ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ವಾಯುಸೇನೆಯಿಂದ ಹಿಡಿದು ಎಲ್ಲಾ ವಲಯಗಳಲ್ಲೂ ಮಹಿಳೆಯರು ಅಪ್ರತಿಮ ಶ್ರೇಷ್ಠತೆಯನ್ನು ಪ್ರದರ್ಶಿಸುತ್ತಿದ್ದಾರೆ. ಅವರ ಸಾಧನೆಗಳು ನಾರಿ ಶಕ್ತಿಯ ಶಕ್ತಿ ಮತ್ತು ಚೈತನ್ಯಕ್ಕೆ ಸಾಕ್ಷಿಯಾಗಿದೆ: ಪ್ರಧಾನಮಂತ್ರಿ


ನಾವು 'ವಿಕಸಿತ ಭಾರತ' ಗಾಗಿ ಶ್ರಮಿಸುತ್ತಿರುವಾಗ, ನಮ್ಮ ಭವಿಷ್ಯವನ್ನು ರೂಪಿಸುವಲ್ಲಿ ಮತ್ತು ನಮ್ಮ ಸಮಾಜವನ್ನು ಮುನ್ನಡೆಸುವಲ್ಲಿ ಮಹಿಳೆಯರ ಪ್ರಮುಖ ಪಾತ್ರವನ್ನು ಗುರುತಿಸಿ, ಮಹಿಳೆಯರ ಸಬಲೀಕರಣ ಮತ್ತು ಉನ್ನತೀಕರಣವನ್ನು ಮುಂದುವರಿಸೋಣ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು

ಮಹಿಳಾ ಸಬಲೀಕರಣ, ವಿಕಸಿತ ಭಾರತ ನಿರ್ಮಾಣ :  ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಅತಿಥಿಗಳಾಗಿ 161 ಕ್ಷೇತ್ರ ವೀರ ಮಹಿಳೆಯರನ್ನು ಗೌರವಿಸುತ್ತದೆ

Posted On: 15 AUG 2024 12:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 15, 2024 ರಂದು ನವದೆಹಲಿಯ ಐತಿಹಾಸಿಕ ಕೆಂಪು ಕೋಟೆಯಿಂದ 78 ನೇ ಸ್ವಾತಂತ್ರ್ಯ ದಿನಾಚರಣೆಯ ಆಚರಣೆ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು ಮತ್ತು ಐತಿಹಾಸಿಕ ಸ್ಮಾರಕ ಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದರು.

ದೇಶದ ವಿವಿಧೆಡೆಯಿಂದ ಆಗಮಿಸಿದ್ದ ವಿವಿಧ ಕ್ಷೇತ್ರಗಳ ಪದಾಧಿಕಾರಿಗಳು ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು

ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ, ಮಹಿಳೆಯರು ವಾಯುಸೇನೆಯಿಂದ ಹಿಡಿದು ಅಪ್ರತಿಮ ಶ್ರೇಷ್ಠತೆಯನ್ನು ಪ್ರದರ್ಶಿಸುವ ಮೂಲಕ ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆಸುತ್ತಿದ್ದಾರೆ. ಅವರ ಸಾಧನೆಗಳು ನಾರಿ ಶಕ್ತಿಯ ನಿಜವಾದ ಶಕ್ತಿ ಮತ್ತು ಚೈತನ್ಯಕ್ಕೆ ಸಾಕ್ಷಿಯಾಗಿದೆ. ನಾವು ಮುಂದುವರಿಯುತ್ತಿರುವಾಗ, ನಮ್ಮ ರಾಷ್ಟ್ರದ ಪ್ರಗತಿಗೆ ಮಹಿಳೆಯರ ಗಮನಾರ್ಹ ಕೊಡುಗೆಗಳನ್ನು ಬೆಂಬಲಿಸುವುದನ್ನು ಮತ್ತು ಆಚರಿಸುವುದನ್ನು ಮುಂದುವರಿಸೋಣ ಎಂದು ಹೇಳಿದರು.

