುತ್ತಿವೆ. ಈ ಪರಿವರ್ತನೆ ಇಲ್ಲಿನ ಜನರಿಗೆ ಅಪಾರ ಅವಕಾಶಗಳನ್ನು ತಂದಿದೆ. ಕೇಂದ್ರ ಸಚಿವರಾದ @RavneetBittu ಅವರ ಈ ಲೇಖನ ಪಂಜಾಬ್ ಹೇಗೆ ಬದಲಾಗುತ್ತಿದೆ ಎಂಬುದನ್ನು ವಿವರಿಸುತ್ತದೆ.

ನೀವು ಖಂಡಿತವಾಗಿಯೂ ಇದನ್ನು ಓದಬೇಕು!”

 

*****


(ಪ್ರಕಟಣೆ ಐ.ಡಿ.: 2260614) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Assamese , Manipuri , Punjabi , Gujarati , Malayalam