ಹಣಕಾಸು ಸಚಿವಾಲಯ

ಕೇಂದ್ರ ಬಜೆಟ್‌ 2024-25ರ ಮುಖ್ಯಾಂಶಗಳು

Posted On: 23 JUL 2024 1:17PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2024-25 ಅನ್ನು ಮಂಡಿಸಿದರು. ಬಜೆಟ್‌ ನ ಮುಖ್ಯಾಂಶಗಳು ಹೀಗಿವೆ:

ಭಾಗ-ಎ

2024-25 ಬಜೆಟ್ ಅಂದಾಜುಗಳು:

  • ಸಾಲ ಹೊರತುಪಡಿಸಿ ಒಟ್ಟು ಸ್ವೀಕೃತಿಗಳು: 32.07 ಲಕ್ಷ ಕೋಟಿ ರೂ.
  • ಒಟ್ಟು ವೆಚ್ಚ: 48.21 ಲಕ್ಷ ಕೋಟಿ ರೂ.
  • ನಿವ್ವಳ ತೆರಿಗೆ ಸ್ವೀಕೃತಿ: 25.83 ಲಕ್ಷ ಕೋಟಿ ರೂ.
  • ವಿತ್ತೀಯ ಕೊರತೆ: ಜಿಡಿಪಿಯ ಶೇ.4.9.ಮುಂದಿನ ವರ್ಷ ಶೇ.4.5ಕ್ಕಿಂತ ಕಡಿಮೆ ಕೊರತೆಯನ್ನು ತಲುಪುವ ಗುರಿಯನ್ನು ಸರ್ಕಾರ ಹೊಂದಿದೆ.
  • ಹಣದುಬ್ಬರವು ಕಡಿಮೆ, ಸ್ಥಿರ ಮತ್ತು ಶೇ.4ರ ಗುರಿಯತ್ತ ಸಾಗುತ್ತಿದೆ; ಪ್ರಮುಖ ಹಣದುಬ್ಬರ (ಆಹಾರೇತರ, ಇಂಧನೇತರ) ಶೇ.3.1.
  • ಬಜೆಟ್‌ನ ಗಮನವು ಉದ್ಯೋಗ, ಕೌಶಲ್ಯ, ಎಂ ಎಸ್‌ ಎಂ ಇ ಮತ್ತು ಮಧ್ಯಮ ವರ್ಗದ ಮೇಲೆ ಕೇಂದ್ರೀಕೃತವಾಗಿದೆ.

ಉದ್ಯೋಗ ಮತ್ತು ಕೌಶಲ್ಯಕ್ಕಾಗಿ ಪ್ರಧಾನ ಮಂತ್ರಿಯವರ ಐದು ಯೋಜನೆಗಳ ಪ್ಯಾಕೇಜ್

  • 5 ವರ್ಷಗಳ ಅವಧಿಯಲ್ಲಿ 4.1 ಕೋಟಿ ಯುವಕರಿಗೆ ಉದ್ಯೋಗ, ಕೌಶಲ್ಯ ಮತ್ತು ಇತರ ಅವಕಾಶಗಳಿಗಾಗಿ ಪ್ರಧಾನ ಮಂತ್ರಿಯವರ 5 ಯೋಜನೆಗಳು ಮತ್ತು ಉಪಕ್ರಮಗಳ ಪ್ಯಾಕೇಜ್.
  1. ಯೋಜನೆ – ಮೊದಲ ಬಾರಿಯ ಉದ್ಯೋಗಿಗಳು: ಇ ಪಿ ಎಫ್‌ ಒ ದಲ್ಲಿ ನೋಂದಾಯಿಸಿದಂತೆ ಮೊದಲ ಬಾರಿಗೆ ಉದ್ಯೋಗಿಗಳಿಗೆ 3 ಕಂತುಗಳಲ್ಲಿ 15,000 ರೂ.ವರೆಗೆ ಒಂದು ತಿಂಗಳ ವೇತನವನ್ನು ನೀಡಲಾಗುತ್ತದೆ.
  2. ಯೋಜನೆ ಬಿ - ಉತ್ಪಾದನೆಯಲ್ಲಿ ಉದ್ಯೋಗ ಸೃಷ್ಟಿ: ಉದ್ಯೋಗದ ಮೊದಲ 4 ವರ್ಷಗಳಲ್ಲಿ ಅವರ ಇ ಪಿ ಎಫ್‌ ಒ ಕೊಡುಗೆಗೆ ಸಂಬಂಧಿಸಿದಂತೆ ಉದ್ಯೋಗಿ ಮತ್ತು ಉದ್ಯೋಗದಾತರು ನೇರವಾಗಿ ನಿರ್ದಿಷ್ಟ ಪ್ರಮಾಣದಲ್ಲಿ ಪ್ರೋತ್ಸಾಹದ ನೀಡಿಕೆ.
  3. ಯೋಜನೆ ಸಿ - ಉದ್ಯೋಗದಾತರಿಗೆ ಬೆಂಬಲ: ಪ್ರತಿ ಹೆಚ್ಚುವರಿ ಉದ್ಯೋಗಿಗೆ ಉದ್ಯೋಗದಾತರ ಇ ಪಿ ಎಫ್‌ ಒ ​​ಕೊಡುಗೆಗಾಗಿ 2 ವರ್ಷಗಳವರೆಗೆ ಸರ್ಕಾರವು ತಿಂಗಳಿಗೆ 3,000 ರೂ.ವರೆಗೆ ಮರುಪಾವತಿ ಮಾಡುತ್ತದೆ.
  4. ಕೌಶಲ್ಯಕ್ಕಾಗಿ ಹೊಸ ಕೇಂದ್ರ ಪ್ರಾಯೋಜಿತ ಯೋಜನೆ
  • 5 ವರ್ಷಗಳ ಅವಧಿಯಲ್ಲಿ 20 ಲಕ್ಷ ಯುವಕರು ಕೌಶಲ್ಯ ಹೊಂದಬೇಕು.
  • 1,000 ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು  ಮೇಲ್ದರ್ಜೆಗೆ ಏರಿಸಲಾಗುವುದು.
  1. 5 ವರ್ಷಗಳಲ್ಲಿ 1 ಕೋಟಿ ಯುವಕರಿಗೆ 500 ಉನ್ನತ ಕಂಪನಿಗಳಲ್ಲಿ ಇಂಟರ್ನ್‌ಶಿಪ್‌ ಗಾಗಿ     ಹೊಸ ಯೋಜನೆ.

'ವಿಕಸಿತ ಭಾರತ' ನಿರ್ಮಾಣಕ್ಕಾಗಿ ಒಂಬತ್ತು ಬಜೆಟ್ ಆದ್ಯತೆಗಳು:

