iffi banner

ಖ್ಯಾತ ಛಾಯಾಗ್ರಾಹಕ ಶ್ರೀ ಕೆ. ವೈಕುಂಠ್ ಅವರ ಜನ್ಮ ಶತಮಾನೋತ್ಸವವನ್ನು ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡುವ ಮೂಲಕ ಐ ಎಫ್‌ ಎಫ್‌ ಐ ಆಚರಿಸಿತು


ಕೆ. ವೈಕುಂಠ್‌ ಅವರು ಕ್ಯಾಮೆರಾ ಮೂಲಕ ಕ್ಲಾಸಿಕಲ್ ಹಿಂದಿ ಸಿನಿಮಾದ ದೃಶ್ಯ ಭಾಷೆಯನ್ನು ರೂಪಿಸಿದವರು: ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್

ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್‌.ಎಫ್‌.ಐ) ಇಂದು ಗೋವಾ ಮೂಲದ ಖ್ಯಾತ ಛಾಯಾಗ್ರಾಹಕ ಶ್ರೀ ಕೆ. ವೈಕುಂಠ್ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಿತು ಮತ್ತು ಭಾರತೀಯ ಚಿತ್ರರಂಗಕ್ಕೆ ಅವರ ಅಸಾಧಾರಣ ಕೊಡುಗೆಯನ್ನು ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವ ಮೂಲಕ ಗೌರವಿಸಿತು.

ಚಲನಚಿತ್ರ ವಿಭಾಗ (ಫಿಲ್ಮ್‌ ಡಿವಿಷನ್)‌ ದ ಹೆಸರಾಂತ ಸಿನಿಮಾಗಳು ಸೇರಿದಂತೆ ಹಲವಾರು ಹೆಗ್ಗುರುತು ಚಲನಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳಲ್ಲಿನ ಅತ್ಯುತ್ತಮ ಛಾಯಾಗ್ರಹಣಕ್ಕೆ ಹೆಸರುವಾಸಿಯಾದ ಶ್ರೀ ವೈಕುಂಠ್ ಅವರನ್ನು ಭಾರತದ ಅತ್ಯುತ್ತಮ ದೃಶ್ಯ ಕಥೆಗಾರರಲ್ಲಿ ಒಬ್ಬರೆಂದು ಸ್ಮರಿಸಲಾಗುತ್ತದೆ, ಅವರ ಪರಂಪರೆಯು ತಲೆಮಾರುಗಳಾದ್ಯಂತ ಚಲನಚಿತ್ರ ನಿರ್ಮಾತೃಗಳಿಗೆ ಸ್ಫೂರ್ತಿ ನೀಡುತ್ತದೆ.

ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಸ್ಮರಣಾರ್ಥ ಅಂಚೆಚೀಟಿಯನ್ನು ಔಪಚಾರಿಕವಾಗಿ ಬಿಡುಗಡೆ ಮಾಡಿದರು, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರ ಶ್ರೀ ದೀಪಕ್ ನಾರಾಯಣ್, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಪ್ರಭಾತ್, ಮಹಾರಾಷ್ಟ್ರ ಮತ್ತು ಗೋವಾದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಶ್ರೀ ಅಮಿತಾಭ್ ಸಿಂಗ್ ಮತ್ತು ಶ್ರೀ ಕೆ. ವೈಕುಂಠ್ ಅವರ ಪುತ್ರ ಶ್ರೀ ಅಮಿತ್ ಕಣಕೋಲಿಯಂಕರ್ ಮತ್ತು ಅವರ ಕುಟುಂಬ ಸದಸ್ಯರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ. ಸಾವಂತ್, ಛಾಯಾಗ್ರಹಣ ಕ್ಷೇತ್ರಕ್ಕೆ ಶ್ರೀ ವೈಕುಂಠ್ ಅವರ ಜೀವಮಾನದ ಸಮರ್ಪಣೆಯನ್ನು ಶ್ಲಾಘಿಸಿದರು ಮತ್ತು ಅವರನ್ನು "‌ ಕ್ಯಾಮೆರಾದ ಮೂಲಕ ಕ್ಲಾಸಿಕಲ್ ಹಿಂದಿ ಸಿನೆಮಾದ ದೃಶ್ಯ ಭಾಷೆಯನ್ನು ರೂಪಿಸಿದ ವ್ಯಕ್ತಿ" ಎಂದು ಬಣ್ಣಿಸಿದರು.

