ಪ್ರಧಾನ ಮಂತ್ರಿಯವರ ಕಛೇರಿ

ಯೂರೋಪಿಯನ್ ಕಮೀಷನ್ ಅಧ್ಯಕ್ಷರಾದ ಉರ್ಸುಲಾ ವಾನ್ ಡೇರ್ ಲೇಯನ್ ಅವರು ಪುನರಾಯ್ಕೆಯಾದ ಭಾರತದ ಪ್ರಧಾನಮಂತ್ರಿಯವರನ್ನು ಅಭಿನಂದಿಸಿದ್ದಾರೆ


ಜಾಗತಿಕ ಒಳಿತಿಗಾಗಿ ಭಾರತ – ಯೂರೋಪ್ ಒಕ್ಕೂಟದ ಕಾರ್ಯತಂತ್ರ ಸಹಭಾಗಿತ್ವವನ್ನು ಮತ್ತಷ್ಟು ಬಲವರ್ಧನೆ ಮಾಡುವ ತಮ್ಮ ಬದ್ಧತೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುನರುಚ್ಚರಿಸಿದ್ದಾರೆ 

ಯೂರೋಪ್ ನಲ್ಲಿ ಸಂಸದೀಯ ಚುನಾವಣೆಗಳಿಗಾಗಿ ಪ್ರಧಾನಮಂತ್ರಿಯವರು ಶುಭ ಹಾರೈಸಿದ್ದಾರೆ

Posted On: 06 JUN 2024 2:16PM by PIB Bengaluru

ಯೂರೋಪಿಯನ್ ಕಮೀಷನ್ ಅಧ್ಯಕ್ಷರಾದ ಉರ್ಸುಲಾ ವಾನ್ ಡೇರ್ ಲೇಯನ್ ಅವರಿಂದ ಪುನರಾಯ್ಕೆಯಾದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರು ಇಂದು ಅಭಿನಂದನಾ ಕರೆ ಸ್ವೀಕರಿಸಿದರು.  

ಸಾಮಾನ್ಯ ಸಾರ್ವತ್ರಿಕ ಚುನಾವಣೆಯಲ್ಲಿ ಯಶಸ್ವಿಯಾದ ಮತ್ತು ಐತಿಹಾಸಿಕ ಮೂರನೇ ಅವಧಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದರು. ಭಾರತದ ಪ್ರಜಾತಂತ್ರ ವ್ಯವಸ್ಥೆ ಮತ್ತು ಜಗತ್ತಿನ ಅತಿ ದೊಡ್ಡ ಚುನಾವಣೆಗಳನ್ನು ನಡೆಸಿದ ಹಿನ್ನೆಲೆಯಲ್ಲಿ ಅವರು ತೀವ್ರ ಅಭಿನಂದನೆ ಸಲ್ಲಿಸಿದರು.  

ಅಧ್ಯಕ್ಷರಾದ ಉರ್ಸುಲಾ ವಾನ್ ಡೇರ್ ಲೇಯನ್ ಅವರಿಗೆ ಪ್ರಧಾನಮಂತ್ರಿಯವರು ಕೃತಜ್ಞತೆ ಸಲ್ಲಿಸಿದರು ಮತ್ತು ಭಾರತ – ಐರೋಪ್ಯ ಒಕ್ಕೂಟದ ಬಾಂಧವ್ಯ ಬಲವರ್ಧನೆ ಮತ್ತು ಹಂಚಿಕೆಯ ಮೌಲ್ಯಗಳು ಹಾಗೂ ತತ್ವಗಳನ್ನು ಪರಿಪಾಲಿಸುವುದಾಗಿ ಒತ್ತಿ ಹೇಳಿದರು. 

ಈ ವರ್ಷ ಭಾರತ – ಯೂರೋಪ್ ಒಕ್ಕೂಟದ ಕಾರ್ಯತಂತ್ರ ಸಹಭಾಗಿತ್ವದ 20 ನೇ ವಾರ್ಷಿಕೋತ್ಸದ ವಿಶೇಷತೆಯನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಜಾಗತಿಕ ಒಳಿತಿಗಾಗಿ ಸಹಭಾಗಿತ್ವವನ್ನು ಮತ್ತಷ್ಟು ಬಲಗೊಳಿಸುವುದಾಗಿ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.  

ಯೂರೋಪಿನ ಸಂಸದೀಯ ಚುನಾವಣಾ ಪ್ರಕ್ರಿಯೆ ಇಂದಿನಿಂದ ಆರಂಭವಾಗುತ್ತಿದ್ದು, ಇದಕ್ಕೆ ಪ್ರಧಾನಮಂತ್ರಿಯವರು ಶುಭ ಹಾರೈಸಿದರು.
 



(Release ID: 2023378) Visitor Counter : 24