1. ಕೃಷಿಯಲ್ಲಿ ಉತ್ಪಾದಕತೆ ಮತ್ತು ಸ್ಥಿತಿಸ್ಥಾಪಕತ್ವ

2. ಉದ್ಯೋಗ ಮತ್ತು ಕೌಶಲ್ಯ

3. ಒಳಗೊಳ್ಳುವಿಕೆಯ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ

4. ಉತ್ಪಾದನೆ ಮತ್ತು ಸೇವೆಗಳು

5. ನಗರಾಭಿವೃದ್ಧಿ

6. ಇಂಧನ ಭದ್ರತೆ

7. ಮೂಲಸೌಕರ್ಯ

8. ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು

9. ಮುಂದಿನ ತಲೆಮಾರಿನ ಸುಧಾರಣೆಗಳು

ಆದ್ಯತೆ 1: ಕೃಷಿಯಲ್ಲಿ ಉತ್ಪಾದಕತೆ ಮತ್ತು ಸ್ಥಿತಿಸ್ಥಾಪಕತ್ವ

  • ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂ. ಅನುದಾನ.
  • 32 ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಹೊಸ 109 ಹೆಚ್ಚು ಇಳುವರಿ ಮತ್ತು ಹವಾಮಾನ-ನಿರೋಧಕ ತಳಿಗಳನ್ನು ರೈತರ ಕೃಷಿಗಾಗಿ ಬಿಡುಗಡೆ ಮಾಡಲಾಗುತ್ತದೆ.
  • ಮುಂದಿನ 2 ವರ್ಷಗಳಲ್ಲಿ ಪ್ರಮಾಣೀಕರಣ ಮತ್ತು ಬ್ರ್ಯಾಂಡಿಂಗ್‌ ನೊಂದಿಗೆ ದೇಶಾದ್ಯಂತ 1 ಕೋಟಿ ರೈತರನ್ನು ಸಹಜ ಕೃಷಿ ಆರಂಭಿಸಲು ಪ್ರೋತ್ಸಾಹಿಸಲಾಗುವುದು.
  • ಸಹಜ ಕೃಷಿಗಾಗಿ 10,000 ಅಗತ್ಯ ಆಧಾರಿತ ಬಯೋ- ಇನ್‌ಪುಟ್ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
  • ಕೃಷಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಅನ್ನು 3 ವರ್ಷಗಳಲ್ಲಿ ರೈತರು ಮತ್ತು ಅವರ ಜಮೀನುಗಳನ್ನು ಒಳಗೊಳ್ಳಲು ಅಳವಡಿಸಲಾಗುವುದು.

ಆದ್ಯತೆ 2: ಉದ್ಯೋಗ ಮತ್ತು ಕೌಶಲ್ಯ

  • ಪ್ರಧಾನಮಂತ್ರಿಯವರ ಪ್ಯಾಕೇಜ್‌ ನ ಭಾಗವಾಗಿ, ‘ಉದ್ಯೋಗ ಆಧಾರಿತ ಪ್ರೋತ್ಸಾಹʼಕ್ಕಾಗಿ 3 ಯೋಜನೆಗಳನ್ನು ಜಾರಿಗೊಳಿಸಲಾಗುವುದು - ಸ್ಕೀಮ್ ಎ – ಮೊದಲ ಬಾರಿಯ ಉದ್ಯೋಗಿಗಳು; ಸ್ಕೀಮ್ ಬಿ - ಉತ್ಪಾದನೆಯಲ್ಲಿ ಉದ್ಯೋಗ ಸೃಷ್ಟಿ; ಸ್ಕೀಮ್ ಸಿ - ಉದ್ಯೋಗದಾತರಿಗೆ ಬೆಂಬಲ.
  • ಉದ್ಯೋಗಿಗಳಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಸುಗಮಗೊಳಿಸಲು:
  • ಕಾರ್ಮಿಕ ಮಹಿಳಾ ವಸತಿ ನಿಲಯಗಳು ಮತ್ತು ಶಿಶುವಿಹಾರಗಳನ್ನು ಉದ್ಯಮದ ಸಹಯೋಗದೊಂದಿಗೆ ಸ್ಥಾಪಿಸಲಾಗುವುದು
  • ಮಹಿಳಾ ವಿಶೇಷ ಕೌಶಲ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು
  • ಮಹಿಳಾ ಸ್ವಸಹಾಯ ಉದ್ಯಮಗಳಿಗೆ ಮಾರುಕಟ್ಟೆ ಪ್ರವೇಶವನ್ನು ಉತ್ತೇಜಿಸಲಾಗುವುದು

ಕೌಶಲ್ಯ ಅಭಿವೃದ್ಧಿ

  • 5 ವರ್ಷಗಳ ಅವಧಿಯಲ್ಲಿ 20 ಲಕ್ಷ ಯುವಕರಿಗೆ ಪ್ರಧಾನ ಮಂತ್ರಿಯವರ ಪ್ಯಾಕೇಜ್ ಅಡಿಯಲ್ಲಿ ಕೌಶಲ್ಯಕ್ಕಾಗಿ ಹೊಸ ಕೇಂದ್ರ ಪ್ರಾಯೋಜಿತ ಯೋಜನೆ.
  • 7.5 ಲಕ್ಷ ರೂ.ವರೆಗಿನ ಸಾಲವನ್ನು ಸುಗಮಗೊಳಿಸಲು ಮಾದರಿ ಕೌಶಲ್ಯ ಸಾಲ ಯೋಜನೆಯನ್ನು ಪರಿಷ್ಕರಿಸಲಾಗುವುದು.
  • ಸರ್ಕಾರಿ ಯೋಜನೆಗಳು ಮತ್ತು ನೀತಿಗಳ ಅಡಿಯಲ್ಲಿ ಯಾವುದೇ ಪ್ರಯೋಜನಕ್ಕೆ ಅರ್ಹತೆ ಹೊಂದಿರದ ಯುವಕರಿಗೆ ದೇಶೀಯ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ 10 ಲಕ್ಷ ರೂ.ವರೆಗಿನ ಸಾಲಗಳಿಗೆ ಆರ್ಥಿಕ ಬೆಂಬಲವನ್ನು ನೀಡಲಾಗುತ್ತದೆ.

ಆದ್ಯತೆ 3: ಒಳಗೊಳ್ಳುವಿಕೆಯ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ

ಪೂರ್ವೋದಯ

  • ಅಮೃತಸರ-ಕೋಲ್ಕತ್ತಾ ಕೈಗಾರಿಕಾ ಕಾರಿಡಾರ್‌ ನಲ್ಲಿ ಗಯಾದಲ್ಲಿ ಕೈಗಾರಿಕಾ ನೋಡ್ ಅನ್ನು ಅಭಿವೃದ್ಧಿಪಡಿಸಲಾಗುವುದು.
  • 21,400 ಕೋಟಿ ರೂ. ವೆಚ್ಚದಲ್ಲಿ ಪಿರಪೈಂತಿಯಲ್ಲಿ ಹೊಸ 2400 ಮೆಗಾ ವ್ಯಾಟ್ ವಿದ್ಯುತ್ ಸ್ಥಾವರ ಸೇರಿದಂತೆ ವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು.

ಆಂಧ್ರ ಪ್ರದೇಶ ಮರುಸಂಘಟನೆ ಕಾಯಿದೆ

  • ಪ್ರಸಕ್ತ ಹಣಕಾಸು ವರ್ಷದಲ್ಲಿ 15,000 ಕೋಟಿ ರೂ.ಗಳ ಬಹುಪಕ್ಷೀಯ ಅಭಿವೃದ್ಧಿ ಏಜೆನ್ಸಿಗಳ ಮೂಲಕ ವಿಶೇಷ ಆರ್ಥಿಕ ನೆರವು.
  • ವಿಶಾಖಪಟ್ಟಣಂ-ಚೆನ್ನೈ ಕೈಗಾರಿಕಾ ಕಾರಿಡಾರ್ ನ ಕೊಪ್ಪರ್ತಿಯಲ್ಲಿ ಮತ್ತು ಹೈದರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ನ ಓರ್ವಕಲ್ ನಲ್ಲಿ ಕೈಗಾರಿಕಾ ನೋಡ್ ಸ್ಥಾಪನೆ.

ಮಹಿಳಾ ನೇತೃತ್ವದ ಅಭಿವೃದ್ಧಿ

  • ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಅನುಕೂಲವಾಗುವ ಯೋಜನೆಗಳಿಗೆ ಒಟ್ಟು 3 ಲಕ್ಷ ಕೋಟಿ ರೂ.ಗೂ ಹೆಚ್ಚು ಅನುದಾನ.