ಉದ್ಯೋಗಸ್ಥ ಮಹಿಳೆಯರಿಗೆ, ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಲಾಗಿದೆ. ನಾವು ಮಹಿಳೆಯರನ್ನು ಗೌರವಿಸುವುದು ಮಾತ್ರವಲ್ಲ, ಅವರಿಗಾಗಿ ಸೂಕ್ಷ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ತನ್ನ ಮಗುವನ್ನು ಗುಣಮಟ್ಟದ ನಾಗರಿಕನನ್ನಾಗಿ ಬೆಳೆಸುವ ತಾಯಿಯ ಸಾಮರ್ಥ್ಯಕ್ಕೆ ಸರ್ಕಾರವು ಅಡ್ಡಿಯಾಗದಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿದೆ. ಇಲ್ಲಿಯವರೆಗೆ ದೇಶಾದ್ಯಂತ ಸ್ವಸಹಾಯ ಗುಂಪುಗಳಿಗೆ 9 ಲಕ್ಷ ಕೋಟಿ ರೂಪಾಯಿ ನೀಡಲಾಗಿದೆ. ಕಳೆದ 10 ವರ್ಷಗಳಲ್ಲಿ 10 ಕೋಟಿ ಮಹಿಳೆಯರು ಸ್ವಸಹಾಯ ಸಂಘಗಳಿಗೆ ಸೇರಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಮಹಿಳೆಯರು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಿದಾಗ, ಅವರು ಮನೆಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ, ಇದು ಸಾಮಾಜಿಕ ಬದಲಾವಣೆಗೆ ಕಾರಣವಾಗುತ್ತದೆ. ಎಂದು ಪ್ರಧಾನಿ ಹೇಳಿದರು.

ಸ್ವಾತಂತ್ರ್ಯ ದಿನಾಚರಣೆಯಂದು ಸ್ವಾತಂತ್ರ್ಯ ದಿನಾಚರಣೆಯ ಈ ಮಹತ್ವದ ಸಂದರ್ಭದಲ್ಲಿ ನಾವು ನಮ್ಮ ರಾಷ್ಟ್ರದ ಸ್ವಾತಂತ್ರ್ಯವನ್ನು ಮಾತ್ರವಲ್ಲದೆ ನಮ್ಮ ಪ್ರಗತಿಗೆ ಚಾಲನೆ ನೀಡುವ ಮಹಿಳೆಯರ ನಂಬಲಾಗದ ಕೊಡುಗೆಗಳನ್ನು ಗೌರವಿಸುತ್ತೇವೆ. ಮಹಿಳೆಯರ ಅಚಲವಾದ ಸಮರ್ಪಣೆ ಮತ್ತು ದೃಢತೆ ನಾರಿ ಶಕ್ತಿಯ ಸಾರವಾಗಿದೆ. ನಾವು 'ವಿಕ್ಷಿತ ಭಾರತ' ಗಾಗಿ ಶ್ರಮಿಸುತ್ತಿರುವಾಗ, ನಮ್ಮ ಭವಿಷ್ಯವನ್ನು ರೂಪಿಸುವಲ್ಲಿ ಮತ್ತು ನಮ್ಮ ಸಮಾಜವನ್ನು ಮುನ್ನಡೆಸುವಲ್ಲಿ ಮಹಿಳೆಯರ ಪ್ರಮುಖ ಪಾತ್ರವನ್ನು ಗುರುತಿಸಿ, ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಮೇಲಕ್ಕೆತ್ತುವುದನ್ನು ಮುಂದುವರಿಸೋಣ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ ಹೇಳಿದರು. 

 
ದೇಶದ ವಿವಿಧೆಡೆಯಿಂದ ಆಗಮಿಸಿದ್ದ ವಿವಿಧ ಕ್ಷೇತ್ರಗಳ ಪದಾಧಿಕಾರಿಗಳು ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು.

