ಉಪರಾಷ್ಟ್ರಪತಿಗಳ ಕಾರ್ಯಾಲಯ

ದೇಶದ ಜನತೆಗೆ ರಕ್ಷಾ ಬಂಧನದ ಶುಭಾಶಯ ತಿಳಿಸಿದ ಉಪರಾಷ್ಟ್ರಪತಿಗಳು

Posted On: 19 AUG 2024 11:21AM by PIB Bengaluru

ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ರಕ್ಷಾ ಬಂಧನದ ಶುಭ ಸಂದರ್ಭದಲ್ಲಿ ರಾಷ್ಟ್ರದ ಜನತೆಗೆ ಶುಭಾಶಯ ಕೋರಿದ್ದಾರೆ.

ಈ ಸಂಬಂಧ "ಎಕ್ಸ್‌"ನಲ್ಲಿ ಸಂದೇಶ ಹಂಚಿಕೊಂಡಿರುವ ಉಪರಾಷ್ಟ್ರಪತಿಗಳು,

"ಸಂಭ್ರಮದ ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಹೃತ್ಪೂರ್ವಕ ಹಾರ್ದಿಕ ಶುಭಾಶಯಗಳು!

ಸಹೋದರರು ಹಾಗೂ ಸಹೋದರಿಯರ ಪವಿತ್ರ ಬಾಂಧವ್ಯದ ಆಚರಣೆಯು ಪರಸ್ಪರ ಬೆಂಬಲಿಸಿ, ರಕ್ಷಣೆಗೆ ನಿಲ್ಲುವ ಬದ್ಧತೆಯನ್ನು ನೀಡುವ ಮಹತ್ವದ ಸಂದರ್ಭವೆನಿಸಿದೆ.

ಈ ಶುಭ ಸಂದರ್ಭದಲ್ಲಿ ಮಹಿಳೆಯರ ಘನತೆ ಮತ್ತು ಗೌರವವನ್ನು ಎತ್ತಿಹಿಡಿಯಲು ನಾವೆಲ್ಲಾ ಬದ್ಧರಾಗಿರುವುದಾಗಿ ಸಂಕಲ್ಪ ಮಾಡೋಣ. ಮಹಿಳೆಯರು ಸಂಪೂರ್ಣ ಪ್ರಗತಿ ಸಾಧಿಸಲು ಹಾಗೂ ಅವರ ಸಾಮರ್ಥ್ಯವನ್ನು ಸಂಪೂರ್ಣವಾಗಿ ಅರಿತು ಬಳಸಿಕೊಳ್ಳಲು ಪೂರಕವಾದ ವಾತಾವರಣವನ್ನು ನಿರ್ಮಾಣಕ್ಕೆ ಪ್ರಯತ್ನಿಸೋಣ,ʼʼ ಎಂದು ಕರೆ ನೀಡಿದ್ದಾರೆ.

 

 

*****



(Release ID: 2046573) Visitor Counter : 16