ಪ್ರಧಾನ ಮಂತ್ರಿ ಜನಜಾತೀಯ ಉನ್ನತ ಗ್ರಾಮ ಅಭಿಯಾನ

  • ಬುಡಕಟ್ಟು ಜನರು ಬಹುಸಂಖ್ಯೆಯಲ್ಲಿರುವ ಗ್ರಾಮಗಳು ಮತ್ತು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಬುಡಕಟ್ಟು ಕುಟುಂಬಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯು 63,000 ಹಳ್ಳಿಗಳನ್ನು ಒಳಗೊಂಡ 5 ಕೋಟಿ ಬುಡಕಟ್ಟು ಜನರಿಗೆ ಪ್ರಯೋಜನವನ್ನು ನೀಡುತ್ತದೆ.

ಈಶಾನ್ಯ ಪ್ರದೇಶದಲ್ಲಿ ಬ್ಯಾಂಕ್ ಶಾಖೆಗಳು

  • ಈಶಾನ್ಯ ಪ್ರದೇಶದಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ ನ 100 ಶಾಖೆಗಳನ್ನು ಸ್ಥಾಪಿಸಲಾಗುವುದು.

ಆದ್ಯತೆ 4: ಉತ್ಪಾದನೆ ಮತ್ತು ಸೇವೆಗಳು

ಉತ್ಪಾದನಾ ವಲಯದಲ್ಲಿ ಎಂ ಎಸ್‌ ಎಂ ಇ ಗಳಿಗೆ ಸಾಲ ಖಾತ್ರಿ ಯೋಜನೆ

  • ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಖರೀದಿಗಾಗಿ ಎಂ ಎಸ್‌ ಎಂ ಇ ಗಳಿಗೆ ಅವಧಿಯ ಸಾಲಗಳಲ್ಲಿ ಮೇಲಾಧಾರ ಅಥವಾ ಮೂರನೇ ವ್ಯಕ್ತಿಯ ಗ್ಯಾರಂಟಿ ಇಲ್ಲದ ಸಾಲ ಖಾತ್ರಿ ಯೋಜನೆ.

ಒತ್ತಡದ ಅವಧಿಯಲ್ಲಿ ಎಂಎಸ್‌ಎಂಇ ಗಳಿಗೆ ಸಾಲ ಬೆಂಬಲ

  • ಎಂಎಸ್‌ಎಂಇ ಗಳಿಗೆ ತಮ್ಮ ಒತ್ತಡದ ಅವಧಿಯಲ್ಲಿ ಬ್ಯಾಂಕ್ ಸಾಲದ ಮುಂದುವರಿಕೆಗೆ ಅನುಕೂಲವಾಗುವಂತೆ ಹೊಸ ಕಾರ್ಯವಿಧಾನ.

ಮುದ್ರಾ ಸಾಲಗಳು

  • ಹಿಂದಿನ ಸಾಲವನ್ನು ಯಶಸ್ವಿಯಾಗಿ ಮರುಪಾವತಿ ಮಾಡಿದವರಿಗೆ ‘ತರುಣ್’ವರ್ಗದ ಅಡಿಯಲ್ಲಿ ಮುದ್ರಾ ಸಾಲದ ಮಿತಿಯನ್ನು 10 ಲಕ್ಷದಿಂದ 20 ಲಕ್ಷ ರೂ.ಗೆ ಹೆಚ್ಚಿಸಲಾಗುವುದು.

TReDS ನಲ್ಲಿ ಕಡ್ಡಾಯ ಆನ್ಬೋರ್ಡಿಂಗ್ಗೆ ವರ್ಧಿತ ಸ್ಕೋಪ್

  • TReDS ಪ್ಲಾಟ್‌ಫಾರ್ಮ್‌ ನಲ್ಲಿ ಕಡ್ಡಾಯವಾಗಿ ಸೇರಲು ಖರೀದಿದಾರರ ವಹಿವಾಟು ಮಿತಿಯನ್ನು 500 ಕೋಟಿಯಿಂದ 250 ಕೋಟಿ ರೂ. ಗೆ ಇಳಿಸಲಾಗುತ್ತದೆ.

ಆಹಾರ ವಿಕಿರಣ, ಗುಣಮಟ್ಟ ಮತ್ತು ಸುರಕ್ಷತೆ ಪರೀಕ್ಷೆಗಾಗಿ ಎಂಎಸ್‌ಎಂಇ ಘಟಕಗಳು

  • ಎಂಎಸ್‌ಎಂಇ ವಲಯದಲ್ಲಿ 50 ಬಹು-ಉತ್ಪನ್ನ ಆಹಾರ ವಿಕಿರಣ ಘಟಕಗಳನ್ನು ಸ್ಥಾಪಿಸಲು ಆರ್ಥಿಕ ಬೆಂಬಲ.

-ಕಾಮರ್ಸ್ ರಫ್ತು ಕೇಂದ್ರಗಳು

  • ಎಂಎಸ್‌ಎಂಇ ಗಳು ಮತ್ತು ಸಾಂಪ್ರದಾಯಿಕ ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಸಾರ್ವಜನಿಕ-ಖಾಸಗಿ-ಪಾಲುದಾರಿಕೆ  ಮಾದರಿ ಅಡಿಯಲ್ಲಿ ಇ-ಕಾಮರ್ಸ್ ರಫ್ತು ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಕ್ರಿಟಿಕಲ್ ಮಿನರಲ್ ಮಿಷನ್

  • ದೇಶೀಯ ಉತ್ಪಾದನೆ, ನಿರ್ಣಾಯಕ ಖನಿಜಗಳ ಮರುಬಳಕೆ ಮತ್ತು ನಿರ್ಣಾಯಕ ಖನಿಜ ಆಸ್ತಿಗಳ ಸಾಗರೋತ್ತರ ಸ್ವಾಧೀನಕ್ಕಾಗಿ ಕ್ರಿಟಿಕಲ್ ಮಿನರಲ್ ಮಿಷನ್ ಅನ್ನು ಸ್ಥಾಪಿಸಲಾಗುವುದು.

ಖನಿಜಗಳ ಕಡಲ ಗಣಿಗಾರಿಕೆ

  • ಕಡಲು ಗಣಿಗಾರಿಕೆಗಾಗಿ ಬ್ಲಾಕ್‌ ಗಳ ಮೊದಲ ಕಂತಿನ ಹರಾಜು, ಪರಿಶೋಧನೆಯನ್ನು ಈಗಾಗಲೇ ಕೈಗೊಳ್ಳಲಾಗಿದೆ.

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ) ಅಪ್ಲಿಕೇಶನ್ಗಳು

  • ಕ್ರೆಡಿಟ್, ಇ-ಕಾಮರ್ಸ್, ಶಿಕ್ಷಣ, ಆರೋಗ್ಯ, ಕಾನೂನು ಮತ್ತು ನ್ಯಾಯ, ಲಾಜಿಸ್ಟಿಕ್ಸ್, ಎಂ ಎಸ್‌ ಎಂ ಇ, ಸೇವೆಗಳ ವಿತರಣೆ ಮತ್ತು ನಗರ ಆಡಳಿತ ಕ್ಷೇತ್ರಗಳಲ್ಲಿ ಡಿಪಿಐ ಅಪ್ಲಿಕೇಶನ್‌ಗಳ ಅಭಿವೃದ್ಧಿ.

