ಪ್ರಧಾನ ಮಂತ್ರಿಯವರ ಕಛೇರಿ
ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಅವರ ಜನ್ಮ ಜಯಂತಿಯಂದು ಪ್ರಧಾನಮಂತ್ರಿ ಅವರಿಂದ ಗೌರವ ನಮನ
ಪ್ರಕಟಣಾ ದಿನಾಂಕ:
19 NOV 2024 8:41AM by PIB Bengaluru
ಝಾನ್ಸಿಯ ವೀರ ರಾಣಿ ಲಕ್ಷ್ಮೀಬಾಯಿ ಅವರು ಧೈರ್ಯ ಮತ್ತು ದೇಶಭಕ್ತಿಯ ನಿಜವಾದ ಸಾಕಾರಮೂರ್ತಿ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಇಂದು ಲಕ್ಷ್ಮೀ ಬಾಯಿ ಅವರ ಜಯಂತಿ ಅಂಗವಾಗಿ ಪ್ರಧಾನಮಂತ್ರಿ ಅವರು ಗೌರವ ನಮನ ಸಲ್ಲಿಸಿದರು.
ಅವರು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:
“ಧೈರ್ಯ ಮತ್ತು ದೇಶಪ್ರೇಮದ ನಿಜವಾದ ಮೂರ್ತರೂಪವಾದ ಝಾನ್ಸಿಯ ವೀರ ರಾಣಿ ಲಕ್ಷ್ಮೀಬಾಯಿ ಅವರ ಜಯಂತಿಯಂದು ಅವರಿಗೆ ಗೌರವ ನಮನಗಳು. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಶೌರ್ಯ ಮತ್ತು ಪ್ರಯತ್ನಗಳು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರಲಿವೆ. ಪ್ರತಿಕೂಲ ಸಮಯದಲ್ಲಿ ಅವರ ನಾಯಕತ್ವವು ನೈಜ ಬದ್ಧತೆ ಎಂದರೆ ಏನು ಎಂಬುದನ್ನು ತೋರಿಸಿವೆ.”
*****
(ಪ್ರಕಟಣೆ ಐ.ಡಿ.: 2074599)
ವಿಸಿಟರ್ ಕೌಂಟರ್ : 76
ಪ್ರಕಟಣೆಯನ್ನು ಇದರಲ್ಲಿ ಓದಿ:
Assamese
,
English
,
Urdu
,
Marathi
,
हिन्दी
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam