ಪ್ರಧಾನ ಮಂತ್ರಿಯವರ ಕಛೇರಿ

​​​​​​​ಕೇರಳದ ತ್ರಿಪ್ರಯಾರ್ ನಲ್ಲಿರುವ ಶ್ರೀ ರಾಮಸ್ವಾಮಿ ದೇವಸ್ಥಾನದಲ್ಲಿ ದೇವರ  ದರ್ಶನಗೈದು  ಪೂಜೆ ಸಲ್ಲಿಸಿದ ಪ್ರಧಾನ ಮಂತ್ರಿ

Posted On: 17 JAN 2024 5:44PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇರಳದ ತ್ರಿಪ್ರಯಾರ್ ನಲ್ಲಿರುವ ಶ್ರೀ ರಾಮಸ್ವಾಮಿ ದೇವಸ್ಥಾನದಲ್ಲಿ ದೇವರ ದರ್ಶನಗೈದು  ಪೂಜೆ ನೆರವೇರಿಸಿದರು. ಶ್ರೀ ಮೋದಿ ಅವರು ಸಾಂಸ್ಕೃತಿಕ ಪ್ರದರ್ಶನಕ್ಕೆ ಸಾಕ್ಷಿಯಾದರು ಮತ್ತು ಕಲಾವಿದರು ಹಾಗು ವೈದಿಕರನ್ನು (ಬಟುಕ್)  ಸನ್ಮಾನಿಸಿದರು.

ಪ್ರಧಾನಮಂತ್ರಿಯವರು X ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ:

"ತ್ರಿಪ್ರಯಾರ್ ಶ್ರೀ ರಾಮಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥಿಸಿದೆ. ಮಲಯಾಳಂನಲ್ಲಿ ಶ್ರೀ ಅಧ್ಯಾತ್ಮ ರಾಮಾಯಣ ಶ್ಲೋಕಗಳನ್ನು ಮತ್ತು ಇತರ ಭಜನೆಗಳನ್ನು  ಕೇಳುವುದು ಬಹಳ ವಿಶೇಷವಾಗಿತ್ತು" ಎಂದವರು ಅದರಲ್ಲಿ ಹೇಳಿದ್ದಾರೆ.

***



(Release ID: 1997144) Visitor Counter : 59