ಆದ್ಯತೆ 5: ನಗರಾಭಿವೃದ್ಧಿ

ಸಾರಿಗೆ ಆಧಾರಿತ ಅಭಿವೃದ್ಧಿ

  • 30 ಲಕ್ಷ ಜನಸಂಖ್ಯೆಗಿಂತ ಹೆಚ್ಚಿನ 14 ದೊಡ್ಡ ನಗರಗಳಲ್ಲಿ ಕಾರ್ಯಗತಗೊಳಿಸಲು ಮತ್ತು ಹಣಕಾಸು ಒದಗಿಸಲು ಸಾರಿಗೆ ಆಧಾರಿತ ಅಭಿವೃದ್ಧಿ ಯೋಜನೆಗಳು ಮತ್ತು ಕಾರ್ಯತಂತ್ರಗಳನ್ನು ರೂಪಿಸುವುದು.

ನಗರ ವಸತಿ

  • ಪ್ರಧಾನಮಂತ್ರಿ ಆವಾಸ್ ಯೋಜನೆ ನಗರ 2.0 ಅಡಿಯಲ್ಲಿ ಮುಂದಿನ 5 ವರ್ಷಗಳಲ್ಲಿ 2.2 ಲಕ್ಷ ಕೋಟಿ ರೂ. ಕೇಂದ್ರ ನೆರವು ಸೇರಿದಂತೆ 10 ಲಕ್ಷ ಕೋಟಿ ರೂ. ಹೂಡಿಕೆಯನ್ನು 1 ಕೋಟಿ ನಗರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ವಸತಿ ಅಗತ್ಯಗಳನ್ನು ಪರಿಹರಿಸಲು ಪ್ರಸ್ತಾಪಿಸಲಾಗಿದೆ.

ಬೀದಿ ಮಾರುಕಟ್ಟೆಗಳು

  • ಆಯ್ದ ನಗರಗಳಲ್ಲಿ ಮುಂದಿನ 5 ವರ್ಷಗಳವರೆಗೆ ಪ್ರತಿ ವರ್ಷ 100 ಸಾಪ್ತಾಹಿಕ 'ಹಾತ್ಸ್' ಅಥವಾ ಬೀದಿ ಆಹಾರ ಕೇಂದ್ರಗಳ ಅಭಿವೃದ್ಧಿಯನ್ನು ಬೆಂಬಲಿಸಲು ಹೊಸ ಯೋಜನೆ.

ಆದ್ಯತೆ 6: ಇಂಧನ ಭದ್ರತೆ

ಇಂಧನ ಪರಿವರ್ತನೆ

  • ಉದ್ಯೋಗ, ಬೆಳವಣಿಗೆ ಮತ್ತು ಪರಿಸರದ ಸುಸ್ಥಿರತೆಯ ಅಗತ್ಯಗಳನ್ನು ಸಮತೋಲನಗೊಳಿಸಲು 'ಎನರ್ಜಿ ಟ್ರಾನ್ಸಿಶನ್ ಪಾಥ್‌ವೇಸ್' ಕುರಿತು ನೀತಿಯನ್ನು ಹೊರತರಲಾಗುವುದು.

ಪಂಪ್ಡ್ ಶೇಖರಣಾ ನೀತಿ

  • ವಿದ್ಯುತ್ ಶೇಖರಣೆಗಾಗಿ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ಉತ್ತೇಜಿಸುವ ನೀತಿಯನ್ನು ಹೊರತರಲಾಗುವುದು.

ಸಣ್ಣ ಮತ್ತು ಮಾಡ್ಯುಲರ್ ಪರಮಾಣು ರಿಯಾಕ್ಟರ್ಗಳ ಸಂಶೋಧನೆ ಮತ್ತು ಅಭಿವೃದ್ಧಿ

  • ಭಾರತ್ ಸಣ್ಣ ಮಾಡ್ಯುಲರ್ ರಿಯಾಕ್ಟರ್ ಮತ್ತು ಪರಮಾಣು ಶಕ್ತಿಗಾಗಿ ಹೊಸ ತಂತ್ರಜ್ಞಾನಗಳ ಆರ್ & ಡಿ ಮತ್ತು ಭಾರತ್ ಸ್ಮಾಲ್ ರಿಯಾಕ್ಟರ್‌ ಗಳನ್ನು ಸ್ಥಾಪಿಸಲು ಖಾಸಗಿ ವಲಯದೊಂದಿಗೆ ಸರ್ಕಾರದ ಪಾಲುದಾರಿಕೆ.

ಸುಧಾರಿತ ಅಲ್ಟ್ರಾ ಸೂಪರ್ ಕ್ರಿಟಿಕಲ್ ಥರ್ಮಲ್ ವಿದ್ಯುತ್‌ ಸ್ಥಾವರಗಳು

  • ಸುಧಾರಿತ ಅಲ್ಟ್ರಾ ಸೂಪರ್ ಕ್ರಿಟಿಕಲ್ (AUSC) ತಂತ್ರಜ್ಞಾನವನ್ನು ಬಳಸಿಕೊಂಡು ಪೂರ್ಣ ಪ್ರಮಾಣದ 800 MW ವಾಣಿಜ್ಯ ಸ್ಥಾವರವನ್ನು ಸ್ಥಾಪಿಸಲು NTPC ಮತ್ತು BHEL ನಡುವೆ ಜಂಟಿ ಉದ್ಯಮವನ್ನು ಪ್ರಸ್ತಾಪಿಸಲಾಗಿದೆ.

ಕೈಗಾರಿಕೆಗಳಿಗೆಹಾರ್ಡ್‌ ಟು ಅಬೇಟ್‌ʼ ಮಾರ್ಗಸೂಚಿ

  • ಪ್ರಸ್ತುತ 'ಪರ್ಫಾರ್ಮ್, ಅಚೀವ್ ಅಂಡ್ ಟ್ರೇಡ್' ಮೋಡ್‌ನಿಂದ 'ಇಂಡಿಯನ್ ಕಾರ್ಬನ್ ಮಾರ್ಕೆಟ್' ಮೋಡ್‌ಗೆ ‘ಹಾರ್ಡ್‌ ಟು ಅಬೇಟ್‌ʼ ಪರಿವರ್ತನೆಗಾಗಿ ಕೈಗಾರಿಕೆಗಳಿಗೆ ಸೂಕ್ತ ನಿಯಮಾವಳಿಗಳನ್ನು ಜಾರಿಗೆ ತರಲಾಗುವುದು.

ಆದ್ಯತೆ 7: ಮೂಲಸೌಕರ್ಯ

ಕೇಂದ್ರ ಸರ್ಕಾರದಿಂದ ಮೂಲಸೌಕರ್ಯ ಹೂಡಿಕೆ

  • ಬಂಡವಾಳ ವೆಚ್ಚಕ್ಕಾಗಿ 11,11,111 ಕೋಟಿ ರೂ.‌ (ಜಿಡಿಪಿಯ ಶೇ.3.4) ಒದಗಿಸಲಾಗುವುದು.

ರಾಜ್ಯ ಸರ್ಕಾರಗಳಿಂದ ಮೂಲಸೌಕರ್ಯ ಹೂಡಿಕೆ

  • ಮೂಲಸೌಕರ್ಯ ಹೂಡಿಕೆಯಲ್ಲಿ ರಾಜ್ಯಗಳನ್ನು ಬೆಂಬಲಿಸಲು ದೀರ್ಘಾವಧಿಯ ಬಡ್ಡಿ ರಹಿತ ಸಾಲಗಳಿಗೆ 1.5 ಲಕ್ಷ ಕೋಟಿ ರೂ. ಒದಗಿಸಲಾಗುವುದು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ ವೈ)

  • 25,000 ಗ್ರಾಮೀಣ ವಸತಿಗಳಿಗೆ ಸರ್ವಋತು ಸಂಪರ್ಕವನ್ನು ಒದಗಿಸಲು ಪಿಎಂಜಿಎಸ್‌ ವೈ ನ 5ನೇ ಹಂತದ ಪ್ರಾರಂಭ.

