ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಟ ಶ್ರೀ ರಾಮ್ ಚರಣ್ ಮತ್ತು ಶ್ರೀ ಅನಿಲ್ ಕಾಮಿನೇನಿ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಬಿಲ್ಲುಗಾರಿಕೆ ಕ್ರೀಡೆಯನ್ನು ಜನಪ್ರಿಯಗೊಳಿಸುವ ಮಾಡಿರುವ ಪ್ರಯತ್ನಗಳನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು

Posted On: 12 OCT 2025 9:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಟ ಶ್ರೀ ರಾಮ್ ಚರಣ್, ಅವರ ಪತ್ನಿ ಶ್ರೀಮತಿ ಉಪಾಸನಾ ಕೊನಿಡೇಲಾ ಮತ್ತು ಶ್ರೀ ಅನಿಲ್ ಕಾಮಿನೇನಿ ಅವರನ್ನು ಭೇಟಿಯಾದರು.

ಸಂವಾದದ ಸಂದರ್ಭದಲ್ಲಿ, ವಿಶ್ವದ ಮೊದಲ ಆರ್ಚರಿ ಪ್ರೀಮಿಯರ್ ಲೀಗ್ ಮೂಲಕ ಬಿಲ್ಲುಗಾರಿಕೆ ಕ್ರೀಡೆಯನ್ನು ಉತ್ತೇಜಿಸಲು ಅವರುಗಳು ಮಾಡಿದ ಸಾಮೂಹಿಕ ಪ್ರಯತ್ನಗಳನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು.

ಇಂತಹ ಉಪಕ್ರಮಗಳು ಬಿಲ್ಲುಗಾರಿಕೆಯ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಹೆಚ್ಚಿನ ಯುವಕರು ಕ್ರೀಡೆಯನ್ನು ಆದ್ಯತೆ ಮೂಲಕ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ತಿಳಿಸಿದರು.

ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ತಾಣದ ಸಂದೇಶದಲ್ಲಿ ಈ ರೀತಿ ಬರೆದಿದ್ದಾರೆ;

“ಶ್ರೀಮತಿ ಉಪಾಸನಾ ಮತ್ತು ಶ್ರೀ ಅನಿಲ್ ಕಾಮಿನೇನಿ ಗಾರು, ನಿಮ್ಮನ್ನು ಭೇಟಿಯಾಗಲು ಸಂತೋಷವಾಗಿದೆ. ಬಿಲ್ಲುಗಾರಿಕೆಯನ್ನು ಜನಪ್ರಿಯಗೊಳಿಸುವ ನಿಮ್ಮ ಸಾಮೂಹಿಕ ಪ್ರಯತ್ನಗಳು ಶ್ಲಾಘನೀಯ ಮತ್ತು ಅಸಂಖ್ಯಾತ ಯುವಕರಿಗೆ ಪ್ರಯೋಜನವನ್ನು ನೀಡುತ್ತಿದೆ.

@AlwaysRamCharan

@upasanakonidela”

 

 

*****

 


(Release ID: 2178790) Visitor Counter : 8