ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ತೆಲುಗು, ಸಂಸ್ಕೃತ ವಿದ್ವಾಂಸ ಶ್ರೀ ಕಂಡ್ಲಕುಂಟ ಅಲಹಾ ಸಿಂಗರಾಚಾರ್ಯುಲು ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 14 AUG 2023 9:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ತೆಲುಗು, ಸಂಸ್ಕೃತ ವಿದ್ವಾಂಸ ಶ್ರೀ ಕಂಡ್ಲಕುಂಟ ಅಲಹಾ ಸಿಂಗಾರಾಚಾರ್ಯುಲು ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸರಣಿ ಟ್ವೀಟ್ ಗಳಲ್ಲಿ, ಪ್ರಧಾನಮಂತ್ರಿ ಕಚೇರಿ ಸಂತಾಪ ತಿಳಿಸಿದೆ;

"ಶ್ರೀ ಕಂಡ್ಲಕುಂಟ ಅಲಹಾ ಸಿಂಗಾರಾಚಾರ್ಯರ ನಿಧನದಿಂದ ನನಗೆ ತೀವ್ರ ದುಃಖವಾಗಿದೆ. ಸಂಸ್ಕೃತ ಮತ್ತು ತೆಲುಗು ಭಾಷೆಗಳ ಬಗ್ಗೆ ಅವರ ಉತ್ಸಾಹವು ಅವರ ಬರಹಗಳಲ್ಲಿ ಪ್ರತಿಬಿಂಬಿತವಾಯಿತು. ಅವರ ಅಪಾರ ಜ್ಞಾನ ಸಂಪತ್ತಿಗಾಗಿ ಅವರು ಹೆಚ್ಚು ಗೌರವಿಸಲ್ಪಟ್ಟರು. ಅವರ ಕುಟುಂಬ ಸದಸ್ಯರು ಮತ್ತು ಹಿತೈಷಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ: ಪ್ರಧಾನಿ @narendramodi"

"ಶ್ರೀ ಕಂಡ್ಲಕುಂಟ ಅಲಹಾ ಸಿಂಗರಾಚಾರ್ಯುಲು ಅವರ ನಿಧನದಿಂದ ದುಃಖವಾಗಿದೆ. ಸಂಸ್ಕೃತ ಮತ್ತು ತೆಲುಗು ಭಾಷೆಗಳ ಬಗ್ಗೆ ಅವರ ಉತ್ಸಾಹವು ಅವರ ಕೃತಿಗಳಲ್ಲಿ ಪ್ರತಿಬಿಂಬಿತವಾಗಿದೆ. ಅವರ ಜ್ಞಾನ ಮತ್ತು ಬುದ್ಧಿವಂತಿಕೆಗಾಗಿ ಅವರು ತುಂಬಾ ಗೌರವಿಸಲ್ಪಟ್ಟರು. ಅವರ ಕುಟುಂಬ ಮತ್ತು ಹಿತೈಷಿಗಳೊಂದಿಗೆ ನನ್ನ ಸಂತಾಪಗಳು. ಓಂ ಶಾಂತಿ: ಪ್ರಧಾನಿ @narendramodi"

***

 



(Release ID: 1949271) Visitor Counter : 76