ನೀರಾವರಿ ಮತ್ತು ಪ್ರವಾಹ ತಗ್ಗಿಸುವಿಕೆ

  • ಕೋಸಿ-ಮೆಚಿ ನದಿಗಳ ಅಂತರ್-ರಾಜ್ಯ ಜೋಡಣೆ ಮತ್ತು ಬಿಹಾರದ ಇತರ ಯೋಜನೆಗಳಿಗೆ 11,500 ಕೋಟಿ ರೂ. ಆರ್ಥಿಕ ಬೆಂಬಲ.
  • ಪ್ರವಾಹ, ಭೂಕುಸಿತ ಮತ್ತು ಇತರ ಸಂಬಂಧಿತ ಯೋಜನೆಗಳಿಗೆ ಅಸ್ಸಾಂ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಸಿಕ್ಕಿಂಗಳಿಗೆ ನೆರವು.

ಪ್ರವಾಸೋದ್ಯಮ

  • ವಿಷ್ಣುಪಾದ ದೇವಾಲಯ ಕಾರಿಡಾರ್, ಮಹಾಬೋಧಿ ದೇವಾಲಯ ಕಾರಿಡಾರ್ ಮತ್ತು ರಾಜಗಿರ್‌ ನ ಸಮಗ್ರ ಅಭಿವೃದ್ಧಿ.
  • ದೇವಾಲಯಗಳು, ಸ್ಮಾರಕಗಳು, ಕರಕುಶಲತೆ, ವನ್ಯಜೀವಿ ಅಭಯಾರಣ್ಯಗಳು, ನೈಸರ್ಗಿಕ ಭೂದೃಶ್ಯಗಳು ಮತ್ತು ಒಡಿಶಾದ ಪ್ರಾಚೀನ ಕಡಲತೀರಗಳ ಅಭಿವೃದ್ಧಿಗೆ ನೆರವು.

ಆದ್ಯತೆ 8: ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ

  • ಮೂಲ ಸಂಶೋಧನೆ ಮತ್ತು ಮೂಲಮಾದರಿಯ ಅಭಿವೃದ್ಧಿಗಾಗಿ ಅನುಸಂಧಾನ್‌ ರಾಷ್ಟ್ರೀಯ ಸಂಶೋಧನಾ ನಿಧಿಯನ್ನು ಕಾರ್ಯಗತಗೊಳಿಸಲಾಗುವುದು.
  • ವಾಣಿಜ್ಯ ಮಟ್ಟದಲ್ಲಿ ಖಾಸಗಿ ವಲಯದ ಚಾಲಿತ ಸಂಶೋಧನೆ ಮತ್ತು ಆವಿಷ್ಕಾರವನ್ನು ಉತ್ತೇಜಿಸಲು 1 ಲಕ್ಷ ಕೋಟಿ ಹಣಕಾಸು.

ಬಾಹ್ಯಾಕಾಶ ಆರ್ಥಿಕತೆ

  • ಮುಂದಿನ 10 ವರ್ಷಗಳಲ್ಲಿ ಬಾಹ್ಯಾಕಾಶ ಆರ್ಥಿಕತೆಯನ್ನು 5 ಪಟ್ಟು ವಿಸ್ತರಿಸಲು 1,000 ಕೋಟಿ ರೂ.ಗಳ ವೆಂಚರ್‌ ಕ್ಯಾಪಿಟಲ್‌ ನಿಧಿಯನ್ನು ಸ್ಥಾಪಿಸಲಾಗುವುದು.

ಆದ್ಯತೆ 9: ಮುಂದಿನ ಪೀಳಿಗೆಯ ಸುಧಾರಣೆಗಳು

ಗ್ರಾಮೀಣ ಭೂಮಿ ಸಂಬಂಧಿತ ಕ್ರಮಗಳು

  • ಎಲ್ಲಾ ಭೂಮಿಗೆ ವಿಶಿಷ್ಟವಾದ ಭೂಮಿ ಗುರುತಿನ ಸಂಖ್ಯೆ (ULPIN) ಅಥವಾ ಭೂ-ಆಧಾರ್
  • ಕ್ಯಾಡಾಸ್ಟ್ರಲ್ ನಕ್ಷೆಗಳ ಡಿಜಿಟಲೀಕರಣ
  • ಪ್ರಸ್ತುತ ಮಾಲೀಕತ್ವದ ಪ್ರಕಾರ ನಕ್ಷೆ ಉಪ-ವಿಭಾಗಗಳ ಸಮೀಕ್ಷೆ
  • ಭೂ ನೋಂದಣಿ ಸ್ಥಾಪನೆ
  • ರೈತರ ನೋಂದಣಿಯೊಂದಿಗೆ ಲಿಂಕ್ ಮಾಡಲಾಗುತ್ತದೆ

ನಗರ ಭೂಮಿ ಸಂಬಂಧಿತ ಕ್ರಮಗಳು

  • ನಗರ ಪ್ರದೇಶಗಳಲ್ಲಿನ ಭೂ ದಾಖಲೆಗಳನ್ನು ಜಿಐಎಸ್ ಮ್ಯಾಪಿಂಗ್‌ ನೊಂದಿಗೆ ಡಿಜಿಟಲೀಕರಣಗೊಳಿಸಲಾಗುವುದು.

ಕಾರ್ಮಿಕರಿಗೆ ಸೇವೆಗಳು

  • ಒಂದು-ನಿಲುಗಡೆ ಪರಿಹಾರವನ್ನು ಸುಲಭಗೊಳಿಸಲು ಇತರ ಪೋರ್ಟಲ್‌ಗಳೊಂದಿಗೆ ಇ-ಶ್ರಮ್ ಪೋರ್ಟಲ್‌ನ ಏಕೀಕರಣ.
  • ವೇಗವಾಗಿ ಬದಲಾಗುತ್ತಿರುವ ಕಾರ್ಮಿಕ ಮಾರುಕಟ್ಟೆ, ಕೌಶಲ್ಯದ ಅವಶ್ಯಕತೆಗಳು ಮತ್ತು ಲಭ್ಯವಿರುವ ಉದ್ಯೋಗದ ಪಾತ್ರಗಳಿಗಾಗಿ ಆರ್ಕಿಟೆಕ್ಚರ್ ಡೇಟಾಬೇಸ್‌ ಗಳನ್ನು ತೆರೆಯಲಾಗುವುದು.
  • ಸಂಭಾವ್ಯ ಉದ್ಯೋಗದಾತರು ಮತ್ತು ಕೌಶಲ್ಯ ಪೂರೈಕೆದಾರರೊಂದಿಗೆ ಉದ್ಯೋಗ-ಆಕಾಂಕ್ಷಿಗಳನ್ನು ಸಂಪರ್ಕಿಸುವ ಕಾರ್ಯವಿಧಾನ.

ಎನ್‌ ಪಿ ಎಸ್‌ ವಾತ್ಸಲ್ಯ

  • ಅಪ್ರಾಪ್ತ ವಯಸ್ಕರಿಗೆ ಪೋಷಕರು ಮತ್ತು ಪಾಲಕರ ಕೊಡುಗೆಗಾಗಿ ಎನ್‌ ಪಿ ಎಸ್‌ -ವಾತ್ಸಲ್ಯ ಯೋಜನೆ.

 

ಭಾಗ ಬಿ

ಪರೋಕ್ಷ ತೆರಿಗೆಗಳು

ಜಿ ಎಸ್‌ ಟಿ

  • ಜಿ ಎಸ್‌ ಟಿ ಯಶಸ್ಸಿನಿಂದ ಉತ್ತೇಜಿತರಾಗಿ, ಉಳಿದ ವಲಯಗಳಿಗೆ ಜಿ ಎಸ್‌ ಟಿ ಯನ್ನು ವಿಸ್ತರಿಸಲು ತೆರಿಗೆ ರಚನೆಯನ್ನು ಸರಳಗೊಳಿಸಲಾಗುವುದು ಮತ್ತು ತರ್ಕಬದ್ಧಗೊಳಿಸಲಾಗುವುದು.