ಗೋವಾದ ಮಡಗಾಂವ್‌ ಬೀದಿಗಳ ಶ್ರೀ ವೈಕುಂಠ್‌ ಅವರು ಭಾರತದ ಅತ್ಯಂತ ಗೌರವಾನ್ವಿತ ಛಾಯಾಗ್ರಾಹಕರಲ್ಲಿ ಒಬ್ಬರಾದರು. ಅವರು ಗುಲ್ಜಾರ್ ಮತ್ತು ರಮೇಶ್ ಸಿಪ್ಪಿ ಅವರಂತಹ ಪ್ರಸಿದ್ಧ ಚಲನಚಿತ್ರ ನಿರ್ಮಾಪಕರೊಂದಿಗೆ ನಿಕಟವಾಗಿ ಕೆಲಸ ಮಾಡಿದರು ಮತ್ತು ಸೀತಾ ಔರ್ ಗೀತಾ ಮತ್ತು ಆಂಧಿಯಂತಹ ಪ್ರತಿಷ್ಠಿತ ಚಲನಚಿತ್ರಗಳಿಗೆ ಕೊಡುಗೆ ನೀಡಿದರು ಎಂದು ಅವರು ಹೇಳಿದರು.

"ವೈಕುಂಠ್ ಬಾಬಾ ಒಬ್ಬ ಛಾಯಾಗ್ರಾಹಕರಿಗಿಂತ ಹೆಚ್ಚಿನವರಾಗಿದ್ದರು. ಅವರು ಭಾವನೆ, ಮನಸ್ಥಿತಿ ಮತ್ತು ದೃಷ್ಟಿಯ ಸೃಷ್ಟಿಕರ್ತರಾಗಿದ್ದರು" ಎಂದು ಡಾ. ಸಾವಂತ್ ಹೇಳಿದರು, ಅವರ ವಿಶಿಷ್ಟ ಶೈಲಿಯು ಅದ್ಭುತವಾದ ಸಿನಿಮೀಯ ದೃಶ್ಯ ಮತ್ತು ಅತ್ಯಂತ ಕೋಮಲ ಮಾನವ ಭಾವನೆಗಳನ್ನು ಸೆರೆಹಿಡಿದಿದೆ ಎಂದು ಹೇಳಿದರು.

ಭಾರತೀಯ ಚಿತ್ರರಂಗದ ಕೆಲವು ಅತ್ಯುತ್ತಮ ದೃಶ್ಯ ಕ್ಷಣಗಳನ್ನು ಸೃಷ್ಟಿಸಿದರೂ, ಶ್ರೀ ವೈಕುಂಠ್‌ ಅವರು ಸರಳ ಮತ್ತು ತೆರೆಮರೆಯ ನಾಯಕರಾಗಿ ಉಳಿದರು ಮತ್ತು ಅವರ ಪರಂಪರೆಯು ಪ್ರಪಂಚದಾದ್ಯಂತದ ಸಿನಿಪ್ರಿಯರಿಗೆ ನಿರಂತರವಾಗಿ ಸ್ಫೂರ್ತಿ ನೀಡುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