ಈ ವರ್ಷ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ(ಎಂ.ಡಬ್ಲ್ಯೂ.ಸಿ.ಡಿ) ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ಅತಿಥಿಗಳಾಗಿ 161 ಫಲಾನುಭವಿಗಳು ಮತ್ತು ಅವರ ಸಹಚರರನ್ನು ಸೇರಿಸಿ ಗೌರವಿಸುವ ಕಾರ್ಯಕ್ರಮ ಆಯೋಜಿಸಿತ್ತು. ಈ ವಿಶೇಷ ಅತಿಥಿಗಳಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ವಿವಿಧ ಸಬಲೀಕರಣ ಮತ್ತು ಕಲ್ಯಾಣ ಯೋಜನೆಗಳ ಸಮರ್ಪಿತ ಮಹಿಳಾ ಕಾರ್ಯಕರ್ತರು ಸೇರಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು, ಒನ್ ಸ್ಟಾಪ್ ಸೆಂಟರ್ (ಒ.ಎಸ್.ಸಿ.), ಮಹಿಳಾ ಸಬಲೀಕರಣಕ್ಕಾಗಿ ಸಂಕಲ್ಪ್ ಹಬ್ಗಳು ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು (ಡಿ.ಸಿ.ಪಿ.ಯು) ಸಿಬ್ಬಂದಿ ಈ ತಂಡದಲ್ಲಿ ಭಾಗವಹಿಸಿದ್ದರು.

ಈ ವಿಶೇಷ ಅತಿಥಿಗಳು ತಂಡದ ಭೇಟಿಯಲ್ಲಿ, 14ನೇ ಆಗಸ್ಟ್ 2024 ರಂದು ನವದೆಹಲಿಯ ಸಂಸತ್ತು ಮತ್ತು ಪ್ರಧಾನ ಮಂತ್ರಿ ಸಂಗ್ರಹಾಲಯದಂತಹ ಸಾಂಪ್ರದಾಯಿಕ ವಿಶೇಷ ಸ್ಥಳಗಳ ಸಂದರ್ಶನಗಳೂ ಒಳಗೊಂಡಿತ್ತು. ಅತಿಥಿಗಳು ವಿಜ್ಞಾನ ಭವನದಲ್ಲಿ ನಡೆದ ಚಹಾ ಕೂಟದಲ್ಲಿ ಮತ್ತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವೆ ಶ್ರೀಮತಿ ಸಾವಿತ್ರಿ ಠಾಕೂರ್ ಅವರೊಂದಿಗೆ ಸಂವಾದ ಸೇರಿದಂತೆ ಸಮಗ್ರ ವೇಳಾಪಟ್ಟಿಯನ್ನು ಉತ್ತಮ ರೀತಿಯಲ್ಲಿ ಆನಂದಿಸಿದರು.

ವಿಶೇಷ ಅತಿಥಿಗಳು ಮತ್ತು ಅವರ ಸಹಚರರು ಆಗಸ್ಟ್ 13 ರಿಂದ 16, 2024 ರವರೆಗೆ ನವದೆಹಲಿಯಲ್ಲಿರುತ್ತಾರೆ, 78ನೇ ಸ್ವಾತಂತ್ರ್ಯ ದಿನಾಚರಣೆಯು ಭಾರತದ ಸ್ವಾತಂತ್ರ್ಯದ ಆಚರಣೆ ಮಾತ್ರವಲ್ಲದೆ ರಾಷ್ಟ್ರದ ಪ್ರಗತಿಗೆ ದಣಿವರಿಯದೆ ಕೊಡುಗೆ ನೀಡುವ ವ್ಯಕ್ತಿಗಳಿಗೆ ನೀಡುವ ಗೌರವವಾಗಿದೆ. ಇದು ಸಾಮೂಹಿಕ ಸಾಧನೆಗಳನ್ನು ಗೌರವಿಸಲು ಮತ್ತು ಭರವಸೆ ಮತ್ತು ಸಮೃದ್ಧಿಯಿಂದ ತುಂಬಿದ ಭಾರತದ ಉಜ್ವಲ ಭವಿಷ್ಯಕ್ಕಾಗಿ ಎದುರುನೋಡುವ ದಿನವಾಗಿದೆ.

 

*****



(Release ID: 2045746) Visitor Counter : 7