ವಲಯ ನಿರ್ದಿಷ್ಟ ಕಸ್ಟಮ್ಸ್ ಸುಂಕ ಪ್ರಸ್ತಾವನೆಗಳು

ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳು

  • ಮೂರು ಕ್ಯಾನ್ಸರ್ ಔಷಧಿಗಳಾದ TrastuzumabDeruxtecan, Osimertinib ಮತ್ತು Durvalumab ಕಸ್ಟಮ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ.
  • ಹಂತ ಹಂತದ ಉತ್ಪಾದನಾ ಕಾರ್ಯಕ್ರಮದ ಅಡಿಯಲ್ಲಿ ವೈದ್ಯಕೀಯ ಕ್ಷ-ಕಿರಣ ಯಂತ್ರಗಳಲ್ಲಿ ಬಳಸಲು ಎಕ್ಸ್-ರೇ ಟ್ಯೂಬ್‌ ಗಳು ಮತ್ತು ಫ್ಲಾಟ್ ಪ್ಯಾನೆಲ್ ಡಿಟೆಕ್ಟರ್‌ ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕದಲ್ಲಿ (BCD) ಬದಲಾವಣೆಗಳು.

ಮೊಬೈಲ್ ಫೋನ್ ಮತ್ತು ಸಂಬಂಧಿತ ಭಾಗಗಳು

  • ಮೊಬೈಲ್ ಫೋನ್‌, ಮೊಬೈಲ್ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಅಸೆಂಬ್ಲಿ (ಪಿಸಿಬಿಎ) ಮತ್ತು ಮೊಬೈಲ್ ಚಾರ್ಜರ್ ಬಿಸಿಡಿಯನ್ನು ಶೇಕಡಾ 15 ಕ್ಕೆ ಇಳಿಸಲಾಗಿದೆ.

ಅಮೂಲ್ಯ ಲೋಹಗಳು

  • ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 6 ಕ್ಕೆ ಮತ್ತು ಪ್ಲಾಟಿನಂ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 6.4 ಕ್ಕೆ ಇಳಿಸಲಾಗಿದೆ.

ಇತರೆ ಲೋಹಗಳು

  • ಫೆರೋ ನಿಕಲ್ ಮತ್ತು ಬ್ಲಿಸ್ಟರ್ ತಾಮ್ರದ ಮೇಲೆ ಬಿಸಿಡಿ ತೆಗೆಯಲಾಗಿದೆ.
  • ಫೆರಸ್ ಸ್ಕ್ರ್ಯಾಪ್ ಮತ್ತು ನಿಕಲ್ ಕ್ಯಾಥೋಡ್‌ನಲ್ಲಿ ಬಿಸಿಡಿ ತೆಗೆದುಹಾಕಲಾಗಿದೆ.
  • ತಾಮ್ರದ ಸ್ಕ್ರ್ಯಾಪ್ ಮೇಲೆ 2.5 ಶೇಕಡಾ ಬಿಸಿಡಿ ರಿಯಾಯಿತಿ.

ಎಲೆಕ್ಟ್ರಾನಿಕ್ಸ್

  • ಪ್ರತಿರೋಧಕಗಳ ತಯಾರಿಕೆಗಾಗಿ ಆಮ್ಲಜನಕ ಮುಕ್ತ ತಾಮ್ರದ ಮೇಲೆ ಷರತ್ತುಗಳಿಗೆ ಒಳಪಟ್ಟು ಬಿಸಿಡಿಯಅನ್ನು ತೆಗೆದುಹಾಕಲಾಗಿದೆ.

ರಾಸಾಯನಿಕಗಳು ಮತ್ತು ಪೆಟ್ರೋಕೆಮಿಕಲ್ಸ್

  • ಅಮೋನಿಯಂ ನೈಟ್ರೇಟ್ ಮೇಲಿನ ಬಿಸಿಡಿ ಶೇಕಡಾ 7.5 ರಿಂದ 10 ಕ್ಕೆ ಏರಿಸಲಾಗಿದೆ.

ಪ್ಲಾಸ್ಟಿಕ್ಸ್

  • ಪಿವಿಸಿ ಫ್ಲೆಕ್ಸ್ ಬ್ಯಾನರ್‌ ಗಳ ಮೇಲಿನ ಬಿಸಿಡಿ ಶೇಕಡಾ 10 ರಿಂದ 25 ಕ್ಕೆ ಏರಿದೆ.

ದೂರಸಂಪರ್ಕ ಸಲಕರಣೆ

  • PCBA ನಿರ್ದಿಷ್ಟಪಡಿಸಿದ ಟೆಲಿಕಾಂ ಉಪಕರಣಗಳಲ್ಲಿ ಬಿಸಿಡಿ 10 ರಿಂದ 15 ರಷ್ಟು ಹೆಚ್ಚಾಗಿದೆ.

ವ್ಯಾಪಾರ ಅನುಕೂಲ

  • ದೇಶೀಯ ವಾಯುಯಾನ ಮತ್ತು ದೋಣಿ ಮತ್ತು ಹಡಗು MRO ಉತ್ತೇಜನಕ್ಕಾಗಿ, ರಿಪೇರಿಗಾಗಿ ಆಮದು ಮಾಡಿದ ಸರಕುಗಳ ರಫ್ತು ಅವಧಿಯನ್ನು ಆರು ತಿಂಗಳಿಂದ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ.
  • ವಾರಂಟಿ ಅಡಿಯಲ್ಲಿ ರಿಪೇರಿಗಾಗಿ ಸರಕುಗಳನ್ನು ಮರು-ಆಮದು ಮಾಡಿಕೊಳ್ಳಲು ಸಮಯ-ಮಿತಿಯನ್ನು ಮೂರರಿಂದ ಐದು ವರ್ಷಗಳವರೆಗೆ ವಿಸ್ತರಿಸಲಾಗಿದೆ.

ನಿರ್ಣಾಯಕ ಖನಿಜಗಳು

  • 25 ನಿರ್ಣಾಯಕ ಖನಿಜಗಳಿಗೆ ಕಸ್ಟಮ್ಸ್ ಸುಂಕಗಳಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ.
  • ಎರಡು ನಿರ್ಣಾಯಕ ಖನಿಜಗಳ ಮೇಲೆ ಬಿಸಿಡಿ ಕಡಿಮೆಯಾಗಿದೆ.

ಸೌರಶಕ್ತಿ

  • ಸೌರ ಕೋಶಗಳು ಮತ್ತು ಪ್ಯಾನೆಲ್‌ ಗಳ ತಯಾರಿಕೆಯಲ್ಲಿ ಬಳಸುವ ಬಂಡವಾಳ ಸರಕುಗಳನ್ನು ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ.

ಸಾಗರ ಉತ್ಪನ್ನಗಳು

  • ಕೆಲವು ಬ್ರೂಡ್‌ ಸ್ಟಾಕ್‌, ಪಾಲಿಚೈಟ್ ಹುಳುಗಳು, ಸೀಗಡಿ ಮತ್ತು ಮೀನಿನ ಆಹಾರದ ಮೇಲಿನ ಬಿಸಿಡಿಯನ್ನು ಶೇಕಡಾ 5 ಕ್ಕೆ ಇಳಿಸಲಾಗಿದೆ.
  • ಸೀಗಡಿ ಮತ್ತು ಮೀನಿನ ಆಹಾರ ತಯಾರಿಕೆಗೆ ಬಳಸುವ ವಿವಿಧ ಒಳಹರಿವುಗಳನ್ನು ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ.

