ಪ್ರಧಾನ ಮಂತ್ರಿಯವರ ಕಛೇರಿ

​​​​​​​ಕಾಂಪೌಂಡ್‌ ವಿಭಾಗದ ಆರ್ಚರಿ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಮಹತ್ತರ ಸಾಧನೆಗೈದ ಜ್ಯೋತಿ ಸುರೇಖಾ ವೆನ್ನಾಂ ಅವರನ್ನು ಅಭಿನಂದಿಸಿದ ಪ್ರಧಾನ ಮಂತ್ರಿಗಳು

Posted On: 07 OCT 2023 8:33AM by PIB Bengaluru

ಏಷ್ಯನ್‌ ಕ್ರೀಡಾಕೂಟದ ಕಾಂಪೌಂಡ್‌ ವಿಭಾಗದ ಆರ್ಚರಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಮಹತ್ತರ ಸಾಧನೆ ಮಾಡಿರುವ ಜ್ಯೋತಿ ಸುರೇಖಾ ವೆನ್ನಾಂ ಅವರನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಈ ಸಂಬಂಧ ಪ್ರಧಾನ ಮಂತ್ರಿಗಳು ʼಎಕ್ಸ್‌ʼ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪೋಸ್ಟ್‌ ಮಾಡಿದ್ದು,

"ಭಾರತಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ! ಏಷ್ಯನ್‌ ಕ್ರೀಡಾಕೂಟದ ಕಾಂಪೌಂಡ್‌ ವಿಭಾಗದ ಆರ್ಚರಿ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತರಾದ ಜ್ಯೋತಿ ಸುರೇಖಾ ವೆನ್ನಾಂ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಸಮರ್ಪಣಾ ಮನೋಭಾವ ಹಾಗೂ ಪ್ರತಿಭಾ ಕೌಶಲ್ಯವು ಭಾರತದ ಹೆಮ್ಮೆಯನ್ನು ಹೆಚ್ಚಿಸಿದೆ,ʼʼ ಎಂದು ಬಣ್ಣಿಸಿದ್ದಾರೆ.

 

***

 

 



(Release ID: 1965472) Visitor Counter : 68