"ಭಾರತದ ಹೆಸರಾಂತ ದೃಶ್ಯ ಮಾಂತ್ರಿಕ ಮತ್ತು ಈ ಮಣ್ಣಿನ ಹೆಮ್ಮೆಯ ಪುತ್ರ ಶ್ರೀ ಕೆ. ವೈಕುಂಠ್ ಅವರನ್ನು ಗೌರವಿಸುವುದು ನನ್ನ ಸೌಭಾಗ್ಯ ಎಂದು ಹೆಚ್ಚುವರಿ ಕಾರ್ಯದರ್ಶಿ (ಐ & ಬಿ) ಶ್ರೀ ಪ್ರಭಾತ್ ಹೇಳಿದರು. ಸ್ಮರಣಾರ್ಥ ಅಂಚೆ ಚೀಟಿಯು ಅಂಚೆ ಸಾಧನಕ್ಕಿಂತ ಹೆಚ್ಚಿನದಾಗಿದೆ - ಇದು ದೇಶಾದ್ಯಂತ ಮನೆಗಳು ಮತ್ತು ಸಂಸ್ಥೆಗಳಿಗೆ ಜೀವನ ಮತ್ತು ಪರಂಪರೆಯ ಕಥೆಯನ್ನು ಸಾಗಿಸುವ ಪುಟ್ಟ ಸಾರ್ವಜನಿಕ ಸ್ಮಾರಕವಾಗಿದೆ ಎಂದು ಅವರು ಹೇಳಿದರು.

ಈ ಬಿಡುಗಡೆಯ ಮೂಲಕ, ಶ್ರೀ ವೈಕುಂಠ್ ಅವರ ಕೊಡುಗೆಯನ್ನು ಗಣರಾಜ್ಯದ ದೃಶ್ಯ ದಾಖಲೆಗಳಲ್ಲಿ ಶಾಶ್ವತವಾಗಿ ಕೆತ್ತಲಾಗಿದೆ ಎಂದು ಅವರು ಹೇಳಿದರು.

ಮಹಾರಾಷ್ಟ್ರ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಶ್ರೀ ಅಮಿತಾಭ್ ಸಿಂಗ್ ಮಾತನಾಡಿ, ಈ ಸ್ಮರಣಾರ್ಥ ಅಂಚೆ ಚೀಟಿ ಕೇವಲ ಅಂಚೆ ಚೀಟಿಯಲ್ಲ - ಇದು ನಮ್ಮ ದೇಶದ ಇತಿಹಾಸ ಮತ್ತು ಸಂಸ್ಕೃತಿಯನ್ನು ದೂರದವರೆಗೆ ಸಾಗಿಸುವ ಗೌರವವಾಗಿದೆ ಎಂದು ಹೇಳಿದರು. "ಈ ಅಂಚೆಚೀಟಿಯ ಮೂಲಕ, ಶ್ರೀ ಕೆ. ವೈಕುಂಠ್‌ ಅವರ ಜೀವನ ಮತ್ತು ಕೊಡುಗೆಗಳು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವುದನ್ನು ನಾವು ಖಚಿತಪಡಿಸುತ್ತೇವೆ" ಎಂದು ಅವರು ಹೇಳಿದರು.

ಶ್ರೀ ವೈಕುಂಠ್‌ ಅವರ ಪ್ರಸಿದ್ಧ 17 ನಿಮಿಷಗಳ ಇಂಗ್ಲಿಷ್ ಸಾಕ್ಷ್ಯಚಿತ್ರ "ಗೋವಾ ಮಾರ್ಚ್ಸ್ ಆನ್" ಪ್ರದರ್ಶನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು, ಇದು ಪ್ರೇಕ್ಷಕರಿಗೆ ಅವರ ಕಲಾತ್ಮಕ ದೃಷ್ಟಿ, ತಾಂತ್ರಿಕ ಕೌಶಲ್ಯ ಮತ್ತು ಗೋವಾದ ಮೇಲಿನ ಆಳವಾದ ಪ್ರೀತಿಯ ನೋಟವನ್ನು ನೀಡಿತು.

For more information, Click on:

IFFI Website: https://www.iffigoa.org/

PIB’s IFFI Microsite: https://www.pib.gov.in/iffi/56/

PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F

X Handles: @IFFIGoa, @PIB_India, @PIB_Panaji

 

*****


Great films resonate through passionate voices. Share your love for cinema with #IFFI2025, #AnythingForFilms and #FilmsKeLiyeKuchBhi. Tag us @pib_goa on Instagram, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at iffi.mediadesk@pib.gov.in with the subject line: Take One with PIB.


Release ID: 2195669   |   Visitor Counter: 3