ಪ್ರಧಾನ ಮಂತ್ರಿಯವರ ಕಛೇರಿ

​​​​​​​ಜನ ನಾಯಕ ಕರ್ಪೂರಿ ಠಾಕೂರ್ ಅವರ ಜನ್ಮ ಶತಮಾನೋತ್ಸವದಂದು ಪ್ರಧಾನಮಂತ್ರಿಯವರ  ನಮನ


​​​​​​​ಸಮಾಜ ಮತ್ತು ರಾಜ್ಯಾಡಳಿತದ ಮೇಲೆ ಕರ್ಪೂರಿ ಠಾಕೂರ್ ಅವರ ಅಪ್ರತಿಮ ಪ್ರಭಾವದ ಕುರಿತು ಪ್ರಧಾನಮಂತ್ರಿಯವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ

Posted On: 24 JAN 2024 9:22AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಜನ ನಾಯಕ ಕರ್ಪೂರಿ ಠಾಕೂರ್ ಅವರ ಜನ್ಮಶತಮಾನೋತ್ಸವದಂದು ಅವರಿಗೆ ಗೌರವ ಸಲ್ಲಿಸಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡಿ ಗೌರವಿಸುವ ಸೌಭಾಗ್ಯ ನಮ್ಮ ಸರ್ಕಾರಕ್ಕೆ ಬಂದಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಸಮಾಜ ಮತ್ತು ರಾಜ್ಯಾಡಳಿತದ ಮೇಲೆ ಕರ್ಪೂರಿ ಠಾಕೂರ್ ಅವರ ಅಪ್ರತಿಮ ಪ್ರಭಾವದ ಕುರಿತು ಶ್ರೀ ಮೋದಿ ಅವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನಮಂತ್ರಿಯವರು ಹೀಗೆ ಬರೆದಿದ್ದಾರೆ ;

“ಜನ ನಾಯಕ ಕರ್ಪೂರಿ ಠಾಕೂರ್ ಜೀ ಅವರ ಜನ್ಮಶತಮಾನೋತ್ಸವದಂದು ಅವರಿಗೆ ನನ್ನ ನಮನಗಳು. ಈ ವಿಶೇಷ ಸಂದರ್ಭದಲ್ಲಿ ಅವರಿಗೆ ಭಾರತ ರತ್ನ ನೀಡಿ ಗೌರವಿಸುವ ಸೌಭಾಗ್ಯ  ನಮ್ಮ ಸರ್ಕಾರಕ್ಕೆ ಬಂದಿದೆ. ನಮ್ಮ ಸಮಾಜ ಮತ್ತು ರಾಜ್ಯಾಡಳಿತದ ಮೇಲಿರುವ ಅವರ ಅಪ್ರತಿಮ ಪ್ರಭಾವದ ಕುರಿತು ನಾನು ಕೆಲವು ಆಲೋಚನೆಗಳನ್ನು ಹಂಚಿಕೊಂಡಿದ್ದೇನೆ.”

“देशभर के मेरे परिवारजनों की ओर से जननायक कर्पूरी ठाकुर जी को उनकी जन्म-शताब्दी पर मेरी आदरपूर्ण श्रद्धांजलि। इस विशेष अवसर पर हमारी सरकार को उन्हें भारत रत्न से सम्मानित करने का सौभाग्य प्राप्त हुआ है। भारतीय समाज और राजनीति पर उन्होंने जो अविस्मरणीय छाप छोड़ी है, उसे लेकर मैं अपनी भावनाओं और विचारों को आपके साथ साझा कर रहा हूं…https://nm-4.com/vLEoBk” 

*********



(Release ID: 1999087) Visitor Counter : 45