ಪ್ರಧಾನ ಮಂತ್ರಿಯವರ ಕಛೇರಿ

ಲೋಕಸಭೆಯಲ್ಲಿ ನಾರಿ ಶಕ್ತಿ ವಂದನ್ ಅಧಿನಿಯಮ ಕುರಿತು ಪ್ರಧಾನಿಯವರ ಭಾಷಣದ ಅನುವಾದ

Posted On: 21 SEP 2023 12:06PM by PIB Bengaluru

ಮಾನ್ಯ ಸ್ಪೀಕರ್ ಸರ್,

ನನಗೆ ಮಾತನಾಡಲು ಅನುಮತಿ ಮತ್ತು ಸಮಯವನ್ನು ನೀಡಿದ್ದಕ್ಕಾಗಿ ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ.

ಮಾನ್ಯ ಸ್ಪೀಕರ್ ಸರ್,

ನಾನು ಕೇವಲ 2-4 ನಿಮಿಷಗಳನ್ನು ತೆಗೆದುಕೊಳ್ಳಲು ಬಯಸುತ್ತೇನೆ. ಭಾರತದ ಸಂಸದೀಯ ಪಯಣದಲ್ಲಿ ನಿನ್ನೆ ಒಂದು ಸುವರ್ಣ ಕ್ಷಣ. ಈ ಸದನದ ಎಲ್ಲಾ ಸದಸ್ಯರು, ಎಲ್ಲಾ ಪಕ್ಷಗಳ ಸದಸ್ಯರು ಮತ್ತು ಎಲ್ಲಾ ಪಕ್ಷಗಳ ನಾಯಕರು ಕೂಡ ಆ ಸುವರ್ಣ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಸದನದ ಒಳಗಿರಲಿ, ಹೊರಗಿರಲಿ ಇವರೆಲ್ಲರೂ ಸುವರ್ಣ ಸಂಭ್ರಮಕ್ಕೆ ಅರ್ಹರು. ಆದ್ದರಿಂದ, ಇಂದು ನಿಮ್ಮ ಮೂಲಕ, ಅತ್ಯಂತ ಮಹತ್ವದ ನಿರ್ಧಾರವಾಗಿದೆ ಮತ್ತು ರಾಷ್ಟ್ರದ ಮಾತೃಶಕ್ತಿಗೆ ಹೊಸ ಶಕ್ತಿಯನ್ನು ಒದಗಿಸಿದೆ ಎಂದು ನಾನು ಹೇಳಲು ಬಯಸುತ್ತೇನೆ. ನಾವು ಇಂದು ರಾಜ್ಯಸಭೆಯಲ್ಲಿ ಅಂತಿಮ ಹಂತವನ್ನು ಪೂರ್ಣಗೊಳಿಸಿದ ನಂತರ, ನಿನ್ನೆಯ ನಿರ್ಧಾರದ ನಂತರ, ರಾಷ್ಟ್ರದ ಮಾತೃಶಕ್ತಿಯ ಮನೋಧರ್ಮದಲ್ಲಿ ಬದಲಾವಣೆ ಮಾಡಿ ಆತ್ಮವಿಶ್ವಾಸ ಹೆಚ್ಚಿಸಿ, ಇದು ದೇಶವನ್ನು ಹೊಸತನದತ್ತ ಕೊಂಡೊಯ್ಯುವ ಅನೂಹ್ಯ, ಅಪ್ರತಿಮ ಶಕ್ತಿಯಾಗಿ ಹೊರಹೊಮ್ಮುತ್ತದೆ. ಸಭಾನಾಯಕನಾಗಿ, ಈ ಪವಿತ್ರ ಕಾರ್ಯಕ್ಕಾಗಿ, ನಿಮ್ಮ ಬೆಂಬಲ ಮತ್ತು ಅರ್ಥಪೂರ್ಣ ಚರ್ಚೆಗಳಿಗಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಮತ್ತು ಪ್ರಾಮಾಣಿಕ ಅಭಿನಂದನೆಗಳು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ಎಲ್ಲರಿಗೂ ನಮಸ್ಕಾರ!

ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.

ಹಕ್ಕುಸ್ವಾಮ್ಯ: ಇದು ಪ್ರಧಾನಿ ಭಾಷಣದ ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

****
 



(Release ID: 1960332) Visitor Counter : 64