ಚರ್ಮ ಮತ್ತು ಜವಳಿ

  • ಬಾತುಕೋಳಿ ಅಥವಾ ಹೆಬ್ಬಾತುಗಳಿಂದ ರಿಯಲ್ ಡೌನ್ ಫಿಲ್ಲಿಂಗ್ ವಸ್ತುಗಳ ಮೇಲೆ ಬಿಸಿಡಿ ಕಡಿಮೆ ಮಾಡಲಾಗಿದೆ.
  • 7.5 ರಿಂದ 5 ರಷ್ಟು ಸ್ಪ್ಯಾಂಡೆಕ್ಸ್ ನೂಲು ತಯಾರಿಕೆಗಾಗಿ ಮೀಥಿಲೀನ್ ಡೈಫಿನೈಲ್ ಡೈಸೊಸೈನೇಟ್ (MDI) ಮೇಲೆ ಷರತ್ತುಗಳಿಗೆ ಒಳಪಟ್ಟು ಬಿಸಿಡಿ ಕಡಿಮೆಯಾಗಿದೆ.

 

ನೇರ ತೆರಿಗೆಗಳು

  • ತೆರಿಗೆಗಳನ್ನು ಸರಳೀಕರಿಸಲು, ತೆರಿಗೆ ಪಾವತಿದಾರರ ಸೇವೆಗಳನ್ನು ಸುಧಾರಿಸಲು, ತೆರಿಗೆ ನಿಶ್ಚಿತತೆಯನ್ನು ಒದಗಿಸಲು ಮತ್ತು ವ್ಯಾಜ್ಯಗಳನ್ನು ಕಡಿಮೆ ಮಾಡಲು ಪ್ರಯತ್ನಗಳು ಮುಂದುವರೆಯುತ್ತವೆ.
  • ಸರ್ಕಾರದ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳಿಗೆ ಧನಸಹಾಯಕ್ಕಾಗಿ ಆದಾಯವನ್ನು ಹೆಚ್ಚಿಸಲಾಗುವುದು.
  • 2023ನೇ ಹಣಕಾಸು ವರ್ಷದಲ್ಲಿ ಸರಳೀಕೃತ ತೆರಿಗೆ ಪದ್ಧತಿಯಿಂದ ಶೇ. 58 ರಷ್ಟು ಕಾರ್ಪೊರೇಟ್ ತೆರಿಗೆ, ಮೂರನೇ ಎರಡರಷ್ಟು ತೆರಿಗೆದಾರರು 2024 ರಲ್ಲಿ ವೈಯಕ್ತಿಕ ಆದಾಯ ತೆರಿಗೆಗಾಗಿ ಸರಳೀಕೃತ ತೆರಿಗೆ ಪದ್ಧತಿಯನ್ನು ಪಡೆದರು.

ಚಾರಿಟಿಗಳು ಮತ್ತು ಟಿಡಿಎಸ್‌ ಗಾಗಿ ಸರಳೀಕರಣ

  • ಚಾರಿಟಿಗಳಿಗೆ ಎರಡು ತೆರಿಗೆ ವಿನಾಯಿತಿ ನಿಯಮಗಳು ಒಂದರಲ್ಲಿ ವಿಲೀನಗೊಳ್ಳುತ್ತವೆ.
  • ಅನೇಕ ಪಾವತಿಗಳ ಮೇಲೆ 5 ಶೇಕಡಾ ಟಿಡಿಎಸ್ ದರವು 2 ಶೇಕಡಾ ಟಿಡಿಎಸ್ ದರದೊಂದಿಗೆ ವಿಲೀನಗೊಂಡಿದೆ.
  • ಮ್ಯೂಚುವಲ್ ಫಂಡ್‌ ಗಳಿಂದ ಯೂನಿಟ್‌ ಗಳ ಮರುಖರೀದಿ ಅಥವಾ ಯುಟಿಐ ಹಿಂತೆಗೆದುಕೊಂಡ ಮೇಲೆ 20 ಪ್ರತಿಶತ ಟಿಡಿಎಸ್ ದರ.
  • ಇ-ಕಾಮರ್ಸ್ ಆಪರೇಟರ್‌‌ ಗಳ ಮೇಲಿನ ಟಿಡಿಎಸ್ ದರವನ್ನು ಒಂದರಿಂದ 0.1 ಪ್ರತಿಶತಕ್ಕೆ ಇಳಿಸಲಾಗಿದೆ.
  • ಸ್ಟೇಟ್‌ಮೆಂಟ್ ಸಲ್ಲಿಸುವ ಕೊನೆಯ ದಿನಾಂಕದವರೆಗೆ ಟಿಡಿಎಸ್ ಪಾವತಿಗೆ ವಿಳಂಬವನ್ನು ನಿರಪರಾಧೀಕರಣಗೊಳಿಸಲಾಗಿದೆ.

ಮರುಮೌಲ್ಯಮಾಪನದ ಸರಳೀಕರಣ

  • ತಪ್ಪಿಸಿಕೊಂಡ ಆದಾಯ 50 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿದ್ದರೆ ಮಾತ್ರ ಮೌಲ್ಯಮಾಪನ ವರ್ಷದ ಅಂತ್ಯದಿಂದ ಐದು ವರ್ಷಗಳವರೆಗೆ ಮೂರು ವರ್ಷಗಳ ನಂತರ ಮರುಮಾಪನವನ್ನು ತೆರೆಯಬಹುದು.
  • ಶೋಧ ಪ್ರಕರಣಗಳಲ್ಲಿ, ಶೋಧ ವರ್ಷಕ್ಕಿಂತ ಮೊದಲು ಹತ್ತರಿಂದ ಆರು ವರ್ಷಗಳವರೆಗೆ ಸಮಯದ ಮಿತಿಯನ್ನು ಕಡಿಮೆ ಮಾಡಲಾಗಿದೆ.

ಬಂಡವಾಳ ಲಾಭಗಳ ಸರಳೀಕರಣ ಮತ್ತು ತರ್ಕಬದ್ಧಗೊಳಿಸುವಿಕೆ

  • ಕೆಲವು ಹಣಕಾಸಿನ ಸ್ವತ್ತುಗಳ ಅಲ್ಪಾವಧಿಯ ಲಾಭಗಳ ಮೇಲೆ 20 ರಷ್ಟು ತೆರಿಗೆ ದರ.
  • ಎಲ್ಲಾ ಹಣಕಾಸು ಮತ್ತು ಹಣಕಾಸೇತರ ಆಸ್ತಿಗಳ ದೀರ್ಘಾವಧಿಯ ಲಾಭಗಳ ಮೇಲೆ 12.5 ರಷ್ಟು ತೆರಿಗೆ ದರ.
  • ಕೆಲವು ಹಣಕಾಸು ಸ್ವತ್ತುಗಳ ಮೇಲಿನ ಬಂಡವಾಳ ಲಾಭದ ವಿನಾಯಿತಿ ಮಿತಿಯನ್ನು ವರ್ಷಕ್ಕೆ 1.25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ತೆರಿಗೆ ಪಾವತಿದಾರರ ಸೇವೆಗಳು

  • ಸರಿಪಡಿಸುವ ಪ್ರಕ್ರಿಯೆ ಮತ್ತು ಮೇಲ್ಮನವಿ ಆದೇಶಗಳಿಗೆ ತಿದ್ದುಪಡಿ ಮತ್ತು ಆದೇಶಗಳು ಸೇರಿದಂತೆ ಕಸ್ಟಮ್ಸ್ ಮತ್ತು ಆದಾಯ ತೆರಿಗೆಯ ಎಲ್ಲಾ ಉಳಿದ ಸೇವೆಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಡಿಜಿಟಲೀಕರಣಗೊಳಿಸಲಾಗುವುದು.

