ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಸ್ವನಿಧಿಯೋಜನೆಯ ಪರಿವರ್ತನಾ ಪ್ರಭಾವವನ್ನು ದೃಢೀಕರಿಸಿದ ಪ್ರಧಾನಮಂತ್ರಿ 

Posted On: 24 OCT 2023 7:19PM by PIB Bengaluru

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸುದೀರ್ಘ ಸಂಶೋಧನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡಿದ್ದಾರೆ. ಈ ಸಂಶೋಧನಾ ವರದಿಯು ಪ್ರಧಾನಮಂತ್ರಿ ಸ್ವನಿಧಿಯೋಜನೆಯ ಪರಿವರ್ತನಾ ಪ್ರಭಾವದ ಸ್ಪಷ್ಟ ಚಿತ್ರಣವನ್ನು ಒದಗಿಸುತ್ತದೆ.

ಎಸ್‌.ಬಿ.ಐ.ನ ಗ್ರೂಪ್‌ ನ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯ ಕಾಂತಿ ಘೋಷ್ ನಡೆಸಿದ ಸಂಶೋಧನೆಯು ಈ ಯೋಜನೆಯ ಅಂತರ್ಗತ ಸ್ವರೂಪವನ್ನು ಮತ್ತು ಯೋಜನೆಯು ಹೇಗೆ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದೆ ಎಂಬುದನ್ನು ವಿವರಿಸುತ್ತದೆ.

 ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:

 "ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸೌಮ್ಯ ಕಾಂತಿ ಘೋಷ್ ಅವರ ಈ ಆಳವಾದ ಸಂಶೋಧನೆಯು ಪಿಎಂ ಸ್ವನಿಧಿ ಯೋಜನೆಯ ಪರಿವರ್ತಕ ಪ್ರಭಾವದ ಸ್ಪಷ್ಟವಾದ ಚಿತ್ರಣವನ್ನು ಒದಗಿಸುತ್ತದೆ. 

ವರದಿಯು ಈ ಯೋಜನೆಯ ಅಂತರ್ಗತ ಸ್ವರೂಪವನ್ನು ಮತ್ತು ಯೋಜನೆಯು ಹೇಗೆ ಆರ್ಥಿಕ ಸಬಲೀಕರಣಕ್ಕೆ ಕಾರಣವಾಯಿತು ಎಂಬುದನ್ನು ವಿವರಿಸುತ್ತದೆ."
 



(Release ID: 1970546) Visitor Counter : 74