ದಾವೆ ಮತ್ತು ಮೇಲ್ಮನವಿಗಳು

  • ಮೇಲ್ಮನವಿಯಲ್ಲಿ ಬಾಕಿ ಉಳಿದಿರುವ ಆದಾಯ ತೆರಿಗೆ ವಿವಾದಗಳ ಪರಿಹಾರಕ್ಕಾಗಿ 'ವಿವಾದ್ ಸೇ ವಿಶ್ವಾಸ್ ಯೋಜನೆ, 2024'.
  • ತೆರಿಗೆ ನ್ಯಾಯಮಂಡಳಿಗಳು, ಹೈಕೋರ್ಟ್‌ ಗಳು ಮತ್ತು ಸುಪ್ರೀಂ ಕೋರ್ಟ್‌ ಗಳಲ್ಲಿ ನೇರ ತೆರಿಗೆಗಳು, ಅಬಕಾರಿ ಮತ್ತು ಸೇವಾ ತೆರಿಗೆ ಸಂಬಂಧಿತ ಮೇಲ್ಮನವಿಗಳನ್ನು ಸಲ್ಲಿಸುವ ವಿತ್ತೀಯ ಮಿತಿಗಳು ಕ್ರಮವಾಗಿ 60 ಲಕ್ಷ, 2 ಕೋಟಿ ಮತ್ತು 5 ಕೋಟಿ ರೂ.ಗೆ ಏರಿಕೆಯಾಗಿದೆ.
  • ದಾವೆಗಳನ್ನು ಕಡಿಮೆ ಮಾಡಲು ಮತ್ತು ಅಂತಾರಾಷ್ಟ್ರೀಯ ತೆರಿಗೆಯಲ್ಲಿ ಖಚಿತತೆಯನ್ನು ಒದಗಿಸಲು ಸುರಕ್ಷಿತ ಬಂದರು ನಿಯಮಗಳನ್ನು ವಿಸ್ತರಿಸಲಾಗಿದೆ.

ಉದ್ಯೋಗ ಮತ್ತು ಹೂಡಿಕೆ

  • ಸ್ಟಾರ್ಟ್-ಅಪ್ ಪೂರಕ ವ್ಯವಸ್ಥೆಯನ್ನು ಉತ್ತೇಜಿಸಲು ಎಲ್ಲಾ ವರ್ಗದ ಹೂಡಿಕೆದಾರರಿಗೆ ಏಂಜೆಲ್ ತೆರಿಗೆಯನ್ನು ರದ್ದುಗೊಳಿಸಲಾಗಿದೆ.
  • ಭಾರತದಲ್ಲಿ ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸಲು ದೇಶೀಯ ಕ್ರೂಸ್‌ ಗಳನ್ನು ನಿರ್ವಹಿಸುವ ವಿದೇಶಿ ಹಡಗು ಕಂಪನಿಗಳಿಗೆ ಸರಳವಾದ ತೆರಿಗೆ ವ್ಯವಸ್ಥೆ.
  • ದೇಶದಲ್ಲಿ ಕಚ್ಚಾ ವಜ್ರಗಳನ್ನು ಮಾರಾಟ ಮಾಡುವ ವಿದೇಶಿ ಗಣಿಗಾರಿಕೆ ಕಂಪನಿಗಳಿಗೆ ಸುರಕ್ಷಿತ ಬಂದರು ದರಗಳು.
  • ವಿದೇಶಿ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆ ದರವನ್ನು ಶೇ.40 ರಿಂದ 35 ಕ್ಕೆ ಇಳಿಸಲಾಗಿದೆ.

ತೆರಿಗೆ ಮೂಲವನ್ನು ಆಳಗೊಳಿಸುವುದು

  • ಫ್ಯೂಚರ್ಸ್ ಅಂಡ್ ಸೆಕ್ಯುರಿಟೀಸ್‌ ಆಯ್ಕೆಗಳ ಮೇಲಿನ ಸೆಕ್ಯುರಿಟಿ ವಹಿವಾಟು ತೆರಿಗೆಯನ್ನು ಕ್ರಮವಾಗಿ ಶೇಕಡಾ 0.02 ಮತ್ತು 0.1 ಶೇಕಡಾಕ್ಕೆ ಹೆಚ್ಚಿಸಲಾಗಿದೆ.
  • ಷೇರುಗಳ ಮರುಖರೀದಿಯಲ್ಲಿ ಸ್ವೀಕರಿಸುವವರ ಪಡೆದ ಆದಾಯವನ್ನು ತೆರಿಗೆಗೆ ಒಳಪಡಿಸಬೇಕು.

ಸಾಮಾಜಿಕ ಭದ್ರತೆ ಪ್ರಯೋಜನಗಳು

  • ಉದ್ಯೋಗದಾತರು ಎನ್‌ ಪಿ ಎಸ್‌ ಗೆ ವೆಚ್ಚ ಮಾಡುವ ಕಡಿತವನ್ನು ಉದ್ಯೋಗಿಯ ವೇತನದ 10 ರಿಂದ 14 ಪ್ರತಿಶತಕ್ಕೆ ಹೆಚ್ಚಿಸಬೇಕು.
  • 20 ಲಕ್ಷ ರೂ.ವರೆಗಿನ ಸಣ್ಣ ಚರ ವಿದೇಶಿ ಆಸ್ತಿಗಳ ವರದಿ ಮಾಡದಿರುವುದು ದಂಡರಹಿತವಾಗಿದೆ.

ಹಣಕಾಸು ಮಸೂದೆಯಲ್ಲಿನ ಇತರ ಪ್ರಮುಖ ಪ್ರಸ್ತಾವನೆ

  • 2 ರಷ್ಟು ಸಮೀಕರಣ ಶುಲ್ಕವನ್ನು ಹಿಂಪಡೆಯಲಾಗಿದೆ.

ಹೊಸ ತೆರಿಗೆ ಪದ್ಧತಿಯಲ್ಲಿ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಬದಲಾವಣೆಗಳು

  • ಸಂಬಳ ಪಡೆಯುವ ಉದ್ಯೋಗಿಗಳಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ 50,000 ರಿಂದ 75,000 ರೂ.ಗಳಿಗೆ ಏರಿಕೆಯಾಗಿದೆ.
  • ಪಿಂಚಣಿದಾರರಿಗೆ ಕುಟುಂಬ ಪಿಂಚಣಿ ಮೇಲಿನ ಕಡಿತವನ್ನು 15,000 ದಿಂದ 25,000 ರೂ.ಗಳಿಗೆ ಹೆಚ್ಚಿಸಲಾಗಿದೆ
  • ಪರಿಷ್ಕೃತ ತೆರಿಗೆ ದರ ರಚನೆ:

0-3 ಲಕ್ಷ ರೂ

ಶೂನ್ಯ

3-7 ಲಕ್ಷ ರೂ

5 ಶೇ

7-10 ಲಕ್ಷ ರೂ

10 ಶೇ

10-12 ಲಕ್ಷ ರೂ

15 ಶೇ

12-15 ಲಕ್ಷ ರೂ

20 ಶೇ

15 ಲಕ್ಷ ರೂ. ಮೇಲ್ಪಟ್ಟು

30 ಶೇ

ಹೊಸ ತೆರಿಗೆ ಪದ್ಧತಿಯಲ್ಲಿ ಸಂಬಳ ಪಡೆಯುವ ಉದ್ಯೋಗಿಯು ಆದಾಯ ತೆರಿಗೆಯಲ್ಲಿ 17,500 ರೂ.ವರೆಗೆ ಉಳಿಸುತ್ತಾನೆ.

 

*****

 

 

 

 

 



(Release ID: 2035844) Visitor Counter : 66